ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೭೪

ರಾಮಚಂದ್ರಚರಿತಪುರಾಣಂ

ಮ||ಸ್ರ|| ಧನಮಂ ಮರ್ಯಾದೆಯಿಂದಾರ್ಜಿಸಿ ವಿಷಯಸುಖಾಸ್ವಾದನಂ ದೋಷ ನಿಷ್ಪಾ|
         ದನಮಲ್ತೆಂಬಂತೆ ಚಿತ್ತಕ್ಕೊದವಿಸೆ ಪದೆಪಂ ಭಾರತೀ ಹಂಸಿ ವಕ್ತ್ರಾ||
         ಬ್ವಿನಿಯೊಳ್ ನಾನಾವಿಧಂ ನರ್ತಿಸೆ ಹಿಮಕರ ಭಾಸ್ವದ್ಯಶೋ ವಲ್ಲಿಗಾಲಂ|
         ಬನಮಂಭೋರಾಶಿ ವೇಲಾವನಮೆನೆ ನೆಗಳ್ದಿಂ ಭಾರತೀಕರ್ಣಪೂರಂ ॥೧೬೧॥
           
           ಇದು ಪರಮ ಜಿನಸಮಯ ಕುಮುದಿನೀ ಶರಚ್ಚಂದ್ರ ಬಾಲಚಂದ್ರ
              ಮುನೀಂದ್ರ ಚರಣನಖಕಿರಣ ಚಂದ್ರಿಕಾಚಕೋರ ಭಾರತೀ
                 ಕರ್ಣಪೂರ ಶ್ರೀಮದಭಿನವಪಂಪ ವಿರಚಿತಮಪ್ಪ
                     ರಾಮಚಂದ್ರ ಚರಿತ ಪುರಾಣದೊಳ್
                          ಕುಮಾರೋದಯವರ್ಣನಂ
                              -ತೃತೀಯಾಶ್ವಾಸಂ-