ಪುಟ:ಶಂಕರ ಕಥಾಸಾರ.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೨ ಕಾದಂಬರೀಸಂಗ್ರಹ ಯಾರು ? ಯಾರಮಗನು ? ನಿನ್ನ ಹೆಸರೇನು ? ನಿನ್ನ ಜಾತಿ ಕುಲ ಗೋತ್ರಗಳಾವವು? ಯಾಕೆ ಜಗನಂತಿರುವಿ ?” ಎಂದು ಆ ಬಾಲಕನನ್ನು ಕೇಳಿದರು, ಅದಕ್ಕೆ ಆ ಬಾಲನು ( ಸ್ವಾಮಿ ! ನಾನು ಮನುಷ್ಯನಲ್ಲ; ದೇವ, ಯಕ್ಷಬ್ರಾ ಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರರಲ್ಲಿ ಒಬ್ಬನೂ ಅಲ್ಲ. ಬ್ರಹ್ಮಚಾರೀ, ಗೃಹಸ್ಥನೂ, ವಾನಪ್ರಸ್ಥನೂ, ಸನ್ಯಾಸಿಯೂ ಅಲ್ಲ ಅಹಂಬ್ರಹ್ಮಾಸ್ಮಿ' ಎಂಬ ಅದ್ರೆ ತತವೇ ನಾನು ” ಎಂದನು. ಅವನ ಉತ್ತರವನ್ನು ಕೇಳಿ ಆಚಾರೈರು ಸಂತೋಷಪಟ್ಟು ನಿನ್ನ ಮಗನ ಸನ್ಯಾಸಕ್ಕೆ ಅರ್ಹನು ' ಎಂದು ಅವನ ತಂದೆಗೆ ಹೇಳಿ ಅವನಿಗೆ ಸನ್ಯಾಸವಂ ಕೊಟ್ಟು, ಅದೈತತತ್ತ್ವವನ್ನು ಕರದಲ್ಲಿರುವ ಆ ಮಲಕ (ನೆಲ್ಲಿಕಾಯಿ) ದಂತೆ ತೋರಿಸಿದ್ದರಿಂದ ಅವನಿಗೆ ಹಸ್ತಾಮಲಕ' ನೆಂಬ ನಾಮಧೇಯವನ್ನಿಟ್ಟು ಭಾಷ್ಯಪದೇಶವಂ ಮಾಡು ಆದ್ದರು. ಹೀಗಿರಲು ಒಂದುದಿನ, ವಿಶ್ವನಾಥಾಧ್ವರಿಯ ಪುತ್ರನಾದ ಕಳಶಿನಾಥನು ಬಂದು ಆಚಾರರನ್ನು –

  • ವಿದಿತಾಖಿಲಶಾಸ್ತ್ರಸುಧಾಜಲದೇ

ಮಹತೋಪನಿಷತ್ಕಥಿತಾರ್ಥನಿಧೇ | ಹೃದಯೇ ಕಲಯೇ ವಿಮಲಂ ಚರಣಮ್ ಭವ ಶಂಕರದೇಶಿಕ ಮೇ ಶರಣಮ್ || ೧ || ಕರುಣಾವರುಣಾಲಯ ಪಾಲಯ ಮಾಮ್ ಭವಸಾಗರದುಃಖವಿದೂನಡ್ಕದಮ್ | ರಹಿತಾಖಿಲದರ್ಶನತತ್ತ್ವವಿದ ಭವ ಶಂಕರದೇಶಿಕ ಮೇ ಶರಣಮ್ || ೨ || ಭವತಾ ಜನತಾ ಸುಹಿತಾ ಭವಿತಾ ನಿಟಬೋಧವಿಚಾರಣಚಾರುಮತೇ | ಕಲಯೇಶ್ವರಜೀವವಿವೇಕವಿದ ಭವ ಶಂಕರದೇಶಿಕ ಮೇ ಶರಣಮ್ || ೩ || * ಸದ್ದು ರು ಭಕ್ತರು ಈ ಸ್ತೋತ್ರವನ್ನು ನಿತ್ಯ ಪಾರಾಯಣದಲ್ಲಿಡುವುದು ಶ್ರೇಯಸ್ಕರವು,