ಪುಟ:ಶಂಕರ ಕಥಾಸಾರ.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾದಂಬರೀ ಸಂಗ್ರಹ ಕೈಲಾಸಪರ್ವತದ ಶಿಖರದಲ್ಲಿ ಸರ್ವ ರಕ್ಷಕನಾದ ತಕ್ಷನು ಪಾರ್ವತೀ ಮತ್ತು ಗಜಾನನರಿಂ ಸಹಿತನಾಗಿ, ಮಹರ್ಷಿಗಳಿಂದ ಪರಿಸಲ್ಪಡುತ್ತಿರುವ ವೇದಗಳಂ ಲಾಲಿಸುತ್ತಾ ಹಸನ್ಮುಖನಾಗಿ ಕುಳಿತಿದ್ದನು. ಆಗ ದೇವತೆಗಳು ತಮಗೆಲ್ಲಾ ಹಿರಿ ಯನೂ, ರಕ್ಷಕನೂ ಮತ್ತು ಕರುಣಾಳುವೂ ಆದ ಪರಮೇಶ್ವರನಂ ಬಹಳವಾಗಿ ಸ್ತುತಿ ಸಲಾಮಹಾತ್ಮನು, ಬಂದ ಕಾರಣವಂ ಪೇಳಿರೆನಲಾ ದೇವತೆಗಳು ಗಂಭೀರಭಾವದಿಂದ • ಸ್ವಾಮಿ ! ಮಹಾವಿಷ್ಣುವು ಅಸುರರನ್ನು ವ್ಯಾಮೋಹಗೊಳಿಸುವುದಕ್ಕೆ ಬೌದ್ದಾವ ತಾರವ ಮಾಡಿದಾಗ, ಆತನಿಂದ ಹೇಳಲ್ಪಟ್ಟ ಶಾಸ್ತ್ರಯುಕ್ತಿಗಳ ಬಲದಿಂದ, ಬೌದ್ಧರು ಶೌತಸ್ಮಾರ್ತ ಸಿದ್ಧಾಂತಗಳಂ ತಿರಸ್ಕರಿಸುತ್ತಾ ವೇದಗಳಿಗೆ ಅಪ್ರಾಮಾಣ್ಯವನ್ನು ಸಾಧಿ ಸತೊಡಗಿದ್ದಾರೆ. ಯಜ್ಞವೆಂಬದನ್ನು ಸಕಲರೂ ನಿಂದಿಸುತ್ತಾರೆ. ಶೈವಾಗಮ, ವೈಷ್ಣ ವಾಗಮಗಳು ಪ್ರಸಿದ್ಧವಾಗಿವೆ. ಉಚ್ಛಿಷ್ಟ ಭಕ್ಷಣ, ನರಬಲಿ, ಮದ್ಯಪಾನ ಇವುಗಳನ್ನು ಅನೇಕ ಸಜ್ಜನರೂ ಕೂಡ ಆಚರಿಸುತ್ತಿದ್ದಾರೆ. ಆದ್ದರಿಂದ ಎಲೈ ಮಹಾನುಭಾವನೇ ! ನೀನು ಆ ದುಷ್ಟರ ನಿಗ್ರಹಿಸಿ ವೇದಮಾರ್ಗಪ್ರತಿಷ್ಠಾಪನೆಯಂಗೈದು ನಮ್ಮನ್ನು ದ್ದರಿ ಸಬೇಕು” ಎಂದು ಬೇಡಿದರು. ಅವರ ಪ್ರಾರ್ಥನೆಯಂ ಕೇಳಿ ಆ ಲೋಕಶಂಕರನು ( ಎಲೈ ದೇವತೆಗಳಿರಾ ! ವೇದಬ್ರಾಹ್ಮಣಿಕೆಯನ್ನು ದರಿಸಲೋಸುಗವೂ ಮತ್ತು ಧರ್ಮ ಸಂಸ್ಥಾಪನೆಯನ್ನು ಮಾಡಲೋಸುಗವೂ ದೈತಧ್ಯಾಂತಮಧ್ಯಾಹ್ನ ಭಾನುಗಳಂತಿರುವ ನಾಲ್ವರು ಶಿಷ್ಯ ರಿಂದೊಡಗೂಡಿ ಪರಮಹಂಸನಾಗಿ, ಶಂಕರನೆಂಬ ನಾಮಧೇಯದಿಂದ ಮನುಷ್ಯಾವತಾ ರವಂ ಗೈಯುತ್ತೇನೆ. ನೀವೂ ಕೂಡ ಮರಾಯಾರ್ಧವಾಗಿ ಮನುಷ್ಯ ರೂವದಿಂದ ಅವತರಿಸಿ ನನ್ನ ಆಗಮನವನ್ನು ನಿರೀಕ್ಷಿಸಿಕೊಂಡಿರಿ. ಆಗ ನಿಮ್ಮ ಹೃದಯಾಭಿಲಾ ಷೆಯು ಸಂಪೂರ್ಣವಾಗುತ್ತದೆ” ಎಂದುತ್ತರವನು. ಆನಂತರ ಚಂದ್ರಶೇಖರನು ತನ್ನ ತನುಒನಾದ ಗುಹನಂ ಕುರಿತು-..ಎಲೈ ಕ್ರೌಂಚದಾರ್ರನೆ ! ಕಾಂಡತ್ರಯಾತ್ಮಕವಾದ ವೇದವು ಉದ್ಧರಿಸಲ್ಪಟ್ಟರೆ ಬ್ರಾಹ್ಮಣರು ಉದ್ದರಿಸಲ್ಪಟ್ಟಂತಾಗುವರು. ನನ್ನಿಂದಲೇ ಅಪ್ಪಣೆಯಂ ಪಡೆದುಹೋಗಿರುವ ಶೇಷ ಎಷ್ಟು ಗಳು ಸಂಕರ್ಷಣಸತಂಒಲಿಗಳೆಂಬ ಮುನಿಗಳಾಗಿ ಉಪಾಸನಾ ಮತ್ತು ಯೋಗ ಕಾಂಡಗಳನ್ನು ಉದ್ಘಾರಮಾಡುತ್ತಲಿರುವರು. ಮೂರನೆಯದಾದ ಜ್ಞಾನಕಾಂಡವನ್ನು ನಾನೇ ಉದ್ಧಾರಮಾಡುವೆನು, ನೀನು ಜೈಮಿನಿಯ ಪೂರ್ವಮೀಮಾಂಸವೆಂಬ ಕರ್ಮ ಕಾಂಡವನ್ನು ಊರ್ಜಿತಸ್ಥಿತಿಗೆ ತಂದು ಸುಬ್ರಹ್ಮಣನೆಂಬ ಹೆಸರನ್ನು ಅನರ್ಹಗೊಳಿಸ ಬೇಕು. ಬ್ರಹ್ಮನೂ ನಿನಗೆ ಸೌಗತಾದಿಗಳ ನಾಶವಿಷಯದಲ್ಲಿ ಮಂಡನ ಮಿಶ್ರಾಭಿಖ್ಯಾ