ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
xix


ಮಾಡಿದ್ದಾರೆ. ಶಾಪ ಇಲ್ಲವೇ ವರ ಕೊಡುವಾತನಿಗೆ ಅರ್ಹತೆ, ಸಾಮರ್ಥ್ಯ
ಇರಬೇಕಾಗುತ್ತದೆ. ಶಾಪದ ಮೂಲಕಾರಣವು ಕ್ರೋಧವಿರುತ್ತದೆ; ವರ ಕೊಡುವಾತನು
ಪ್ರಸನ್ನಚಿತ್ತನಿರುತ್ತಾನೆ. ಶಾಪದ ಪರಿಣಾಮಗಳು ದುಃಖಕಾರಕವಿರುತ್ತದೆ. ವರಗಳಿಂದ
ಸಂತೋಷಕಾರಕ ಘಟನೆಗಳು ಆಗುತ್ತವೆ. ಈ ಎಲ್ಲ ಸಂಗತಿಗಳನ್ನು ವಾಲ್ಮೀಕಿ
ರಾಮಾಯಣದಿಂದ ಆಯ್ದುಕೊಂಡು ವಿಶ್ಲೇಷಿಸಿ ವಿಸ್ತಾರವಾಗಿ ಬರೆದು ಈ ಕೃತಿಗೆ
ಒಂದು ಹೊಸ ಆಯಾಮವನ್ನು ಶ್ರೀ ರ. ಭಿಡೆ ಅವರು ಸೃಷ್ಟಿಸಿದ್ದಾರೆ. ಓದುಗರ ಕೈಗೆ
ಕೊಟ್ಟಿದ್ದಾರೆ. ಈ ಪಟ್ಟಿಯಿಂದ ವಾಚಕರು ಕೂಡಲೇ ಸಂದರ್ಭಗಳನ್ನು ಅರಿತುಕೊಳ್ಳಲು
ಸುಲಭವಾಗಿದೆ.
'ವಾಲ್ಮೀಕಿ ರಾಮಾಯಣ: ಶಾಪ ಮತ್ತು ವರ'- ಹೊಸ ಆಯಾಮದ ಈ
ವಿದ್ವತ್ ಕೃತಿ ಓದುಗರ ಮೆಚ್ಚುಗೆಯನ್ನು ಪಡೆದು ವರಪ್ರದವಾಗಲಿ!

ಬೆಂಗಳೂರು

ಸರಸ್ವತಿ ಗಜಾನನ ರಿಸಬೂಡ