ಪುಟ:ರಾಣಾ ರಾಜಾಸಿಂಹ.djvu/೧೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೨] | ರಾಜಸಿಂಹನ 'ಹಾಯ ೧೭೧ ರಾಜಸಿಂಹ- ಕುಮಾರ ಪ್ರತಾಪ, ನಿಮ್ಮಂಧ ವೀರರು ನನಗೆ ಸಹಾಯಕ್ಕಿದ್ದ ಮೇಲೆ ಈಶ್ವರನು ನಮಗೆ ನಿಶ್ಚಯವಾಗಿ ಜಯವನ್ನು ಕೊಡುವನು ರಾಣಿಯವರನ್ನು ಒಳಗೆ ಕರೆಯಿರಿ ” ಎಂದು ಹೇಳಿ ದೊಡನೆಯೆ ಮುಖವನ್ನು ಕಪ್ಪನೆಯ ವಸ್ತ್ರದಿಂದ ಆಚ್ಛಾದಿಸಿಕೊಂಡಿರುವ ರಾಣಿಯವರು ಬಂದು ನಿಂತರು ಅವಳನ್ನು ಯೋಗ್ಯ ಆಸನದ ಮೇಲೆ ಕುಳ್ಳಿರಿಸಿದ ಮೇಲೆ ರಾಜಸಿಂಹನು ರಾಣಿಯವರೇ, ನೀವು ರಜಪೂತ ಸ್ವಾನವನ್ನು ಮೊಗಲರ ಬಲುಮೆಯೊಳಗಿಂದ ಬಿಡಿಸಿಕೊಳ್ಳುವದಕ್ಕೆ ಕೈ ಕೊಂಡ ಉದ್ಯೋಗದಿಂದ ನನಗೆ ಅತ್ಯಂತ ಅಭಿಮಾನವೆನಿಸುತ್ತದೆ. ನಮ್ಮಂಧ ಪುರುಷರು ಅಂಧ ಮಹತ್ಕಾರ್ಯಕ್ಕೆ ಧೈರ್ಯ ಗೊಳ್ಳಲೊಲ್ಲೆವು ನೀವು ಅಗ್ರಗಣ್ಯರಾಗಿ ಆ ಕಾರ್ಯವನ್ನು ಸ್ವೀಕರಿಸಿ ಒರೆಬಾಯಿಮಾತಿ ನಿಂದಲ್ಲದೆ, ಕೃತಿಯಿಂದ ಮಾಡಿ ತೋರಿಸುತ್ತಿರುವಿರಿ ಅಂದಮೇಲೆ ನಮ್ಮಂಧವರಿಗೆ ಎಷ್ಟು ಅಭಿಮಾನವೆಸಿಸಬೇಡ ? ಮೊಗಲರ ಕುನ್ನಿಗ ೪ಾಗಿ ದಾಸತ್ವವನ್ನು ಸ್ವೀಕರಿಸಿ ಗುಲಾಮರಂತೆ ವರ್ತಿಸುತ್ತಿರುವಂಧ ರಜಪೂತ ಕುಲಾಂಗಾರರಿಗೆ ಇದು ಉತ್ತಮವಾದ ಮೇಲುಪಂಕ್ತಿ ಯಲ್ಲವೇನು ? ” - ರಾಣಿ ಮಹಾರಾಜರೇ, ತಮ್ಮ ಕೃತಿಯು ಅವರ್ಣನೀಯ ವಾದದ್ದು ನಮ್ಮ ವೀರರು ತಮ್ಮ ದೇಶಾಭಿಮಾನದ ಆವೇಶದ ಪಾಸಂ ಗಕ್ಕೆ ಸಹ ಹತ್ತುವಂತಿಲ್ಲ ಪರುಷನೆ ಆಗಲಿ, ಸ್ತ್ರೀಯ ಆಗಲಿ ಧರ್ಮ ಹಿತದ ಕಾರ್ಯಕ್ಕೆ ಉಪಯೋಗ ಬೀಳುವದು ಒಳಿತಾದದ್ದು.' ರಾಜ- ನಾನು ಧನ್ಯನಾದೆನು ಪ್ರತಾಪರಾಯಾ, ನಿನ್ನೆ ಸೇನೆಯ ಎರಡುಸಾವಿರ ಸವಾರರನ್ನು ತಕ್ಕೊಂಡ, ವಿಕ್ರಮಸಿಂಹನೊಡ ಗೊಂಡು ಹೋಗಿ ದಿಲೇರಖಾನನನ್ನು ಗೊತ್ತಿಗೆ ಹಚ್ಚುವ ಉತ್ತಮ ಕೆಲಸ ವನ್ನು ನಿನಗೆ ನೇಮಿಸುತ್ತೇನೆ ?' “ ಅಪ್ಪಣೆ ?” ಎಂದು ವಿಕ್ರಮಸಿಂಹನೂ, ಪ್ರತಾಪಸಿಂಹನೂ ಕಾರ್ಯಸಿದ್ಧರ್ಧವಾಗಿ ಹೊರಟುಹೋದರು | Haway