ಶಾಪವಾಣಿ
೧೪೩
-ಶಕೋ ಮೇ ಬಾಹೂ ಯೋಜನಮಾಯತೌ ‖೧೩‖
ತದಾ ಚಾಸ್ಯಂ ಚ ಮೇ ಕುಕ್ಷೌ ತೀಕ್ಷ್ಣದಂಷ್ಟ್ರಮಕಲ್ಪಯತ್ |
ಸೊಹಂ ಭುಜಾಭ್ಯಾಂ ದಿರ್ಘಾಭ್ಯಾಂಸಂಕ್ಷಿಪ್ಯಾಸ್ಮಿನ್ವನೇಚರಾನ್ ‖೧೪‖
ಸಿಂಹದ್ವೀಪಮೃಗವ್ಯಾಘ್ರಾನ್ಬಕ್ಷಯಾಮಿ ಸಮಂತತಃ |
ಸ ತು ಮಾಮಬ್ರವೀದಿಂದ್ರೋ ಯದಾ ರಾಮಃ ಸಲಕ್ಷ್ಮಣಃ ‖೧೫‖
ಛೇತ್ಸ್ಯತೇ ಸಮರೇ ಬಾಹೂ ತದಾ ಸ್ವರ್ಗಂ ಗಮಿಷ್ಯತಿ ‖೧೬‖
“ಇಂದ್ರನು ನನಗೆ ಒಂದು ಯೋಜನದಷ್ಟು ದೀರ್ಘವಾದ ಬಾಹುಗಳನ್ನು
ಕೊಟ್ಟನು. ತೀಕ್ಷ್ಣ ಹಲ್ಲುಗಳುಳ್ಳ ಮುಖವನ್ನು ಉದರದಲ್ಲಿ ನಿರ್ಮಿಸಿದನು. ಆ
ದಿನದಿಂದ ಈ ಅರಣ್ಯದಲ್ಲಿ ಸಂಚರಿಸುವ ಸಿಂಹ, ಆನೆ, ವ್ಯಾಘ್ರ, ಮೃಗ, ಚಿರತೆಗಳನ್ನು
ನನ್ನ ದೀರ್ಘವಾದ ಬಾಹುಗಳಿಂದ ಹಿಡಿದು ಹಿಡಿದು ಭಕ್ಷಿಸುತ್ತಿದ್ದೇನೆ; ಅದಿರಲಿ!
'ಲಕ್ಷ್ಮಣನನ್ನು ಒಡಗೂಡಿ ರಾಮನು ಯುದ್ಧದಲ್ಲಿ ನಿನ್ನ ಭುಜಗಳನ್ನು
ತುಂಡರಿಸುವನು; ಆಗ ನೀನು ಸ್ವರ್ಗಕ್ಕೆ ಹೋಗುವೆ!' ಎಂದು ಇಂದ್ರನು ನನಗೆ
ಹೇಳಿದ್ದಾನೆ.
'ನಾನು ಅಂದಿನಿಂದ ರಾಮನ ಬರುವಿಕೆಯನ್ನು ಕಾಯುತ್ತಿದ್ದೇನೆ. ರಾಮನು
ಯಾರು ಎಂಬುದು ನನಗೆ ಗೊತ್ತಿಲ್ಲ. ಕೈಗೆ ಬಂದುದನ್ನು ಲಪಟಾಯಿಸುವ
ಕ್ರಮವನ್ನು ಕೈಕೊಂಡರೆ ಎಂದಾದರೂ ರಾಮನ ಭೇಟಿಯಾಗಬಹುದೆಂಬ ಭರವಸೆ
ನನಗಿತ್ತು. ನೀನೇ ಆ ರಾಮನೆಂದು ತಿಳಿದುಬಂದಿದ್ದರಿಂದ ನನಗೆ ಪರಮಾನಂದ
ವಾಗಿದೆ. ನನಗೆ ಅಗ್ನಿಯನ್ನು ಕೊಟ್ಟು ಉತ್ತರಕ್ರಿಯಾದಿಗಳನ್ನು ನೀನೇ ನೆರವೇರಿಸು'
ಎಂದು ರಾಮನಿಗೆ ಬಿನ್ನವಿಸಿದನು. “ದಹನವಾದ ಮೇಲೆ ನನ್ನ ಪೂರ್ವರೂಪವು
ನನಗೆ ಪ್ರಾಪ್ತವಾಗುತ್ತದೆ; ಆಗ ನಿನಗೆ ಯುಕ್ತಿಯ ಮಾತುಗಳನ್ನು ತಿಳಿಸಿ ಗೆಳೆತನವನ್ನು
ಸಾರ್ಥಕಗೊಳಿಸುತ್ತೇನೆ. ನಿನ್ನ ಹೊರತು ಯಾರಿಂದಲೂ ನನಗೆ ಸಾವು
ಬರುವಂತಿಲ್ಲ; ಆದ್ದರಿಂದ ನನ್ನ ಪ್ರಾಣ ತೆಗೆದು ನನ್ನನ್ನು ಉಪಕರಿಸು” ಎಂದು
ಕಬಂಧನು ರಾಮನಿಗೆ ಹೇಳಿದನು.
ಇಂದ್ರನು ಕಬಂಧನ ವಿಕೃತಿಯನ್ನು, ಶಾಪಕೊಟ್ಟು ಮಾಡಿರಲಿಲ್ಲ; ವಜ್ರ
ಪ್ರಹಾರದಿಂದ ಮಾಡಿರುವುದರಿಂದ ಇದಕ್ಕೆ ಶಾಪವೆಂದೆನ್ನಲಾಗದು. ಇಂದ್ರನ
ಶಾಪೋದ್ಗಾರವು ಕಂಡುಬಂದಿಲ್ಲ. ಶಾಪದ ಮುಕ್ತಿಯ ಉಲ್ಲೇಖವು ಮಾತ್ರ
ನಿಚ್ಚಳವಾಗಿದೆ.