ಶಾಪವಾಣಿ
೧೩೭
ಆಜ್ಞಾಪಿಸಿದನು. ಅದನ್ನು ಕೇಳಿಸಿಕೊಂಡ ವಿರಾಧನು ನಮ್ರನಾಗಿ ರಾಮನಿಗೆ ಈ ರೀತಿ ನುಡಿದನು:
“ಎಲೈ ಪುರುಷೋತ್ತಮನೇ, ನಾನು ಮೂಢತನದಿಂದ ನಿನ್ನನ್ನು ಗುರುತಿಸಲಿಲ್ಲ. ಹೇ ರಾಮನೆ, ನಿನ್ನ ಜನ್ಮದಿಂದ ಕೌಸಲ್ಯೆಯು ಸುಪುತ್ರವತಿಯಾದಳು. ಆ ರಾಮನನ್ನು, ಈ ಮಹಾಭಾಗ್ಯವತಿಯಾದ ಸೀತೆಯನ್ನು, ಯಶಸ್ವಿಯಾದ ಲಕ್ಷ್ಮಣನನ್ನು ಈಗ ಗುರುತಿಸಿದ್ದೇನೆ.”- ಹೀಗೆಂದು ವಿರಾಧ ರಾಕ್ಷಸನು ತನ್ನ ಪೂರ್ವವೃತ್ತಾಂತವನ್ನು ಅರುಹಿದನು:
ಅಭಿಶಾಪದಹಂ ಘೋರಾ ಪ್ರವತಿಷ್ಟೋ ರಾಕ್ಷಸೀಂ ತನುಮ್ |
ತುಂಬರೂರ್ನಾಮ ಗಂಧರ್ವಃ ಶಪ್ತೋ ವೈಶ್ರವಣೇನ ಹಿ ॥೧೬॥
ಪ್ರಸಾದ್ಯಮಾನಶ್ಚ ಮಯಾ ಸೋsಬ್ರವೀನ್ಮಾಂ ಮಹಾಯಶಾಃ|
ಯದಾ ದಾಶರಥೀ ರಾಮಸ್ತ್ವಾಂ ವಧಿಷ್ಯತಿ ಸಂಯುಗೇ ॥೧೭॥
ತದಾ ಪ್ರಕೃತಿಮಾಪನ್ನೋ ಭವಾನ್ ಸ್ವರ್ಗಂ ಗಮಿಷ್ಯತಿ |
ಅನುಪಸ್ಥೀಯಮಾನೋ ಮಾಂ ಸ ಕ್ರುದ್ಧೋ ವ್ಯಾಜಹಾರ ಹ ॥೧೮॥
ಇತಿ ವೈಶ್ರವಣೋ ರಾಜಾ ರಂಭಾಸಕ್ತಮುವಾಚ ಹ |
ತವ ಪ್ರಸಾದಾನ್ಮುಕೋsಹಮಭಿಶಾಪತ್ಸುದಾರುನಾತ್ ॥೧೯॥
“ಈ ಭೀಕರವಾದ ರಾಕ್ಷಸದೇಹವು ಶಾಪದಿಂದ ನನಗೆ ಪ್ರಾಪ್ತವಾಗಿದೆ.
ಪೂರ್ವದಲ್ಲಿ ನಾನು 'ತುಂಬರು' ಎಂಬ ಗಂಧರ್ವನಾಗಿದ್ದೆನು. ಕುಬೇರನು ನನಗೆ
ಶಾಪವನ್ನು ಕೊಟ್ಟನು. ಶಾಪವಿಮೋಚನೆಯಾಗಬೇಕೆಂದು ನಾನು ಕುಬೇರನನ್ನು
ಪ್ರಾರ್ಥಿಸಿದೆನು. ಆಗ ಆ ಕುಬೇರನು ಈ ರೀತಿ ನುಡಿದನು:
“ದಾಶರಥೀರಾಮನು ಬಂದು ಸಂಗ್ರಾಮದಲ್ಲಿ ನಿನ್ನನ್ನು ವಧಿಸುವನು;
ಆಗ ಪುನಃ ನೀನು ಗಂಧರ್ವರೂಪವನ್ನು ತಾಳಿ ಸ್ವರ್ಗವನ್ನು ಸೇರುವೆ. ನಾನು
ರಂಭೆಯಲ್ಲಿ ಆಸಕ್ತನಾಗಿದ್ದರಿಂದ ಕುಬೇರರಾಜನ ಸೇವೆಯು ನನ್ನಿಂದ ಸರಿಯಾಗಿ
ನಡೆಯಲಿಲ್ಲ; ಆದ್ದರಿಂದ ಕೋಪಗೊಂಡು ಕುಬೇರನು ನನಗೆ ಮೇಲಿನಂತೆ
ಶಾಪವನ್ನು ಕೊಟ್ಟನು. ಕುಬೇರನ ನುಡಿಯಂತೆ ಇಂದು ನಿನ್ನ ಕೃಪೆಯಿಂದ ಈ
ಅತಿ ಭಯಂಕರ ಶಾಪದಿಂದ ಮುಕ್ತಿ ಪಡೆಯುತ್ತೇನೆ.”
ಇದು ಯಾಚಿತ ಉಃಶಾಪವಾಗಿದೆ.