ಪುಟ:ಶಂಕರ ಕಥಾಸಾರ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಂಕರಾಸರ ದೃನು, ಆ ನದಿಗೆ ಸಮೀಪದಲ್ಲಿ ವಿಖ್ಯಾತವಾದ ಕಾಲಟಿ ಎಂಬ ಅಗ್ರಹಾರವಿತ್ತು. ಅಲ್ಲಿ ವಿದ್ಯಾಧಿರಾಜನ ಮಗನಾದ ಶಿವಗುರುವು ಪತ್ನಿಯಾದ ಆರ್ಯಾಂಬಿಕೆಯಿಂದ ಸಹಿತ ನಾಗಿ ಅನೇಕ ಯಾಗಾದಿಗಳನ್ನೂ, ವ್ರತಗಳನ್ನೂ ಮಾಡಿಕೊಂಡು ಅತಿಥಿ ಅಭ್ಯಾಗತರಿಗೆ ಅನ್ನದಾನವಂಮಾಡುತ್ತಾ ಧರ್ಮದಿಂದಿರುತ್ತಿದ್ದನು. ಅವರಿಗೆ ಬಹಳ ಕಾಲದವರಿವಿಗೂ ಪುತ್ರೋದಯವೇ ಆಗಲಿಲ್ಲ. ಇದೊಂದು ಚಿಂತೆಯು ಅವರನ್ನು ಬಹಳವಾಗಿ ಕಾಡು ತಿತ್ತು. ಅನಂತರ ಆ ದಂಪತಿಗಳು ಜ್ಯೋತಿರ್ಲಿಂಗರೂಪಧಾರಿಯಾದ ಪರಮೇಶ್ವರನನ್ನು ಭಜಿಸಿದರೆ ಆ ಮಹಾತ್ಮನ ಅನುಗ್ರಹದಿಂದ ತಮ್ಮ ವಾಂಛಿತಾರ್ಥವು ಸಿದ್ಧಿಸ ಬಹು ದೆಂದು ತಿಳಿದು ಅಗಸ್ಯಶಿಷ್ಯರಿಂದಪದೇಶಿಸಲ್ಪಟ್ಟ ಶಿವಮಂತ್ರವನ್ನು ಹಿಸುತ್ತಾ ಭಕ್ತ ವರದನಾದ ಆ ಮಹಾದೇವನನ್ನು ಹನ್ನೆರಡುವರ್ಷಕಾಲ ಸಕಲಶ್ರಮಗಳನ್ನೂ ಸಹಿ ಸಿಕೊಂಡು ನಿಶ್ಚಲಜ್ಞಾನದಿಂವಾರಾಧಿಸುತ್ತಿದ್ದರು. ಹೀಗಿವೆ, ಒಂದಾನೊಂದುದಿನ ಮಹೇಶ್ವರನು ವೃದ್ದ ಬ್ರಾಹ್ಮಣವೇಷದಿಂದ ಬಂದು ಸ್ವಪ್ನದಲ್ಲಿ ಶಿವಗುರುವನ್ನು ಕುರಿತು : ಎಲೈಶಿವಗುರುವೇ ! ನಿನ್ನ ಭಕ್ತಿಗೆ ನಾನು ಮೆದೆನು, ನಿನಗೇನು ಬೇಕು ಎಂದನು. ಅದಕ್ಕೆ ಶಿವಗುರುವು ಸ್ವಾಮಿ? ಪುತ್ರರ ತವು ಉದಯಿಸುವಂತೆ ವರವನ್ನು ದಯಪಾಲಿಸಿದರೆ ಸಾಕು ಎಂದುತ್ತರವಿತ್ತನು. ಮಹೇಶ್ವರನು ಪುನಃ ( ನಿನಗೆ ಸುರಣಿಯ, ಸಕಲಶಾಸ್ತ್ರ , ಅಲ್ಪಾ ಯುವೂ, ಆದಓರ್ವ ಪ್ರತ್ರನುಬೇಕೋ ? ಅಥವಾ ದುರ್ಗಣಿಗಳೂ, ದಡ್ಡರೂ, ದೀರ್ಘಾಯುಷ್ಮಂತರೂ ಆದ ಬಹುಮಂದಿ ಪುತ್ರರುಬೇಕೋ?” ಎಂದು ಕೇಳಲು ---- ಶಿವಗುರುವು ತನಗೆ, ಸುಗುಣಿಯ, ಸಕಲಶಾಸ್ತ್ರಜ್ಞನೂ, ಅಲ್ಪಾಯುವೂ ಆದಓರ್ವ ಪ್ರತ್ರನೇಸಾಕೆಂರುತರವಿತ್ತನು. ಮಹೇಶ್ವರನು ಹಾಗೆಯೇ ಆಗಲೆಂಮಹೇಳಿ ನಿಭೂತಿಯನ್ನೂ , ಫಲವನ್ನೂ, ಮಂತ್ರಿಸಿಕೊಟ್ಟು ಅಂತರ್ಹಿತನಾದನು. ಅನಂತರ ಈ ದಂಪತಿಗಳು ಎಚ್ಚರವಾದಮೇಲೆ ದೇವಗೆ ನಮಸ್ಕರಿಸಿ ಸ್ವಗ್ರ ಹಕ್ಕೆ ತೆರಳಿ ತನವಾದ ಶುಭವಾರ್ತೆಯನ್ನು ಬಂಧುವರ್ಗಕ್ಕೆ ತಿಳಿಸಲು ಅವರು « ನಿಮ್ಮ ವಂಶವೇಪವಿತ್ರವಾಯಿತು ನೀವು ಕೃತ ಕೃತ ರಾದಿ ” ಎಂದುಸುರಿದರು. ಈದಂಪತಿಗಳು, ಮಂತ್ರಜಪಾನ್ತಿಯನ್ನು ಮಾಡಿ, ಅಕ್ಷ ಜನ ಬ್ರಾಹ್ಮಣರ ಭೋಜನದಿಂದ ೧, ರುದ್ರಾಭಿಷೇಕದಿಂದಲೂ, ಚತುರ್ವೆದ ಪಾರಾಯಣದಿಂದಲೂ ಗೋಬ್ರಾಹ್ಮಣರೆಂದ'-೩, ಪರಮೇಶ್ವರನ ಸೇವೆಯಂಗಾತ್ಯಾ ಸುಕೃತವೂ