ಪುಟ:ವಿದ್ಯಾರ್ಥಿ ಕರಭೂಷಣ.djvu/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೮ ವಿದ್ಯಾರ್ಧಿ ಕರಭೂಷಣ ಜಿತೇಂದ್ರಿಯನಾದ ಚಾಣಕ್ಯನಿಗಿಂತ, ದೊಡ್ಡ ಜಿತೇಂದ್ರಿಯರುಂಟೇ ? ರಾಜಕೀಯ ವಿಷಯಗಳಲ್ಲಿ ಅದ್ಭುತವಾದ ಶಕ್ತಿಯನ್ನು ತೋರಿಸಿ, ಎಂಧ ವಿಪತ್ತುಗಳು ಬಂದಾಗ ಶಾಂತಚಿತ್ತನಾಗಿದ್ದು ಗೊಂಡು, ಸಾವಧಾನ ವಾಗಿ ತನ್ನ ಧರ್ಮಪ್ರಯತ್ನಗಳಿಗೆ ಬಂದ ವಿಘ್ನಗಳನ್ನೆಲ್ಲ ಲೀಲೆಯಿಂದ ಪರಿಹಾರಮಾಡಿ, ದುಷ್ಟನಿಗ್ರಹವನ್ನೂ ಶಿಷ್ಟಮಪಾಲನೆಯನ್ನೂ ಮಾಡು ವುದರಲ್ಲಿ ಯಮಧರನಂತೆ ಪರಿಣಮಿಸಿದ ಚಾಣಕ್ಯನ ಮೇಲುಪಂಕ್ತಿಯು, ಸಲ್ವರಿಗೂ ಅನುಸರಣೀಯವಾದುದು. ಈ ಅದ್ಭುತವಾದ ಶಕ್ತಿ ಬರಬೇ ಕಾದರೆ, ಉದ್ದಿಷ್ಟವಾದ ಕೆಲಸದಲ್ಲಿ ಮನಸ್ಸು ಲೀನವಾಗುವಂತೆ ಮಾಡಿ ಕೊಳ್ಳಬೇಕು ; ಎಷಯಾಂತರಗಳಿಗೆ ಮನಸ್ಸು ಚಲಿಸದಂತೆ ಮಾಡಿ ಕೊಳ್ಳು ವುದೇ, ನಿಜವಾದ ತಪಸ್ಸು, ಇಂಥ ತಪೋಮಹಿಮೆಯನ್ನು ಸಂಪಾದಿಸಿದ ಹೊರತು, ಉದ್ದಿಷ್ಟ ಕಾಠ್ಯಗಳನ್ನು ಮಾಡುವುದಕ್ಕೂ, ಅವತಾರ ಪುರುಷ ರೆನ್ನಿ ಸುವುದಕ್ಕೂ, ಅವಕಾಶವೆಂದಿಗೂ ಉಂಟಾಗುವುದಿಲ್ಲ. ಕೆಲಸಮಾಡತಕ್ಕವನಿಗೆ, ಚಿತ್ರವಿಚಿತ್ರವಾದ ಕಿಟಕಿಗಳುಂಟಾಗು ವುವು. ಹಿಡಿದ ಕೆಲಸಗಳಿಗೆ ನಾನಾಧವಾದ ನಿಮ್ಮ ಗಳು ಬರುವುವು. ಇವುಗಳಲ್ಲಿ ಅನೇಕ ವಿಘ್ನಗಳು, ತೃಪ್ತಿಯನ್ನೂ ಐಕಾಗ್ರವನ್ನೂ ತಪ್ಪಿಸ ತಕ್ಕುವುಗಳಾಗಿರುವುದುಂಟು. ಉಪೇಕ್ಷೆಯಿಂದಲೂ, ಶಾಂತಿಯಿಂದಲೂ, ಈ ಕಿರಿಕಿರಿಗಳನ್ನೂ ನಿಮ್ಮ ಗಳನ್ನೂ ನಿವಾರಣೆಮಾಡಿ ಕೊಳ್ಳಬೇಕು. ಅಸಾಧ್ಯವಾದರೆ, ಶಾಂತಿಯಿಂದಲೂ ಸಮಾಧಾನದಿಂದಲೂ ಸಹಿಸಿಕೊಳ್ಳ ಬೇಕು, ಹಾಗೆ ಸಹಿಸಿಕೊಂಡು ಉಪಕ್ರಮಿಸಿದ ಕೆಲಸವನ್ನು ಸಾಧಿಸು ವುದರಲ್ಲಿ ಶ್ರದ್ದೆ ಕಡಮೆಯಾಗದಂತೆ ನೋಡಿಕೊಳ್ಳಬೇಕು. ಎಷ್ಟು ತೊಂದರೆ