ಪುಟ:ವೈಶಾಖ.pdf/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಓಣೀಲಿ ಸಣ್ಣ ಕಲ್ಲೊಂದ್ಮ ವದೀತ ಬತ್ತಾ ಇದ್ದ ಲಕ್ಕನ ತಲೇಲಿ ಎದ್ದೊಂದ ಒಂದೇ ಇಚಾರ ಚಕ್ಕಲುಬಕ್ಕಲು ಆಕಿತ್ತು. ಬೊಡ್ಡಿ ಮಕ್ಕಳು ಉದ್ದಕ್ಕೂ ನಮ್ಮ ಲಗ್ಗೆ ಚಂಡು ಮಾಡ್ಕಂಡುಬುತ್ತಿಲ್ಲ ಅಂತ ಕ್ಲಾಪದಿಂದ ಕ್ಯಾಕರಿ ಪಕ್ಕದ ಬೇಲಿಗೆ ಉಗುಳ, ಪಂಚಾತಿಯೋರು ಮಾಡೋ ನ್ಯಾಯದ ದಾಳ ಉಳ್ಳೋದು ಕೊನೀಕೆ ಉತ್ತಮರ ಕಡೀಕೇಯ... ತುಸು ಗಟ್ಯಾಗೆ ಗೋಣಗ್ಲ... ಗೌಡಯ್ಯ ಗಂಗಪ್ಪ ಅಟ್ಟೇಲಿ ಇನ್ನೂರು ರೂಪಾಯಿ ಸಾಲಕಾಗಿ ಜೀತಕಿದ್ದ ಬುಂಡನ ಹೈದ, ಆವಯ್ಯ ಗೋಳುಕಿಚ್ಚು ಉಯ್ಕೆಕಾಳಾದ ತಡೀನಾಕ್ಷೆ, ತಿಂಗಳೊಪ್ಪತ್ನಲ್ಲಿ ಇಂದಕೇ ವಾಪಸು ಬಂದಿದ್ದ... ಜಟಜಟ್ಟೆ ಗಂಗಪ್ಪ ಪಂಚಾತಿ ಸೇರಿ, ಬುಂಡನ ಹೈದ ತಮ್ಮಟ್ಟಿಗೇ ಜೀತಕೆ ಬರಬೋಕೂಂತ ತಗಾದೆ ಮಾಡ್ಡ... ಪುನಾ ಅರವಟ್ಟಿಗೆ ಬಿಲ್‌ಕುಲ್ ನಾ ವೋಗಕ್ಕಿಲ್ಲ. ಜಲುಮೆ ಮಾಡಿದ್ರೆ ನ್ಯಾಣು ಆಕತ್ತೀನಿ-ಮುಸ್ಕರ ಊಡು ಹೈದ... ಮಗನ ಪಟ್ಟು ಬುಂಡನ್ ಆಕಾಸ ಬೂಮಿ ಏಡೂ ಒಂದು ಮಾಡು, ಚಿಂತೆ ಆ ಸುಮ್ಮೆ ಕುಂತ. ಆಗ ಕ್ವಾಟೆ ಬುಳ್ಳಪ್ಪ ಎದೆ ಚಾಚಿಗೊಂಬಂದು ಚೌಕಾಸಿ ಮಾಡಿ ಕ್ವಡಬೇಕಾಗಿದ್ದ ಅರ್ದ ಅಣಕೇ ಹೈದ ವಸಕ್ಕೆ ತಕ್ಕಂಡಿದ್ದ... ಆ ಕೃಣಕೆ ಉರುದು ಉಪ್ಪಾದರೂವೆ ಗಂಗಪ್ಪ ಜೋಗಿ ಅಂಗೆ ಕಯ್ಯ ಜಾಡಿಸಿ ತೆಪ್ಪಗಾದ... ಎತ್ತಾಗಿ ವೊಂಟೆ ಮೊಗ?- ಯಾರೋ ಕೇಳಿದ್ದಕೆ, ಇಂಗೇ ವೊಂಟೆ ಅಂದ ಲಕ್ಕ ಓಣೀಲಿ ಬಲಚೂರಿ ತಿರುಗ್ದಾಗ ವೊಲಗೇರಿ ಇಂದ್ರೇ ಉಳೀತು. ಲಕ್ಕನ ಯೋಚ್ಛೆ ನಡೀತಾನೆ ಇತ್ತು... ಗೌಡಯ್ಯ ಗಂಗಪ್ಪ, ಕ್ವಾಟೆ ಬುಳ್ಳಪ್ಪ ಏಡು ಆಳ್ವೆ ವಬ್ಬರಿಗೊಬ್ರು ಮಚ್ಚರಿಸೋದ ಕಂಡು- ಇವು ಪಾಂಡವರ ಕೌರವ ವಂಸದೋರೆ ಇರಬೇಕು ಅಂತಿದ್ರು ಊರಿನೋರು! ಜೀತದ ಆಳ ಹಾರಿ ಬುಳ್ಳಪ್ಪ ಉರಿಯೊ ಕೊಳ್ಳಿಗೆ ಮತ್ತೊಂದು ಕೊನೆ ಒಟ್ಟಿದ್ದ, ಆದ್ರೆ ಕೊಳ್ಳಿ ಉರಿ ಘಾಟಿ ಬುಳ್ಳಪ್ಪನ್ನೇನೂ ತಟ್ಟವಂಗೇ ಇನ್ನಿಲ್ಲ. ಅದ್ಯೆ ಗುರಿಯಾದೋನು ಮಾತ್ರ ಬುಂಡನ ಹೈದ್ರೇಯ... ಹಿಂದ್ರ ಸ್ವಾಮಾರ