ಪುಟ:ಶಂಕರ ಕಥಾಸಾರ.djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಶಂಕರಕಥಾಸಾರ

೫೧

ಸುಮಾರು ಅರ್ಧರಾತ್ರೆಯ ಸಮಯದಲ್ಲಿ ದೇವಿಯು ಬಹಳ ಆರ್ಭಟವನ್ನು ಮಾಡಿ
ಕೊಂಡು ಬಂದು ಜಗುಲಿಯ ಮೇಲಿದ್ದ ಆಚಾರ್ಯರನ್ನು ನೋಡದೆ ಹೊರಟಳು. ಆಗ
ಆಚಾರ್ಯರು ಅವಳ ಹಿಂದೆಯೇ ಹೊರಟರು.
ದೇವಿಯು ಊರನ್ನೆಲ್ಲಾ ಸುತ್ತಿ ಎಲ್ಲಿಯೂ ಯಾರನ್ನೂ ಕಾಣದೆ ದೇವಾಲ
ಯದ ಹೊರಬಾಗಿಲಿನಲ್ಲಿ ನಿಂತಳು.
ಆಗ ಶಂಕರರು ಆಕೆಗೆ ನಮಸ್ಕರಿಸಿ ನಿಲ್ಲಲು ಆಕೆಯು ಆಚಾರ್ಯರನ್ನು “ ನೀನು
ಯಾರು ? ಏಕೆಬಂದೆ ? ನಿನ್ನ ನಾರುಬರಹೇಳಿದರು? ” ಎನ್ನಲು ದೇಶಿಕರು" ಮಾತಃ
 ! ನಾನು ನಿನ್ನ ಮಗನು ; ಇಲ್ಲಿಗೆ ನಾನಾಗಿಯೇ ಬಂದೆನು ; ಲೋಕರಕ್ಷಕಳಾದ ನಿನಗೆ
ಪ್ರಜಾಹಿಂಸೆಯು ಯುಕ್ತವಲ್ಲ ; ” ಎಂದರು.
ಅದಕ್ಕೆ ದೇವಿಯು ಸ್ವಲ್ಪ ಶಾಂತಳಾಗಿ " ಎಲೈ, ನೀನು ಹೇಳುವುದು ಸತ್ಯ;
ಆದರೆ ಈ ಊರಿನವರು ನನಗೆ ಸಂಪೂರ್ಣಾಹಾರವನ್ನು ಕೊಡರು” ಎನ್ನಲು, ಶಂಕ
ರರು "ಅಮ್ಮಾ! ನೀನು ಜನಗಳಿಂದ ಬೇಕಾದಷ್ಟು ಆಹಾರವನ್ನು ತರಿಸಿಕೊಂಡು
ತೃಪ್ತಳಾಗಬೇಕೇ ವಿನಹಾ ಹೀಗೆ ಪ್ರಜಾಹಿಂಸೆಮಾಡಕೂಡದು” ಎಂದು ಹೇಳಿ, ಪೀಠ
ದಮೇಲೆ ಹೋಗಿ ನಿಂತ ದೇವಿಯ ಪಾದದ ಸಮೀಪದಲ್ಲಿದ್ದ ಕುಂಕುಮವನ್ನು ಚೆಲ್ಲಿ
ಶ್ರೀ ಚಕ್ರವಂ ಬರೆದು ಹಿಂತಿರುಗಿ ಬಂದರು. ಮರುದಿನ ಆ ಅಗ್ರಹಾರಿಕರು ಆಚಾರ್ಯರಿಗೆ
ವಂದಿಸಿ ರಾತ್ರಿ ನಡೆದ ವಿಷಯವನ್ನು ತಿಳಿದು ಆಚಾರ್ಯರಿಗೆ ವಂದಿಸಿದರು. ಅನಂತರ
ಆಚಾರ್ಯರು ಒಂದು ಶಿಲೆಯ ಮೇಲೆ ಶ್ರೀ ಚಕ್ರವನ್ನು ಕೆತ್ತಿಸಿ ಅದನ್ನು ದೇವಿಯ ಪಾದದ
ಕೆಳಗೆ ಸ್ಥಾಪಿಸಿದರು.

ಶೈವಮತಖಂಡನನು.

ಕಾಂಚಿಯಲ್ಲಿ ಆಚಾರ್ಯರು ಎರಡು ತಿಂಗಳು ಇರುತ್ತಿರಲು ಅವರ ಸಮೀಪಕ್ಕೆ
ಅದ್ವೈತದ್ರೋಹಿಗಳೂ, ಲಿಂಗಾಂಕಿತಭುಜದ್ವಯರೂ ಆದ ಶೈವರು ತಲೆಯಲ್ಲಿ ತ್ರಿಶೂ
ಲವನ್ನೂ ,ಲಿಂಗವನ್ನೂ ಇಟ್ಟುಕೊಂಡು ಹೃದಯ, ನಾಭಿ ಮುಂತಾದ ಸ್ಥಳಗಳಲ್ಲೆಲ್ಲಾ
ಲಿಂಗದಿಂದ ಚಿತ್ರಿತರಾಗಿಬಂದು" ಸ್ವಾಮೀ ! 'ಋತಂಸತ್ಯಂ ಪರಂಬ್ರಹ್ಮ. ........
ವಿಶ್ವರೂಪಾಯವೈ ನಮಃ ' ಮತ್ತು 'ದ್ಯೌರ್ಮೂರ್ಧಾನಂ ... ... ... . .ಶರಣಮಹಂ
ಪ್ರಪದ್ಯೆ ' ಇತ್ಯಾದಿ ಶ್ರುತಿವಾಕ್ಯಗಳಲ್ಲಿ ಹೇಳಿರುವಂತೆ ಈಶ್ವರನಲ್ಲಿ ಭಕ್ತಿಯುಳ್ಳವರಾಗಿ
ದ್ದರೆ, ಅವರಿಗೆ ಶಿವಲೋಕಪ್ರಾಪ್ತಿಯಾಗುತ್ತದೆ ; ಮತ್ತು ಎಲೈ ಯತಿಯೇ ! ಈಶ್ವ
ರನು ದೂರ್ವಾಸರನ್ನು ಕುರಿತು 'ಪರಾತ್ಪರನೂ, ಏಕಾಕ್ಷರರೂಪಿಯೂ ಆದ ನಾನೂ