ಪುಟ:ವೈಶಾಖ.pdf/೩೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೨೬ ವೈಶಾಖ ಲಕ್ಕನ್ನ ಅವನ ಅಯ್ಯ, ದೊಡ್ಡಯ್ಯ ಇಬ್ಬರೂವೆ ಕೂಡಿಕಂಡು ಮೆಲ್ಲಗೆ ನಡಸಿಕೊಂಡೋಗಿ ಗುಡ್ಡಿನೊಳೆ ಮಖಾಡೆ ಮನಗಿಸಿದರು. ಸಿವುನಿ ಅಮ್ಮ ಬೆನ್ನಿನ ಬಾಸುಂಡೆಗಳೆ ದ್ಯಾವಾಜಿಯಿಂದ ಎರವಲು ತಂದಿದ್ದ ಕುಡಕೆ ಹರಳೆಣ್ಣೆಗೆ ಬೆಳ್ಳುಗಳ ಅದ್ದಿ ಅದ್ದಿ ನಯಾಗಿ ಸವರ ಇದ್ದರೂವೆ ಲಕ್ಕ, 'ಆಡ್-ಅಯ್ಯೋ-ಅಪ್ಪ.....' ಎಂದು ನರಳ್ತಾನೆ ಇದ್ದ. ಕಲ್ಯಾಣಿ ಅರೆನಿದ್ದೇಲಿದ್ದ ಸಿವುನಿಯ ಕೂಸ ತನ್ನ ತೊಡೆ ಮ್ಯಾಲಿಟ್ಟು ತಡ್ತಾ ಇದ್ಲು. ಆಗ ಅವಳ ಕಣ್ಣಿಂದ ಉಕ್ಕಿ ಸುರೀತಿದ್ದ ನೀರಿನ ತೊಟ್ಟು ಕೂಸಿನ ಕೆನ್ನೆ ಮ್ಯಾಲೂ ಬಿದ್ದು, ಅದಕ್ಕೆ ಎಚರಾಗಿ, ಅದು ರಚ್ಚೆ ತೆಗೀತು. ಕಲ್ಯಾಣಿ ಒಡನೆ ತನ್ನ ಕಂಬನೀಯ ಸ್ಯಾಲೆ ಸೆರಗ್ನಿಂದ ಎತ್ತಿಕೊಂಡು ಕೂಸಿನ ಕೆನ್ನೆ ವರೆಸಿ, ಹುಳ್ಳುಳ್ಳಾಯಿ ಮಾಡಿ ಅದ್ರ ರಮಿಸಿ ಮಲಗಿಸೊ ಯತ್ನದಲ್ಲಿದ್ದು. ಕ್ಲಾಣೆ ವಳುಗೆ ಲಕ್ಕನ ಅಯ್ಯ, ಸೋರೆಬುಂಡೆಯ ಎತ್ತಿ ಹೀರ, ತನ್ನ ಅಳಲ ಮರೆಯಕ್ಕೆ ಯತ್ನಿಸಿದ್ದ. ಗುಡ್ಡಿನ ವೊರಗಡೆ ಕುಳವಾಡಿ ಕುಂದೂರಯ್ಯ ಆಕಾಸನೆ ಕ್ವಾಡ್ರ, ಯಾವ ಚಲನೆನೂ ಮಾಡ್ಡೆ ಕಲ್ಲಾಗಿ ಕುಂತಿದ್ದ. “ಯಾಕೆ ಕುಳುವಾಡಿ ಹಿಂಗೆ ಬೆಪ್ಪಗಿ ಕುಂತದ್ದ?"- ಅನ್ನಾ ನ್ಯಾಯಕ್ಕೆ ಬಂದಿದ್ದ ಗೋಸುಸಾಬರು, ತಮ್ಮ ಹಳ್ಳಿಗೆ ವೋಂಟಿದ್ದೋರು, ಮನಸ್ಸು ಬದಲ್ಲಿ, ತಮ್ಮ ಸೀನೇಯಿತಗಾರ ಕರಿಯಪ್ಪನೊಡೆ, ಕುಳವಾಡಿ ಕುಂದೂರಯ್ಯ ಮುಂಬೈ ಬಂದು ನಿಂತಿದ್ದು, “ಈಗ ಬೆ ಪ್ಪಾಗಿ ಕುಂತುಗಳ ದೆ ಇನ್ನೇನು ಉಳಿದ ದೆ ಗೋಸುಸಾಯೇಬ್ರೆ?”- ಮಾತುಗೊಳು ಅಮ್ಮ ಬಾಯಿಂದ ವೊರಬರುತ್ತಿದ್ದರೂ ಕುಂದೂರಯ್ಯ ನಿಶ್ಚಲವಾಗಿ ಕುಂತೇ ಇದ್ದ. ಗೋಸು ಸಾಬರು ಗುಡ್ಡಿನೋಳೀಕೆ ಇಣಿಕೆ ಕ್ವಾಡಿದ್ರು. “ನನ್ನ ದೊಸ್ ಎಲ್ಲಿ?”- ಕೇಳಿದ್ರು. ಲಕ್ಕನ ಅಯ್ಯ ಬುಂಡೆ ಹಿಡದಂತ್ಯೆ ಕಾಣೆಯಿಂದ ಇಣಿಕ. ಗೋಸು ಸಾಬರು ರೇಗಿದ್ರು. “ಅರೆ, ಬಾರಯ್ಯ ವೊರೆ, ನನ್ನ ಮರೆತುಬುಟ್ಟ ಐತಲ್ಲ, ಕುಡಿತಾ ಕುಂತುಬುಟ್ಯ ವಚ್ಚೆ!” ಎಂದು ಹಾಸ್ಯದ ಚಟಾಕಿ ಹಾರಿಸಿದ್ರು. ಅನಂತ್ರ ಸೊಕ ಮಾಡ್ತಿದ್ದ ಕಲ್ಯಾಣಿಯ ಸಮಾಧಾನಪಡಿಸ್ತ, “ಅರೆ, ಈಗ ಏನಾಗೋಯ್ತಂತ ಹಿಂಗೆ ಸೋಕ ಮಾಡ್ತಿದ್ದೀ ಥಯ್?.... ಯೇನು ಪರ್ಪಂಚ ಎಲ್ಲ ನಿಮ್ಮ ಈ ದರುಮನಳ್ಳಿಲೆ ಕುಂತೈತ?.... ಪಕ್ಕದಾಗೆ