ಪುಟ:ವೈಶಾಖ.pdf/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೨೧ ಉಟ್ಕಂಡು ಸಿವಪೂಜೆಗೆ ಇನ್ನೇನು ಕುಂತುಗೋಬೇಕು- ಆ ವ್ಯಾಲ್ಯಕ್ಕೆ ಸರಾಗಿ ಅವರಿಗೆ ನಡಕೊತ್ತಿದ್ದ ಇನ್ನೊಬ್ಬ ಭಕ್ತ ಬರಬೇಕ ?... ಬಂದೋನು ಉಳಿಕೆಯೋರಂಗೆ ಗಮ್ಮನೆ ಇರಬ್ಯಾಡದ?...ಮೊದ್ಧ ಎದೆ ಸೀಳುದ್ರೆ ಮೂರು ಅಕ್ಷರ ಕಲೀದ ರೈತಾಪಿ ಕುಳ!... ತನ್ನ ತ್ವಾಟದಲ್ಲಿ ಬೆಳುದಿದ್ದ ಕೆಂಡಸಂಪಿಗೆ ಹೂವ ಮಸ್ತಾಗಿ ತಕ್ಕಂಬಂದು, “ತಕ್ಕ ನನ್ನೊಡೆಯ. ನಿಮ್ಮ ಸಿವಪೂಜೆಗೆ ತಂದಿಮ್ಮಿ” ಅಂತ ಭಕ್ತಿಯಿಂದ ಅವ್ರ ಮುಂದಕಿಟ್ಟ. ಆ ಅಯ್ಯನೋರಿಗಾಗ್ಗೆ ಎಪ್ಪತ್ತೆಂಟರ ಮುಪ್ಪು, ಬೋ ಮಡಿ. ದೂರದಿಂದ್ದೇಯ “ಸಂತೋಸ, ಸಂತೋಸ, ಸಂಪಗೆ ಹೂವು ಪಸಂದಾಗದೆ, ಯಾಪಾಟಿ ತಂದು ಬುಟ್ಟೆಯಪ್ಪ?” ಅಂದ್ರು, ತಟಕ್ಕೆ ಆ ಸಿವಭಕ್ತರೋನು, “ನಿಮ್ಮ ಪಾದಕೆ, ಇದ್ಯಾವ ಮಹಾ ಸ್ಯಾಟ-ಬುಡಿ ನನ್ನೊಡೆಯ. ಬೇಕಾದರೆ, ಇದ್ರ ಅತ್ತರೋಟು ಹೂವ ನಿಮ್ಮ ಪಾದಕ್ಕೆ ತಂದು ಎರೀತೀನಿ”-ಅನ್ನಾದ? ಆ ಮಡಿ ಅಯ್ಯನೋರು ಈ ಕೇಳಬಾರ ಮಾತ ಕೇಳಿ, ದಿಗ್ಗನೆದ್ದು, “ಮಡಿ ವೋಯ್ತು, ಮಡಿ ವೋಯ್ತು” ಅಂತಾ ಅಂತಾ ತಾನ ಮಾಡಕ್ಕೆ ಮುನಾ ಬಚ್ಚಲ ಕ್ವಾಣೆಗೋದ್ರು...ಇದ ನೋಡಿ, ಅಲ್ಲಿ ನೆರದಿದ್ದ ಭಕ್ತರಿಗೆಲ್ಲ ತಮ್ಮ ಸ್ವಾಮಿಗಳೆ ಎಂತಾ ಅಪಚಾರ ಆಯೂಂತ ಸಿಟ್ಟು, ಅವಯ್ಯ ಕೆಂಡಸಂಪಿಗೆ ಹೂವ ಕುಯ್ಯಕ್ಕೆ ಲಕ್ಕನ್ನೂ ಕರಕಂಡೋಗಿದ್ರಿಂದ, ಲಕ್ಕೂವೆ ಇನ್ನೆಲ್ಲ ನೋಡ್ತಾ ಕುಂತಿದ್ದ. ಸಿಟ್ಟು ಅತ್ತಿ ಕುದೀತಿದ್ದ ಭಕ್ತಾದಿಗಳು, “ಏನಯ್ಯ, ವಳ್ಳೆ ಗೆಣೆಕಾರ ನೀನು!... ಈ ಕೆಲಸುವಾ ಮಾಡಾದು? -ಏನೇನೊ ಮಾತಾಡಿ ಬುದ್ದಿಯೋರು ಈ ಇಳಿ ವಯಸ್ಸಲ್ಲಿ ಪುನಾ ತಾನ ಮಾಡೋ ತರ ಮಾಡಿದ್ಯಲ್ಲ?” ಅಂತ ಒಬ್ಬ ತಪ್ಪ ಒಬ್ಬರು ಚೀಮಾರಿ ಅಕಿದ್ರು. ಅವಯ್ಯಂಗೆ ತನ್ನಿಂದ ಆಚಾರ್ಯ ಅದ್ದು ಮಂದಟ್ಟಾಗಿ, ಸಾಮಿಯೋರು ತಾನದ ಮನಿಂದ ವರೀಕೆ ಬರಾದ್ರೆ ಕಾಯ್ತಿದ್ದು, ಬಂದೊಡ್ಡೆ, ಕವಕ್ಕೆ ಅವ್ರ ಮುಂಬೈ ಹಾಸಿ ಅಡ್ಡಬಿದ್ದು - “ಮಾ ತೆಪ್ಪಾಯ್ತು, ನಿಮ್ಮ ಪಾದ. ಇನ್ನೊಂದು ಸತಿ ನಾನೇನಾರ ಈ ತೆರ ಬಾಯಿ ತೆಪ್ಪಿ, ಕೆಟ್ಟ ವಾಕ್ಸ ಕಡಿಸು, ನನ್ನ ಕೆಡೀಕಂದು ಮುಖಳೀಗೆ ಹೆಟ್ಟಿ” ಅಂದುಬುಟ್ಟ! ಆ ಮಾತ ಕೇಲಿದ ಸ್ವಾಮಿಗೋಳು ಬೆಟ್ಟೋದ್ರು. ಪುನಾ ತಾನ ಮಾಡಕ್ಕೆ