ಶಾಪಾದಪಿ ವರಾದಪಿ!
೧೦೧
ವ್ಯಾಸ-ವಾಲ್ಮೀಕಿಯರಂಥ ಮಹಾಪುರುಷರು ತಮ್ಮ ಗ್ರಂಥರಚನೆಯಲ್ಲಿ
ಶಾಪ-ವರಗಳನ್ನು ಮುಕ್ತಹಸ್ತದಿಂದ ಬಳಸಿದ್ದಾರೆ. ಶಾಪ-ವರಗಳ ಸಂಕಲ್ಪನೆಯು
ಮಾನವನ ಪ್ರವೃತ್ತಿಗೆ ಸಂಬಂಧಿತವಾಗಿದೆ. ಇವು ಕಥೆಯಿಂದ ತೆಗೆದುಹಾಕುವಂತಿಲ್ಲ.
ಋಷಿಗಳ ಬುದ್ಧಿಯ ಕೌಶಲ್ಯದಿಂದ ಅವು ಕೃತ್ರಿಮವೆಂದೆನಿಸುವುದಿಲ್ಲ. ಕೆಲವು
ಶಾಪ-ವರಗಳನ್ನಂತೂ ಕಥೆಯಿಂದ ಬಿಟ್ಟುಕೊಡುವದು ಸುತರಾಂ ಸಾಧ್ಯವಿಲ್ಲ.
ಅವುಗಳ ಯೋಜನಕತೆಯು ಮಹತ್ತ್ವದ್ದಾಗಿದೆ. ಶ್ರೀ ಮ.ರಂ. ಶಿರವಾಡಕರ
ಎಂಬವರು ಮಹಾಭಾರತದ ಸಂದರ್ಭದಲ್ಲಿ ಈ ರೀತಿ ಬರೆದಿದ್ದಾರೆ:
“ವರ ಹಾಗೂ ಶಾಪ ಇವು ಲೇಖಕರ ಕಲ್ಪನಾವಿಲಾಸದ ಆವಿಷ್ಕೃತಿಯಾಗಿವೆ.
ಇದೊಂದು ಪ್ರಕಾರದ ಭಾಷೆಯಲ್ಲಿಯ ಅಲಂಕಾರವೆಂದೆನ್ನಬಹುದು. ಅವುಗಳ
ಉಗಮವು ಕರ್ಮವಾದದಲ್ಲಿ ಸಿದ್ಧಾಂತದಿಂದಾಗಿದೆ.೭೫ ಈ ವಿಧಾನವನ್ನು
ಸ್ವಲ್ಪಮಟ್ಟಿಗೆ ವಿವರವಾಗಿ ಅಭ್ಯಸಿಸಬೇಕು. ಕಲ್ಪನಾವಿಲಾಸ ಅಥವಾ ಅಲಂಕಾರ
ಇವುಗಳಿಂದ ಲೇಖನ ಸೌಂದರ್ಯವು ವರ್ಧಿಸುತ್ತದೆ; ಅವುಗಳ ಅಭಾವವಿದ್ದರೆ
ಸೌಂದರ್ಯ ಹಾನಿಯಾಗುತ್ತದೆ; ಆದರೆ ಅವು ಬೇರ್ಪಡಿಸದಂಥ ಭಾಗವಾಗುವುದಿಲ್ಲ. ಶಾಪ-ವರಗಳು ಯಾವಾಗಲೂ ಹೊರಗಿನವು; ಅವುಗಳನ್ನು ಸೇರಿಸಿ
ಕೊಳ್ಳಬಹುದು ಇಲ್ಲವೇ ತೆಗೆದುಹಾಕಬಹುದು; ಏಕೆಂದರೆ ಅವು ಕೃತ್ರಿಮವಾಗಿರುತ್ತವೆ. ಅಂತರಂಗದೊಡನೆ ಬೆರೆತಿರುವುದಿಲ್ಲ; ಸಾಮರಸ್ಯವನ್ನು ಹೊಂದುವದಿಲ್ಲ.
ನಿಜವಾಗಿ ಶಾಪ-ವರಗಳು ಈ ರೀತಿಯಾಗಿವೆಯೇ? ರಾಮಾಯಣದಲ್ಲಿಯ
ದಶರಥನು ಕೈಕೇಯಿಗೆ ಕೊಟ್ಟ ವರಗಳನ್ನು ತೆಗೆದುಹಾಕಬಹುದೇ? ಹಾಗೆ
ಮಾಡಿದರೆ ಕಥೆಯಲ್ಲಿ ಉಳಿಯುವದಾದರೂ ಏನು? ಬ್ರಹ್ಮದೇವನು ರಾವಣನಿಗೆ
ಕೊಟ್ಟ ವರ ಮತ್ತು ಶಾಪಗಳು ಆಲಂಕಾರಿಕವಾಗಿವೆಯೇ? ಅವುಗಳನ್ನು ಬಿಟ್ಟು
ಕೊಟ್ಟರೆ ಕಥೆಯ ಪಾಡೇನಾಗಬಹುದು? ಬ್ರಹ್ಮನ ಶಾಪದ ಭಯವು ರಾವಣನಿಗೆ
ಎಷ್ಟೊಂದಿತ್ತು ಎಂಬುದನ್ನು ಗಮನಿಸಿದ್ದೇವೆ. ಈ ಶಾಪದ ಜೊತೆ ನಲಕೂಬರನು
ಕೊಟ್ಟ ಶಾಪ ಮತ್ತು ವೇದವತಿಯ ಪ್ರತಿಜ್ಞೆ, ಇವು ಇರದಿದ್ದರೆ ಸೀತೆಯ ಶೀಲರಕ್ಷಣೆ
ಸಾಧ್ಯವಿತ್ತೆ? ಶಾಪ-ವರಗಳು ರಾಮಕಥೆಯಲ್ಲಿ ಇರದಿದ್ದರೆ ಈಗ ನಾವು ಕಾಣುತ್ತಿರುವ
ರಾಮಾಯಣವು ಇರುತ್ತಿರಲಿಲ್ಲ. ಶಾಪ-ವರಗಳು ಕರ್ಮವಾದದ ಸಿದ್ಧಾಂತದಿಂದ
ನಿರ್ಮಿತವಾಗಿರದೆ ಅವು ಜನಮಾನಸದ ಪ್ರವೃತ್ತಿಯಿಂದ, ಮಾನವನ ಸ್ವಭಾವ
ಧರ್ಮವಿಶೇಷದಿಂದ ನಿರ್ಮಿತವಾಗಿವೆ. ಮಾನವೇತರ ಶಕ್ತಿಯಲ್ಲಿ ಆತನಿಗೆ ಶ್ರದ್ಧೆ
——————
೭೫. ಹಸ್ತಿನಾಪುರ.