ಪುಟ:ರಾಣಾ ರಾಜಾಸಿಂಹ.djvu/೧೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೯] AAAAAAAAAAAAA 1 / 4 ಇwn ಶತ್ರುಗಳಮೇಲೆ ತೋರಿಸಿದ ದಯ ೧೦೭ ೧೧೧ ೧೧ nannAn/ Ann Av 11A ವ್ಯಾಕುಲವಾದ ಮೊಗಲಸೇನೆಯು ಪರ್ವತದ ಮೇಲೆ ಹತ್ತುವದಕ್ಕೆ ಯತ್ತಿ ಸುತ್ತಿತ್ತು, ಆದರೆ ಅದು ಅವರಿಗೆ ಅಸಂಭವವಾಗಿತ್ತು ಸೇನೆಯ ಲ್ಲವೂ ತಳಮಳ ಗೊಳ್ಳುತ್ತಿತ್ತು, ಈ ಸ್ಥಿತಿಯನ್ನು ದಯಾರ್ದೃಹೃದಯ ನಾದ ರಾಣಾನು ಸುಮ್ಮನೆ ನೋಡದಾದನು ಆತನು ಜಯಸಿಂಹನನ್ನು ಕರೆದು-“ ಜಯಸಿಂಹ, ಹ್ಯಾಗಾದರೂ ಆತನು ಬಾದಶಹನು, ಈಹೊತ್ತು ಇಡೀಹಿಂದುಸ್ತಾನದ ಮೇಲೆ ಆತನ ಸ್ವಾಮಿತ್ವವು, ಆತನ ಹಾಗು ಬೇಗ ಮೃರ ಈಭಯಂಕರ ಸ್ಥಿತಿಯನ್ನು ಕಂಡು ನನಗೆ ಬಹಳ ಕಡಕೆನಿಸುತ್ತದೆ. - ಜಯ“ ಈ ಯಾವತ್ತು ಆನೆ ಕುದುರೆ, ಒಂಟಿ ಮನುಷ್ಯರು ಇಲ್ಲಿ ಅನ್ನ ನೀರಿಲ್ಲದೆ ಸತ್ತು ಹೋದರೆ, ಆಶವಗಳ ಕೊಳೆತ ದುರ್ಗಂಧ ದಿಂದ ಉದೇಪುರಕ್ಕೆ ಹಾನಿತಟ್ಟಬಹುದು, ಆದ್ದರಿಂದ ಇವರನ್ನು ಇಲ್ಲಿಸಾ ಯಗೊಲ್ಲುವದು ಯೋಗ್ಯವಲ್ಲ. ರಾಣಾ-ಹೌದು, ನನಗಾದರೂ ಹಾಗೇ ತೋರುತ್ತದೆ. ಯು ದ್ದದಲ್ಲಿ ಸಾವಿರಾರು ಜನರನ್ನು ಕೊಲ್ಲುವದು ಸ್ವಲ್ಪವೂ ಮನಸಿಗೆ ಸಂ ಕೋಚವೆನಿಸುವದಿಲ್ಲ ಆದರೆ ಅನ್ನವಿಲ್ಲದೆ ಸಾಯಗೊಲ್ಲುವದು ಅತ್ಯಂ ತನಿಂದ್ಯವಾದದ್ದು ಮೊಗಲರ ಬಗ್ಗೆ ನನಗೆ ದಮಬರುತ್ತದೆ, ಆದ್ದರಿಂದ ಇದಕ್ಕೆ ನಾವು ಯಾವ ಉಪಾಯವನ್ನು ಮಾಡಬೇಕು? ಜಯ-'ಮಹಾರಾಜ, ನಾನು ನಿಮಗೆ ಯಾವ ಒಪ್ಪಿಗೆ ಯನ್ನು ಹೇಳಲಿ? ಕ್ಷುದ್ರ ಮನುಷ್ಯನಾದ ನನಗೆ ಏನುತಿಳಿಯುತ್ತದೆ? ಆದರೆ ತಹ ಮಾಡಿಕೊಳ್ಳಲಿಕ್ಕೆ ಇದೇ ಯೋಗ್ಯಸಮಯವು, ಮೊಗಲರು ಹಸಿದ ಹೊತ್ತಿನಲ್ಲಿ ಬಲು ಮೆತ್ತಗಿರುವರು. ಈ ಹೊತ್ತಿನಲ್ಲಿ ಒಪ್ಪಂದಕ್ಕೆ ಒಪ್ಪಿದಷ್ಟು ಬೇರೆ ಯಾವಕಾಲದಲ್ಲಿಯ ಒಪ್ಪಲಾರರು, ತಾವು ಪ್ರಧಾನ ಸೇನಾಪತಿ ಮೊಲಾದ ಅಧಿಕಾರಸ್ಥರನ್ನು ಕರೆಸಿಕೊಂಡು ಅವರ ಅನುಮ ತಿಯನ್ನು ಕೇಳಬೇಕೆಂದು ಬೇಡಿಕೊಳ್ಳುತ್ತೇನೆ, ನನ್ನ ಅಲ್ಪ ಮತಿಗೆ ಇಷ್ಟು ಮಾತ್ರತಿಳಿಯುತ್ತದೆ.”