ಪುಟ:ರಾಣಾ ರಾಜಾಸಿಂಹ.djvu/೨೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ಳL ರಣ ರಾಜಸಿಂಹ (ಪಕರಣ ತಾಯಿ ತಂದೆಗಳಿಗೆ ಶೋಭಿಸುವಂಧವುಗಳಿದ್ದವು. ಹೀಗಿದ್ದು ತಿಳಿಯಬಾರ ದೆಂದರೆ ನನ್ನ ದುರ್ಭಾಗ್ಯವಲ್ಲ ವೇನು ? ಅಪ್ಪ ಅವ್ವ ಇನ್ನು ಮೇಲೆ ಮಾತ್ರ ನನ್ನನ್ನು ಅಗಲಬೇಡಿರಿ. ) ತಪಸ್ವಿನಿ-ಮಗಳೆ, ಇನ್ನು ಮೇಲೆ ನಿನ್ನನ್ನು ಬಿಡುವದಿಲ್ಲ' ಎಂದು ಪುನಃ ಆಲಿಂಗಿಸಿದಳು. ಇಷ್ಟರಲ್ಲಿ ಪ್ರತಾಪಸಿಂಹನು ಅಲ್ಲಿಗೆ ಬಂದನು. ಇದೆಲ್ಲ ವನ್ನು ಕಂಡು, ಆಶ್ಚರ್ಯಚಕಿತನಾದನು ರಾಣಿಯು ತಟ್ಟನೆ-ಪ್ರತಾಪರಾಯಾ ಇವರನ್ನು ನೀನು ಗುರ್ತಿಸಿದೆಯೊ? ಪ್ರತಾಪ_“ಹೀಗೆಂದರೇನು? ಗುರು ವರ್ಯ ಪರಮಹಂಸರನ್ನೂ ಮಾತಾ ತಪಸ್ಸಿನಿಯನ್ನೂ ಪುನಃ ಬೇರೆ ಗುರ್ತಿ ಸಬೇಕಾಗಿದೆಯೊ? ? ಪರಮಹಂಸ_“ಮಗನೆ, ನಾನು ಮೊದಲಿನ ಪರಮಹಂಸನಲ್ಲ. ಈಹೊತ್ತಿನಿಂದ ನಾನು ವೀರಪುರದ ರಾಕುರ ಚಾಮುಂಡರಾಯ, ತಪಸ್ವಿ ನಿಯು ನನ್ನ ಧರ್ಮಪತ್ನಿ ಯು, ಮಹಾರಾಣಿಯು ನನ್ನ ಮಗಳಾದ ಚಂ ಜಕಕಲಿಳಿಯು, ೨ ಪ್ರತಾಪ-ಹಾಗಾದರೆ ಸ್ವಾಮಿಾ, ಈವರೆಗೆ ಇದನ್ನು ಗುಪ್ತ ವಿಡಲಿಕ್ಕೇನು ಕಾರಣ? " ಚಾಮುಂಡರಾಯ-“ಕಾರಣವು ಮಹತ್ವವಾದದ್ದು, ಅಂತೇ ಈವರೆಗೆ ಗುಪ್ತವಾಗಿ ಇಟ್ಟಿದ್ದೆನು ಔರಂಗಜೇಬನಸೇನಾಪತಿಯಾದ ಜಯ ಸಿಂಹನು ನಮ್ಮ ವೀರಪುರದ ಮೇಲೆ ಹಲ್ಲಾ ಮಾಡಿ ನಮ್ಮನ್ನು ದೇಶದಮೇಲೆ ಆಟ್ಟಿದನು ನನ್ನ ಹೆಂಡತಿಯನ್ನೂ ಮಗಳನ್ನೂ ಅಗಲಿಸಿದನು, ಅದಕ್ಕಾಗಿ ಹೊತ್ತು, ಸಾಧಿಸಿ ಸೇಡು ತೀರಿಸಿಕೊಳ್ಳಬೇಕೆಂದು ಸಂಕಲ್ಪವನ್ನು ಮಾಡಿ ದೆನು. ಸಂಕಲ್ಪದಂತ ಕಾರ್ಯವನ್ನು ಆರಂಭಿಸಿದೆನು, ಆಕಾಲಕ್ಕೆ ಈ ನನ್ನ ಕನ್ನೆಯು ಆಕಸ್ಮಾತಾಗಿ ಭೆಟ್ಟಿಯಾದಳು. ಇವಳು ಸಣ್ಣವಳಿದ್ದದರಿಂದ ನನ್ನ ಗುರ್ತು ಇವಳಿಗೆ ಹತ್ತಲಿಲ್ಲ. ನಾನು ಪ್ರೀತಿಯ ನನ್ನ ಮೋಹಕ ಆಯಂದರಿತು ಕೊಂಡೆನು ಆಮೇಲೆ ನನ್ನ ಒಳಿಯಲ್ಲಿಟ್ಟುಕೊಂಡು ಈಕ