ಪುಟ:ವತ್ಸರಾಜನ ಕಥೆ.djvu/೧೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೬ --- ಕರ್ಣಾಟಕ ಕಾವ್ಯಕಲಾನಿಧಿ, - ಬದಿಂದ ಬಂದಿರುವನಾದುದರಿಂದ ಅವನಲ್ಲಿ ಎನಗೆ ಬಲವತ್ತರವಾದ ಅಭಿಮಾನವು ಉಂಟಾಗಿರುವುದು ?” ಎಂದು ನುಡಿಯಲು ; ಅವಳು- ಎಲೈ ದೇವಿಯೇ, ಸಮಸ್ಯ ಸ್ತ್ರೀಯರಿಗೂ ತೌರುಮನೆಯಲ್ಲಿ ಅಭಿಮಾನವಿರುವುದು ಯುಕ್ತವಾಗಿರುವುದು ೨೨ ಎಂದು ನುಡಿಯಲು ; ದೇವಿಯು ರಾಯನಿರುವ ಸ್ಥಾನವಂ ಕುರಿತು ಬಂದು ಎಲ್ಲೆ ರಾಜೇಂದ್ರನೇ, ಜಯವುಳ್ಳವನಾಗು ?” ಎಂ ದು ನುಡಿದು ನಮಸ್ಕಾರವಂ ಗೆಯು ನಿಂದಿರಲು; ರಾಯನು ಸಾಗರಿಕೆಗೆ ಮಾಡಿದ ಹಿಂಸೆಯನ್ನು ಸ್ಮರಿಸಿ, ಒಂದು ಕ್ಷಣಮಾತ್ರ ವಾಸವದತ್ತೆಯ ವದನನಂ ನೋಡದೆ, ಏನೋ ಒಂದು ವಸ್ತುವಂ ನೋಡುವನಂತೆ ಮುಖವನ್ನು ತಿರುಗಿಸಿರಲು ; ವಿದೂಷಕನು ರಾಯನ ಅಭಿಪ್ರಾಯವು ತಿಳಿದು, ( ಎಲೈ ರಾಜೇಂದ್ರನೇ, ನೀನಾಗಿ ವಾಸವದತ್ತೆಯಂ ಕರೆಯಿಸಿ ಅವಳ ಯೋಗಕ್ಷೇ ಮವಂ ಕೇಳರೆ, ಅಸಮಾನವಂ ಗೆಯುವುದು ನ್ಯಾಯವಲ್ಲ. ಮನಸ್ಸಿನಲ್ಲಿ ಎಷ್ಟು ವಿರೋಧವಿದ್ದಾಗ್ಯೂ ಮನಕೆ ಕೊರತೆಯಂ ವಿರಚಿಸಬಾರದು ಎಂದು ನುಡಿ ಯಲು ; ರಾಯನು ಅವನ ವಚನಕ್ಕೆ ಒಡಂಬಟ್ಟು, ಮುಖವಂ ತಿರುಹಿ ( ಎಲೆ ವಾಸವದತ್ತೆಯೇ, ನಿನಗೆ ಕ್ಷೇಮವೆ ? ” ಎಂದು ನುಡಿದು, ( ಈ ಐಂದ್ರಜಾಲಕನು ಬಹುವಾದ ವಿದ್ಯೆಗಳು ತನ್ನಲ್ಲಿ ಇರುವುವೆಂದು ಗರ್ವಿಸಿ ನುಡಿಯುತ್ತಿರುವನು. ಇವ ನನ್ನು ಪರೀಕ್ಷಿಸಬೇಕಾಗಿರುವುದು. ಆದುದರಿಂದ ಇಲ್ಲಿ ಬಂದು ಕುಳ್ಳಿರುವುದು ? ಎಂದು ತನ್ನ ಒತ್ತಿನಲ್ಲಿ ಕುಳ್ಳಿರಿಸಿಕೊಳ್ಳಲು ; ದೇವಿಯು ರಾಯನ ಇ೦ಗಿತವಂ ತಿಳಿದು, ಕಾಂಚನಮಾಲೆಯಂ ಕುರಿತು(ಎಲೆ ಬಾಲೆ, ರಾಯನ ನಡೆವಳಿಕೆ ಬೇರೊಂದು ಪರಿಯಾಗಿ ತೋರುತ್ತಲಿರು ವುದು. ಆದರೂ ಮುಂದೆ ಕಾರದಲ್ಲಿ ತಿಳಿಯಬೇಕು ” ಎಂದು ರಹಸ್ಯವಾಗಿ ನುಡಿಯುತ್ತಿರಲು ; ರಾಯನು- ಎಲೈ ಐಂದ್ರಜಾಲಿಕನೇ, ನಿನ್ನ ವಿದ್ಯಾ ಕೌಶಲಮಂ ತೋರಿಸು ವನಾಗು ” ಎಂದು ಅಪ್ಪಣೆಯನ್ಶಿಯಲು ; ಅವನು ನವಿಲುಗರಿಯ ಕಂತೆಯನ್ನು ವೈಯಾರದಿಂ ತಿರುಹುತ್ತ, ಇದೋ ! ಇದೋ ! ಆಕಾಶದಲ್ಲಿ ಹರಿಹರಬ್ರಹ್ಮಾದಿಗಳೂ, ದೇವಾಧಿಪತಿಯಾದ ಇಂದ್ರನೂ, ಇನ್ನೂ ಸಿದ್ದ ವಿದ್ಯಾಧರಗರುಡಗಂಧತ್ವರುಗಳೂ, ಅಪ್ಪರಸ್ತ್ರೀಯರುಗಳಿಂದೊಡಗೂಡಿ ನಾಟ್ಯಮಂ ಗೆಯ್ಯುತ್ತಿರುವರು ) ಎಂದು ನುಡಿಯಲು ; ವಿದೂಷಕನು ಆಕಾಶಮಂ ನೋಡಿ, ಕುಳಿತಿದ್ದ ಸ್ಥಾನದಿಂದೆದ್ದು ನಿಂತು, ಕೈ ಗಳಂ ಮುಗಿದುಕೊಂಡು, ಎಲೈ ರಾಜೇಂದ್ರನೇ, ಇದೋ ! ಬ್ರಹ್ಮನು ಪದ್ಮಾಸನ ದಲ್ಲಿ ಮಂಡಸಿ ತೋರುತ್ತಿರುವನು ಚಂದ್ರನ ಕಲೆಯಿಂದ ಸುಂದರನಾದ ಶಿವನು ಕೆಲಾಸದಂತೆ ಒಪ್ಪುತ್ತಲಿರುವ ವೃಷಭಾರೂಢನಾಗಿ ಪಾಶ್ವತೀಸಮೇತನಾಗಿ ಪ್ರಮ