ಪುಟ:ವಿದ್ಯಾರ್ಥಿ ಕರಭೂಷಣ.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಚ್ಛೇದ ೧ ೬೧ ವನ್ನು ನಿಯಮಿಸುತ್ತಿದ್ದರು, ಪಾಶ್ಚಾತ್ಯರಲ್ಲಿ ಯೂನಿವರ್ಸಿಟಿಗಳನ್ನೂ ಕಾಲೇಜುಗಳನ್ನೂ ಊರಿಗೆ ಸ್ವಲ್ಪ ದೂರದಲ್ಲಿ ಮಾಡಿ, ವಿದ್ಯಾರ್ಥಿನಿಲಯ ಗಳನ್ನು ಕಲ್ಪಿಸಿ, ವಿಷಯಸುಖಗಳ ಮೇಲೆ ಅವರ ಮನಸ್ಸು ಹೋಗದಂತೆ ಮಾಡಿರುವರು. ಯಾವಾಗಲೂ, ವಿದ್ಯಾಭ್ಯಾಸ, ವ್ಯಾಯಾಮ ರೂಪವಾದ ಆಟ, ಲೋಕೋತ್ತರವಾದ ಸ್ಥಿತಿಗೆ ಬರಬೇಕೆಂಬ ಅಭಿಲಾ ಷೆಗೆ ಸಾಧಕವಾದ ಗ್ರಂಧಾವಲೋಕನ-ಇವು ಮೊದಲಾದ ಏರ್ಪಾ ಡುಗಳು, ಆಸ್ಥ ಆತ ಬ್ರಹ್ಮಚರ್ಯಕ್ಕೆ ಸಾಧಕಗಳಾಗಿ ಮಾಡಲ್ಪಟ್ಟಿರು ವುವ, ಇಲ್ಲಿ ವ್ಯಾಸಂಗಮಾಡತಕ್ಕವರು, ನಾಲ್ಕಿ ದುವರುಷಗಳಲ್ಲಿಯೇ, ಇತರ ಕಡೆಗಳಲ್ಲಿ ನಲವತ್ತು ಐವತ್ತು ವರುಷ ವ್ಯಾಸಂಗಮಾಡತಕ್ಕವರಿಗೂ ಅಸಾಧ್ಯವಾದಷ್ಟು ವಿದ್ಯಾರ್ಜನೆಯನ್ನು ಮಾಡುವರು; ಅಸಾಧಾರಣವಾದ ಬುದ್ಧಿಶಕ್ತಿಯ ಇವರಿಗುಂಟಾಗುವುದು ದೇಹಶಕ್ತಿಯೂ ಇದೇರೀತಿ ಯಲ್ಲಿ ಪರಿಣಮಿಸು ವುದು, ಈ ರೀತಿಯಲ್ಲಿ ಸುಶಿಕ್ಷಿತರಾದವರು, ನಮ್ಮ ದೇಶಕ್ಕೆ ವೈಸ್‌ರಾಯಿಗಳಾಗಿಯ, ಗವರ್ನರುಗಳಾಗಿಯ ಲೆಪ್ಟಿನೆಂಟ್ ಗವರ್ನರುಗಳಾಗಿಯ, ಹೈಕೋರ್ಟ್‌ ಜಡ್ಡಿಗಳಾಗಿಯ ಒರುತ್ತಲಿದ್ದಾರೆ. ಆಸ್ಟ್ರೇಲಿತಬ್ರಹ್ಮಚರದ ಮಹಿಮೆಯ ಏಕಾಗ್ರಚಿತ್ತದಿಂದ ವ್ಯಾಸಂಗಮಾ ಡುವುದರ ಮಹಿಮೆಯ , ಅವರಲ್ಲಿ ಚೆನ್ನಾಗಿ ಗೊತ್ತಾಗುತ್ತದೆ. ನಮ್ಮ ದೇಶದಲ್ಲಿಯ, ಕಾಲೇಜುಗಳಿಗೂ ಸ್ಕೂಲುಗಳಿಗೂ ಸಂಬಂಧಪಟ್ಟಂತೆ, ವಿದ್ಯಾರ್ಥಿನಿಲಯಗಳು ಮಾಡಲ್ಪಟ್ಟಿವೆ. ನಮ್ಮ ಶ್ರೀಮನ್ಮಹಾರಾಜರವರು, ಅರಸು ಮಕ್ಕಳ ಕ್ಷೇಮಾರ್ಥವಾಗಿ ಬೋರ್ಡಿಂಗ್‌ಸ್ಕೂಲನ್ನು ಮಾಡಿಸಿರು ವರು. ಇದೇರೀತಿಯಲ್ಲಿ, ಕಾಲೇಜ್‌ ಹಾಸ್ಟೆಲ್‌ಗಳು ಏರ್ಪಾಡಾಗಿರುವುವು.