೪೬
ರಾಮಚಂದ್ರಚರಿತಪುರಾಣಂ
ಯ ಮೊಗಸಾಲೆಯೊಳಿಕ್ಕಿದ ಮಣಿಮಯಾಸನಮನಲಂಕರಿಸಿ ಕರ್ಣಪೂರ ಪಾರಿಜಾತ
ಸ್ತಬಕ ಪರಿಮಳಕ್ಕೆಳಸಿ ಬಳಸುವೆಳದುಂಬಿಯ ಕಳರವಮನಾಲಿಸುತಿರ್ಪುದುಮಾ
ಸಮಯದೊಳ್---
ಮ|| ನಯನೋತ್ಸಾಹಮನಿತ್ತು ದೇಹ ರುಚಿಯಿಂದೆಯ್ತಂದನಾಕಾಶ ಗಂ।
ಗೆಯ ನೀರಾನಿಸನೆಂಬಿನಂ ದಶರಥ ಕ್ಷೋಣೀಶನಾಸ್ಥಾನ ಭೂ||
ಮಿಯನಾ ರದಮಾರ್ಗದಿಂದಿರಿದು ಸನ್ಮಾರ್ಗಕ್ಕೆ ಮೆಯ್ಯಾರದಿ
ನಯಮಂ ಸಾರದನಾವ ಕಾಳೆಗದೊಳಂ ಕಣ್ಮರದಂ ನಾರದಂ||೧೮||
ಕಂ|| ಬಿಸಸೂತ್ರದ ಕಟಸೂತ್ರಂ,
ಪೊಸದುಗುಲದ ಕೋವಣಂ ಕಮಂಡಲು ರಾರಾ||
ಜಿಸೆ ದಂಡಪಾಣಿ ಪೊಕ್ಕಂ
ಕಿಸುರಳಿತಿಪಂ ಪಿಸುಣ ಪಸರಿಗಂ, ನೃಪಸಭೆಯಂ||೧೯||
ಅ೦ತಾ ನಾರದಂ ನಭೋಮಂಡಲದಿ೦ ಸಭಾಮಂಡಲಕ್ಕವತರಿಸೆ---
ಕಂ||ಇದಿರೆಳ್ದಿಚ್ಛಾಕಾರಮ
ನುದಾತ್ತನೇನಿತ್ತು ಮಾಣ್ದನೇಕಾಂಚನ ಪೀ||
ಠದೊಳಿರಿಸಿ ಮುಕುಳಿತಾಂಜಲಿ
ಸದರ್ಭ ಸಾಕ್ಷತಮನರ್ಘ್ಯಪಾದ್ಯಮನಿತ್ತಂ||೨೦||
ಬಂದ ಬರವಾವುದೀ ಬರ
ವಿಂದಂ ಚರಿತಾರ್ಥನಾದೆನಾನೆಲ್ಲಿಂದಂ||
ಬಂದಿರೆನೆ ನೃಪತಿ,ನಾರದ
ನೆಂದಂ ದಶನಾಂಶು ಕೆದರೆಚಂದ್ರಾತಪಮಂ.||೨೧||
ಆನೀ ಜಂಬೂದ್ವೀಪದ ಪೂರ್ವವಿದೇಹದ ಪುಂಡರೀಕಿಣೀಪುರದ ಸೀಮಂ
ಧರಸ್ವಾಮಿಗಳ ಪರಿನಿಷ್ಕ ಮಣ ಕಲ್ಯಾಣ ವಿಭೂತಿಯಂ ನೋಡಿ ಬಂದೆನೆಂದು ಸಭೆ
ಯಂ ಕಣ್ಸನ್ನೆಯಿಂ ತೊಲಗಿಸಿ ದಶರಥಂಗೆ ಕಟ್ಟಿಕಾಂತದೊಳಿಂತೆಂದಂ---
ಉ || ಲಂಕೆಗೆ ಪೋಗಿ ಶಾಂತಿ ಜಿನಭಕ್ತಿಯೊಳಾಂ ಸ್ಮರ ದಾನದಂತಿ ವ|
ಜ್ರಾಂಕುಶ ದರ್ಶನ ಸ್ತವನದಿ೦ಚರಿತಾರ್ಥನೆನಾದೆನಾಗಿ ವೀ||
ತಾಂಕುಶನಪ್ಪ ರಾವಣನೊಳಂ ನೆರೆದೀನುಡಿಗೇಳ್ದು ನಾಡೆಯುಂ|
ಶಂಕೆಯೊಳೊಂದಿ ಬಂದೆನರಿಪಲ್ಬೆರತೇಂ ಪಿಆತೇ೦ ನಿಮಗಾ ಪ್ರಪಂಚಮಂ||೨೨||