ಪುಟ:ರಾಮಚಂದ್ರ ಚರಿತ ಪುರಾಣಂ.djvu/೨೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸಪ್ತಾಶ್ವಾಸಂ

೧೩೫

ಈ ಖಚರ ಪ್ರಭು ಪ್ರಭಾಮಂಡಲನ ಪೋದ ಭವದೊಳಾದ ವೃತ್ತಾಂತಮುಮ
ನೀಭವದೊಳಾದ ಸೀತಾಪ್ರಪಂಚಮುಮಂ ಕೇಳು ತಿಳಿದದುವೆ ನಿರ್ವಹಕಾರಣ
ಮಾಗೆ ದೀಕೈಗೊಂಡನೆಂಬುದುಂ ಪ್ರಭಾಮಂಡಲಂ ವಿನಯ ವಿನಮಿತ ಶಿರಸ್ಸರೋಜ
ನಾಗಿ-

ಕಂ || ಇಂದುಗತಿ ಖಚರಪತಿ ಪಿರಿ
ದೊ೦ದನೆನಗೆ ಮಾಲ್ಪುದಂ ಬೆಸಸಿಂ ನೀ ||
ಮೆಂದು ಮುಕುಳಿತ ಕರಂ ಮುನಿ
ವೃಂದಾರಕರಂ ಕುಮಾರಕಂ ಬೆಸಗೊಂಡಂ || ೩೨ ||

ಅಂತು ಬೆಸಗೊಳ್ಳುದುವವರಿಂತೆಂದು ಬೆಸಸಿದರ್ : ಧಾಮ ನಾಮಧೇಯ
ಗ್ರಾಮದೊಳಿರ್ಪ೦ ಧರಾಮರಂ ವಿಮುಂಚಿಯೆಂಬನಾತನ ಕುಲವಧು ವಸುಮತಿ
ವೆಸರವಳವರ್ಗತಿಭೂತಿಯೆಂಬ ತನಯನಾದಂ-

ಕಂ || ಆತಂಗೆ ಸರಸೆಯೆಂಬ
ಪಾತಕಿ ಕುಲವನಿತೆಯೆನಿಸಿ ಕಯನೆಂಬ ಮಹಾ ||
ಪಾತಕನೊಳ್ ಪುದುವಾಳ್
ಜಾತಿಯ ನೀತಿಯ ನೆಗಟ್ಟಿ ನೆಲೆಗಿಡುವಿನೆಗಂ || || ೩೩ ||

ಆಯುರ್ದಶೆಯಗುಂ ನರ
ಕಾಯುಷ್ಯಂ ಕಟ್ಟುಗುಂ ಪರಾಭವಮುಕ್ಕುಂ ||
ಶ್ರೀಯುಗುಮೆನ್ನದನ್ಯ
ಪ್ರೇಯಸಿಯಂ ಸರಸೆಯಂ ಕಯಂ ಕಳ್ಳುಝಂ || ೩೪ ||


ಅ೦ತಾಕೆಯಂ ಕಯಂ ಕಸವರಂಬೆರಸುಯ್ಯುದು ಅತಿಭೂತಿ ಮತಿವಿಕಲ
ನಾಗಿ-

ಕಂ | ಸುಡು ಪೊಲ್ಲಳನೆನ್ನದೆ ತ
ನೊಡಮೆಯ ಕೇಡಿಂಗಮವಳ ಪೋಗಿಂಗಂ ಆನಿ ||
ರ್ಗಡಿ ಬೆನ್ನೊಳಸಿ ಪೋದಂ
ಕಡು ಮೋಹಿತರಾರುಮುಚಿತಮಂ ನೆನೆದಪರೇ || ೩೫ ||


1. ಮನುವತಿ. ಚ.

2. ನಿಳಡಿ. ಚ. ; ಸಿಗ್ಗಡಿ ಗ ಘ ; ನಿರ್ಗಡೆ. ಕ. ಖ.