ಪುಟ:ವತ್ಸರಾಜನ ಕಥೆ.djvu/೧೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ವತ್ಸ ರಾಜನ ಕಥೆ, - ೧೪೬ ಥಗಣಗಳಿ೦ ಪರಿವೃತನಾಗಿ ತೋರುತ್ತಲಿರುವನು, ವಿಷ್ಣುವು ಗದಾ ಚಕ್ರಾದಿಗಳಿಂದ ಶುಭವಾಗಿ ಶೋಭಿಸುತ್ತಿರುವ ನಾಲ್ಕು ತೋಳುಗಳಿ೦ದ ರಮಣೀಯನಾಗಿ ಲಕ್ಷ್ಮೀಸ ಮೇತನಾಗಿ ಪಕ್ಷಿಗಳಿಗೆಲ್ಲಾ ಸತಿಯಾದ ಗರುಡನ ಹೆಗಲನ್ನೇರಿ ರಾಜಿಸುತ್ತಿರುವನು. ದೇವಾಧಿಪತಿಯಾದ ಇಂದ್ರನು ಸಿದ್ದ ಸಾಧ್ಯ ಕಿನ್ನರ ಕಿಂಪುರುಷ ಮುಂತಾದ ದೇವರ ಣದಿಂದ ಪರಿವೃತನಾಗಿ ರಂಭೋಗ್ಯ ಶೀಮೇನಕಾ ತಿಲೋತ್ತಮೆ ಮೊದಲಾದ ಅಪ್ಪ ರಸ್ತಿಯರ ನಾಟ್ಯ ಮಂ ನೋಡುತ್ತ ನಲಿಯುತ್ತಿರುವನು ?” ಎಂದು ಅತ್ಯಾಕರ ದಿಂದ ಯುಕ್ತನಾಗಿ ನೋಡುತ್ತಿರಲು ; ರಾಯನು ಗಗನವಂ ನೋಡಿ, ಆಶ್ರವಂ ಪೊಂದಿ, ( ಭಳಿರೇ ! ಐಂದ್ರಜಾಲಿ ಕನೇ ! ನಿನ್ನ ಸಮಾನರಾದ ವಿದ್ಯಾವಂತರನ್ನು ಈ ಲೋಕದಲ್ಲಿ ಕಾಣೆನು ” ಎಂದು ಶ್ಲಾಘನೆಯಂ ಗೆಯ್ಯುತ್ತಿರುವುದರಲ್ಲೇ ವಿದೂಷಕನು ತನ್ನಲ್ಲಿ ತಾನು ಆಲೋಚಿಸಿ ಎಲೊ, ದಾಸೀಪುತ್ರನಾದ ಐಂದ್ರಜಾಲಿಕನೇ, ಈಗ ನೀನು ತೋರಿಸಿದ ಇಂದ್ರ ಚಂದ್ರ ಮುಂತಾದ ದೇವತೆಗಳಿ೦ದ ಏನು ಪ್ರಯೋಜನವು ? ಈ ರಾಯನಿಂದ ಬಹು ಮಾನವಂ ಪಡೆದು ಹೆಸರನ್ನು ಸಂಪಾದಿಸಬೇಕಾದಲ್ಲಿ ಸಾಗರಿಕೆಯನ್ನು ತೋರಿಸುವ ನಾಗು, ಇಲ್ಲವಾದಲ್ಲಿ ಅಲ್ಲಿ ನಿನಗೆ ಒಂದು ತೃಣ ಪ್ರಯೋಜನವೂ ದೊರಕಲಾ ರದು ” ಎಂದು ನುಡಿಯುತ್ತಿರಲು ; ಅಷ್ಟರಲ್ಲೇ ದ್ವಾರಪಾಲಕಿಯು ವೇಗದಿಂ ಬಂದು ರಾಯನಿಗೆ ನಮಸ್ಕಾ ರನಂ ಗೆಯ್ಯು, “ ಎಲೈ ರಾಜೇಂದ್ರನೇ, ಯೌಗಂಧರಾಯಣನು ವಿಜ್ಞಾಪನೆಯಂ ಗೆಯ್ಯುವಂತೆ ಹೇಳಿರುವುದೇನೆಂದರೆ-ಈಗ ಸಿ೦ಹಳ ದೇಶಕ್ಕೆ ಮಂತ್ರಿಯಾಗಿ ದೇವಿ ಯವರಿಗೆ ಮಾವನಾದ ವಸುಭೂತಿಯು ಬಾಭ್ರವ್ಯನೆಂಬ ಕಂಚುಕೆ ಯಿಂದೊಡಗೂಡಿ ನಿಮ್ಮ ಕಾಣಲೋಸುಗ ಬಂದಿರುವನಾದುದರಿಂದ ಸ್ವಾಮಿಯವರು ಶುಭಮುಹೂ ರ್ತದಲ್ಲಿ ಅವರನ್ನು ಕಾಣುವುದು ಯುಕ್ತವು, ನಾನು ರಾಜಕಾರಶೇಷವಂ ಸಮಾ ಪ್ರಿಯಂಗೆಯ್ಯು ಸನ್ನಿ ಧಿಯಂ ಕುರಿತು ಬರುವೆನೆಂದು ವಿಜ್ಞಾಪಿಸುವನು ?” ಎನಲು ; ಆ ವಾಕ್ಯವಂ ಕೇಳಿದ ವಾಸವದತ್ತಾ ದೇವಿಯು- ಎಲೈ ಮಹಾರಾಜನೇ, ಈ ಇಂದ್ರಜಾಲವಿದ್ಯೆಯನ್ನು ಇನ್ನೊ೦ದು ವೇಳೆಯಲ್ಲಿ ನೋಡಬಹುದು. ಈಗ ಸಿಂಹಳದೇಶದಿಂದ ಬಂದ ಮಾವನಾದ ವಸುಭೂತಿಯನ್ನು ಕಾಣುವುದು ಯುಕ್ತವಾ ಗಿರುವುದು ” ಎಂದು ನುಡಿಯಲು ; - ರಾಯನು ದೇವಿಯೇ, ನಿನಗೆ ಯಾವುದು ಸಮ್ಮತವೋ ಆ ರೀತಿಯು ಎನಗೂ ಸಮ್ಮತವೇ ಸರಿ ?” ಎಂದು, (' ಎಲೈ ಐಂದ್ರಜಾಲಿಕನೇ, ನಿನ್ನ ವಿದ್ಯೆಯನ್ನು ಇನೊ೦ದುಬಾರಿ ನೋಡುವೆವು, ಈಗ ನಿನ್ನ ಸಾಮಗ್ರಿಯಂ ತೆಗೆದುಕೊಂಡು ಪೋಗುವನಾಗು ” ಎಂದು ನುಡಿಯಲು ; ಅವನು- ಎಲ್ಯ ಸ್ವಾಮಿಯೇ, ನಿನ್ನ ಅಪ್ಪಣೆಯಾದಂತೆ ನಡೆದುಕೊಳ್ಳುವೆನು. ಆದರೂ ಇನ್ನೊಂದು ವಿದ್ಯೆಯು ಸ್ವಾಮಿ