ಪುಟ:ವೈಶಾಖ.pdf/೩೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೩೭೧ ಸ್ವಂತ ತಾಯಿ ಸತ್ತದ್ದಕ್ಕಿಂತ ಎಚ್ಚಾಗಿ ಅವನ್ನ ಅಣ್ಣಮಾಡಿತ್ತು. ಲಕ್ಕ ಕುಂತೇ ಇದ್ದ. ಅವಂಗೆ ಗುಡ್ಡಿಗೋಗಿ ಉಣ್ಣಬೇಕು ಅನ್ನುಸನೇ ಇಲ್ಲ. ಬೊಡ್ಡಂಗೆ ಉಸಾರು ತೆಪ್ಪಿ, ಗುಡ್ಡಲ್ಲಿ ಬಿದ್ದಿತ್ತು. ಬೊಡ್ಡಿಮಗಂದು ಆಸೆ ಹೂಸು ಕುಡ್ಡಂಗೆ ಒಂದೇ ಜಿನ ಏಡು ಮೊಲವ ತಿಂದಕಿ ನಾಡ ಬಿದ್ದದೆ... ಅಮಾಸೆ ಆತ್ರದ ದಿನಗಳು. ಕತ್ತಲೆ ಆಚೋರೀ ಈಚೋರಿ, ಎಲ್ಲಾ ಕಡೆನೂವೆ ಇಟ್ಟಾಡ್ತ ಇತ್ತು. ಲಕ್ಕ ಅಲ್ಲೊಂದು ಇಲ್ಲೊಂದು ಪಿಣಿಪಿಣಿ ಅಂತಿದ್ದ ಚುಕ್ಕಿಗಳನ್ನೇ ಸ್ವಾತ್ತ ಕುಂತಿದ್ದ. ದೊಡ್ಡಯ್ಯ ಇಂಗ್ಸ್ ಆಯ್ತಾರೆ ಅಂತ ಯೋಳಿದ್ದು ಗೆಪ್ತಿ ಆಯ್ತು. ಅಂಗಾದ್ರೆ ನಮ್ಮ ಬುಂಡಮ್ಯಾರೂ ಚುಕ್ಕಿ ಆಗೇ ಇರಬೇಕಲ್ವ?.... ನಮ್ಮವ್ವನೂ ವೋಟೇಯ- ಅವಳೂ ಆಗಿದ್ದೇ ಬೇಕು. ಆದ್ರೆ ದ್ರುವ ನಕ್ಸತ್ರವ ನಮ್ಮ ದೊಡ್ಡಯ್ಯ ತೋರಿಸ್ಟಂಗೆ ಈಗ ಈ ಚುಕ್ಕಿಗಳನ್ನೂ ನಂಗೆ ತೋರಿಸೋರು ಯೋರು ?.... ಲಕ್ಕ ಇಂಗೆ ಆಲೋಚೆ ಮಾಡ್ತ ಇದ್ದಾಗ, ಊರು ಕಡಿಂದ ಒಂದು ಬೆಳಕು ವೋಟುದೂರ ಬಂದು ಆರೋಯ್ತು ಮನಾ ಅದು ಇನ್ನೊಸಿ ದೂರ ಮುಂಬೈ ಕತ್ತಿಗತ್ತು, ಪುನ ಆರೋಯ್ತು . ಇನ್ನೊಸಿ ದೂರಕೆ ಪುನಾ ಕತ್ತಿಗತ್ತು... ಇಂಗೆ ವಸಿ ದೂರಕ್ಕೆ ಸರಾಗಿ ಸಾಸ್ತ್ರ ಮಾಡಿ ಕಳುಸ್ತೀನಿ ಅಂದು, ಮೆಟ್ಟಿದ ಎಕ್ಕಡ ಕಳಚಿ ಕೈಗೆ ತಕ್ಕಂಡ. ಆದ್ರೆ ನಂಜೇಗೌಡ ವೋಲದ ಮ್ಯಲೆ ಆ ಬೆಳಕು ಕಾಣಿದ್ದಾಗ, ಅದು ಲಾಟೀನ ಬೆಳಕು ಅನ್ನೋದು ತಿಳುದು ಬಿಗ್ಯಾಗಿ ಇಡುದಿದ್ದ ಉಸುರು ಸರಾಗ್ವಾಗಿ ಅಡಕ್ಕೆ ಸುರುವಾಯ್ತು. ಎಕ್ಕಡ ಕೆಳಗಿಟ್ಟು ಲಕ್ಕ ಸೂಕ್ಷ್ಮಾಗಿ ನಿಟ್ಟುಸ. ಆಗ ಲಾಟೀನ ಒಬ್ಬ ಮನುಸ ಇಡಿದಿದ್ದು ಗೋಚರಾಯ್ತು. ಅವನ ಇಂದೆನೆ ನೆರಳಿನಂಗೆ ನಾಕು ಜನ ಬತ್ತಾ ಇದ್ದದ್ದೂ ಕಾಣಸ್ತು. ಲಕ್ಕಂಗೆ ಕುತೂಲ ಕೆರಳು. ಮೆಲ್ಲಗೆ ಎದ್ದ. ಸದ್ದು ಮಾಡ್ಡೆ ತೆವರಿ ಮ್ಯಾಲಿದ್ದ ಒಂದು ಮರದ ಮರೆಯಿಂದ ಇನ್ನೊಂದು ಮರದ ಮಮತ್ತೆ ಚಿಗೀಂತ, ನಂಜೇಗೌಡ ಎಡತಿ ಮಣ್ಣು ಮಾಡಿದ್ದ ಜಾಕ್ಕೆ ಜಮೀಪ ಇದ್ದ ಭಾರಿ ಹಲಗ್ನ ಮರದ ಮರೆ ಅಂತು ನಿಂತ. ಅಂಗೆ ಅವುತು ನಿಂತು ನ್ಯಾಡಿವಾಂತ ಯೋಚ್ಛೆ ಮಾಡ್ತಿರುವಾಗ, ಬೈಲಿಗ ರಂಗ, ರಾಚೇವಾರದ ಕಾರೂ, ಕೊಪ್ಪಲು ಚೆನ್ನ, ಗುರುಮಲ್ಲು, ನಾಕಾಳೂವೆ ಆರೆ, ಗುದ್ದಲಿಗಳಿಂದ ನಂಜೇಗೌಡ ಎಡತಿ ಉಳಿದ್ದ ಗುದ್ದವ ಅಗೆಯಕ್ಕೆ ಮುಟ್ಟಿಕಂಡರು. ರುದ್ರ ಲಾಟೀನು ಇಡದು ಅವರೆ ಬೆಳಕು ತೋರಿದ್ದ. ಗುದ್ದ ಇದ್ದದ್ರಿಂದ, ಅವರು ಅಗದು ಮಣ್ಣ ತೋಡೊದು ಸುಮಾರು ಕಾಲವೇ ಇಡೀತು. ಅಳ್ಳ ಆದಂಗಾದಂಗೆ