ಪುಟ:ವಿದ್ಯಾರ್ಥಿ ಕರಭೂಷಣ.djvu/೧೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಚ್ಛೇದ ೩ ೧೪ಳಿ ವಿದ್ಯಾರ್ಥಿಗಳು ಹುಚ್ಚರ ಆಸ್ಪತ್ರೆಗೆ ಕಳುಹಲ್ಪಡಬೇಕಾಗುವುದು ಅರೋಗ ಧೃಢಕಾಯರಾದ ವಿದ್ಯಾರ್ಥಿಗಳು, ಅವಿಚ್ಛಿನ್ನ ವಾಗಿ ಏಕಾಗ್ರ ಬೇಕಾಗಿ ರುವ ವ್ಯಾಸಂಗವನ್ನು ಮರುಘಂಟೆಗಳವರೆಗೂ ಮಾಡಬಹುದು, ಅನಂ ತರ ಕಾಲು ಘಂಟೆಯಾದರೂ ವಿಹಾರರೂಪವಾದ ವಿಶ್ರಾಂತಿಯಿರಬೇಕು. ತಿರುವಾಯ ಪುನಃ ವ್ಯಾಸಂಗಕ್ಕೆ ಉಪಕ್ರಮಮಾಡಬಹುದು, ಅಭ್ಯಾಸ ದಿಂದ ಕ್ರಮಕ್ರಮವಾಗಿ ಹೆಚ್ಚು ವ್ಯಾಸಂಗಮಾಡುವ ಶಕ್ತಿ ಬರುವುದು, ವಿದ್ಯಾರ್ಥಿಗಳು, ತಮ್ಮ ಶಕ್ತಿಯನ್ನು ನೋಡಿಕೊಳ್ಳದೆ ವ್ಯಾಸಂಗಮಾಡು ವುದಕ್ಕಪಕ್ರಮಿಸಕೂಡದು, ತಮಗಿರತಕ್ಕ ಶಕ್ತಿಯನ್ನು ಗೊತ್ತು ಮಾಡಿ ಕೊಳ್ಳುವುದು ಕಷ್ಟವಲ್ಲ. ಬೇಸರಿಕೆಯಾಗುವವರೆಗೂ ವ್ಯಾಸಂಗಮಾಡಿ, ಬೇಸರ ತೋರಿದಕೂಡಲೆ ಕಾರಾಂತರಗಳಲ್ಲಿ ಮನಸ್ಸನ್ನು ವಿನಿಯೋಗಿಸ ಬೇಕು. ಸಿದ್ದಾಂತಿಗಳಲ್ಲಿ ಶಿರೋಮಣಿಪ್ರಾಯನಾದ ನ್ಯೂಟನ್ನಿಗಿಂತ ದೊಡ್ಡ ಎದ್ಯಾರ್ಥಿ ಯಾರೂ ಅಲ್ಲ, ಇವನು, ಅತ್ಯಂತ ಕ್ಷೇಶಜನಕವಾದ ವ್ಯಾಸಂಗವನ್ನು ಮಾಡಿ, ಬೇಸರಿಕೆಯಾದ ಕೂಡಲೆ ಆ ವ್ಯಾಸಂಗವನ್ನು ಬಿಟ್ಟು, ಮನೋಹರವಾದ ಇತರ ವ್ಯಾಸಂಗಗಳನ್ನು ಮಾಡುವುದಕ್ಕು ಪ ಕ್ರಮಿಸಿ, ಬೇಸರ ತೀರಿದ ಕೂಡಲೆ ಪುನಃ ಕೇಶಕರವಾದ ವ್ಯಾಸಂಗಕ್ಕು ಸಕ್ರಮಿಸುತ, ಆರೋಗ್ಯಕ್ಕೆ ಯಾವ ಹಾನಿಯ ಬಾರದಂತೆ, ದಿನಕ್ಕೆ ಹದಿನಾರುಘಂಟೆಗಳಿಗೆ ಕಡಮೆಯಿಲ್ಲದೆ, ಎಪ್ಪತ್ತು ವರುಷಗಳಿಗಿಂತ ಹೆಚ್ಚಾಗಿ ವ್ಯಾಸಂಗಮಾಡಿ, ಸಕಲಶಾಸ್ತ್ರ ವಿಶಾರದರಲ್ಲಿ ಅಗ್ರಗಣ್ಯನಾದನು. ಹೀಗೆ ವ್ಯಾಸಂಗಮಾಡುವುದು ಕಷ್ಟವಲ್ಲ, ಆದರೆ, ಅಭ್ಯಾಸವಾಗುವ ವರೆಗೂ, ಬೇಸರವಾಗುವವರೆಗೆ ಮಾತ್ರ ವ್ಯಾಸಂಗಮಾಡಿ, ಬೇಸರಿಕೆಯಾದ