ಪುಟ:ವಿದ್ಯಾರ್ಥಿ ಕರಭೂಷಣ.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಚ್ಛೇದ ೧ ೬೩ ತೊಂದರೆಯಿಲ್ಲದಂತೆ ನಾನು ಮಾಡುತ್ತೇನೆಂದು ಹೇಳಿದನು. ಬಳಿಕ ರಾಜನ ಅನುಜ್ಞೆಯನ್ನು ಹೊಂದಿ ದ್ವಾರಪಾಲಕನು ಅರಮನೆಯ ಬಾಗಿಲಲ್ಲಿ ರುವಾಗ, ಆ ಮಹಾಕವಿ ಬಂದನು. ದ್ವಾರಪಾಲಕನು ಅವನಿಗೆ ಸಾಷ್ಟಾಂಗ ನಮಸ್ಕಾರವನ್ನು ಮಾಡಿ • ಮಹಾಸ್ವಾಮಿ / ಹೊಸ ಗ್ರಂಧಗ-ನ್ನು ಮಾಡಿಕೊಂಡು ಬಂದಿರತಕ್ಕ ಕಗಳಿಗೆ ಮಾತ್ರ, ನಮ್ಮ ಮಹಾರಾಜರು ಸಂದರ್ಶನವನ್ನು ಕೊಟ್ಟು ಸನ್ಮಾನ ಮಾಡುವರು; ಪ್ರಾಚೀನ ಗ್ರಂಧಗಳನ್ನು ತಂದು ಓದತಕ್ಕವರಿಗೆ ಸನ್ಮಾನ ಮಾಡುವುದಿಲ್ಲ. ಎಂದು ಹೇಳಿದನು ಅದಕ್ಕೆ ಆ ಮಹಾಕವಿ ಯ., ತಾನು ಹೊಸದಾಗಿ ಗ್ರಂಧವನ್ನು ರಚಿಸಿ ಒಂದಿರುವಂತೆ ಹೇಳಿದನು. ಇದು ಹೊಸಗ್ರಂಧವೆಂದು ನನಗೆ ತೋರಿದ ಹೊರತು ನಾನು ತಮ್ಮನ್ನು ಒಳಗೆ ಬಿಡುವುದಕ್ಕಾಗುವುದಿಲ್ಲವೆಂದೂ, ಮೊದಲು ನನ್ನಲ್ಲಿ ಓದಿ ನನಗೆ ಈ ವಿಷಯದಲ್ಲಿ ನಂಒಗೆಯನ್ನು ಹುಟ್ಟಿಸಿ ದರೆ ಆಮೇಲೆ ನಾನು ಬಡ ನೆಂದೂ, ಆ ದ್ವಾರಪಾಲಕನು ಹೇಳಿದನು. ಆಗ ಆ ಮಹಾಕವಿಯು ಆ ಗ್ರಂಧವನ್ನು ಓದಿದನು. ಕೂಡಲೇ ದ್ವಾರ ಪಾಲಕನು 6 ಈ ಗ್ರಂಧವು ನನಗೆ ತಿಳಿದೇ ಇರುವುದು ' ಎಂದು ಹೇಳಿ, ಮೊದಲಿಂದ ಕೊನೆಯವರೆಗೂ ಒಂದೂ ತಪ್ಪಿಲ್ಲದಂತೆ ಹೇಳಿಬಿಟ್ಟನು. ಆ ಮಹಾಕವಿಯು ಭ್ರಾಂತನಾಗಿ, ಏನು ಮಾಡಬೇಕೋ ತಿಳಿಯದೆ ಹೊರಟುಹೋದನು. ಭೋಜನು ಈ ವೃತ್ತಾಂತವನ್ನು ಕೇಳಿ ತುಂಬಾ ಸಂತುಷ್ಟನಾಗಿ, ಕೆಲವು ದಿವಸಗಳಲ್ಲಿಯೇ ಹಣವನ್ನು ತರಿಸಿ, ಆ ಮಹಾಕ ವಿಗೂ ತನ್ನ ದ್ವಾರಪಾಲಕನಿಗೂ ಇಬ್ಬರಿಗೂ ಸನ್ಮಾನವನ್ನು ಮಾಡಿದನು. ಈ ವಿಷಯ ಹಾಗಿರಲಿ; ವಿದ್ಯಾರ್ಥಿಗಳು, ತಮ್ಮ ವಿದ್ಯಾಭ್ಯಾಸ ಪೂರ