ಪುಟ:ಶಂಕರ ಕಥಾಸಾರ.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಶಂಕರಕಥಾಸಾರ

೫೫

ವೈಷ್ಣವಮತಖಂಡನವು.

ಅನಂತರ ಶಂಕರಭಗವತ್ಪಾದರು ಅನಂತಶಯನಕ್ಕೆ ಹೋಗಿ, ಅಲ್ಲಿದ್ದ ರಾಮ
ರಾಜನಿಂದ ವಂದಿಸಲ್ಪಟ್ಟು, ಅಲ್ಲಿ ತಮ್ಮ ಗ್ರಂಥಗಳನ್ನು ಪ್ರಚಾರಮಾಡುತ್ತಿರಲು, ವೈಷ್ಣ
ವಾಚಾರತತ್ಪರರೂ, ಶಂಖ, ಚಕ್ರ, ಗದಾ, ಶಾರ್ಜಚಿಹ್ನೆಗಳಿಂದ ಪರಿಜಹ್ನಿನಿತರೂ,
ತುಲಸೀ ಮತ್ತು ತುಲಸೀಮಣಿಗಳ ಮಾಲೆಗಳನ್ನು ಧರಿಸಿರುವವರೂ, ಹರಿನಾಮಗಳನ್ನು
ಜಪಿಸುತ್ತಲಿರುವರೂ, ಗೋಪೀಚಂದನದಿಂದ ಲೇಪಿಸಲ್ಪಟ್ಟ ದೇಹವುಳ್ಳವರೂ, ಕರ್ಣಗ
ಳಲ್ಲಿ ತುಳಸೀಪತ್ರವನ್ನು ಧರಿಸಿ ಅಂಗಾರತಿಲಕವನ್ನು ಇಟ್ಟುಕೊಂಡವರೂ ಆದ ವಿಷ್ಣು
ಶರ್ಮ, ಪದ್ಮನಾಭ, ಕೃಷ್ಣದ್ವೈಪಾಯನ, ವ್ಯಾಸದಾಸ, ವರಾಹಾಚಾರ್ಯ ಎಂಬ
ವೈಖಾನಸಾಗಮದಕ್ಷರೂ, ಪಾಂಚರಾತ್ರಾಗಮತತ್ಪರರೂ, ವೇದಮಾರ್ಗವನ್ನು ಅಪಲಾ
ಪಿಸುವುದರಲ್ಲಿ ಸಮರ್ಥರೂ ಆದವರಾಗಿ ಬಂದು ದೇಶಿಕೇಂದ್ರರನ್ನು ಕುರಿತು "ಎಲೈ
ಯತಿಗಳೇ ! ಪ್ರಪಂಚದಲ್ಲಿ ಭೇದವೇಸತ್ಯವು; ಎನ್ನುವ ಶ್ರೇಷ್ಠನಾದ ಸ್ವಾಮಿಯು;
ವೈಷ್ಣವಮತವಿನಾ ಉಳಿದ ಮಠಗಳೆಲ್ಲಾ ಮೋಹವನ್ನುಂಟುಮಾಡುತ್ತವೆ; ಜಗತ್ಪ್ರಯವು
ಮಹಾವಿಷ್ಟು ವಿನಿಂದ ಉತ್ಪನ್ನವಾಗಿ ಅವನಿಂದಲೇ ರಕ್ಷಿತವಾಗಿವೆ; ಸಂಸಾರವೆಂಬ
ಸರ್ಪದಿಂದ ದಷ್ಟನಾದವನು . ಕೃಷ್ಣ ಎಂಬ ಭೇಷಒರೂಪವಾದ ಮಂತ್ರವನ್ನುಚ್ಚರಿಸಿ
ದರೆ ಮೋಕ್ಷವನ್ನು ಹೊಂದುತ್ತಾನೆ; ಮಕ್ಕಳು ತಾಯಿಯನ್ನು ಆಶ್ರಯಿಸಿ ಹೇಗೆ
ಬೆಳೆಯುತ್ತವೆಯೋ ಹಾಗೆಯೇ ವೈಷ್ಣವಮಂತ್ರವನ್ನು ಆಶ್ರಯಿಸಿ ಜನಗಳೆಲ್ಲಾ
ಇದ್ದಾರೆ ; ವಿಷ್ಣುಭಕ್ತಿ ಇಲ್ಲದವರಿಗೆ ವೇದಗಳಿಂಗೇನು ? ಶಾಸ್ತ್ರಗಳಿಂದೇನು ? ತೀರ್ಥಸೇ
ವೆಯಿಂದೇನು ? ತಪಸ್ಸುಗಳಿಂದೇನು ? ಯಾಗಾದಿಗಳಿಂದೇನು ಪ್ರಯೋಜನವು ? ಭಕ್ತಿಯೇ
ಮೋಕ್ಷ ಪ್ರದವು; ಭಕ್ತಿಯೇ ಫಲದಾಯಕವು; ಭಕ್ತಿಯೇ ದೊಡ್ಡದು; ಆದ್ದರಿಂದ
ಎಲೈ ಯತಿಗಳೇ ! ನಮ್ಮ ಮತವನ್ನಾಶ್ರಯಿಸಿ' ಎನ್ನಲು
ಶಂಕರರು ವಿಷ್ಣು ಕರ್ಮಾದಿಗಳೇ ! ಯಜ್ಞಾಭದಿಕರ್ಮಗಳನ್ನು ತ್ಯಜಿಸಿ ಭಕ್ತಿ
ಯನ್ನು ಅಪೇಕ್ಷಿಸುವಿರಿ ; ಭಿನ್ನ ರಸವಾದ ದ್ತೈತಭಕ್ತಿಯಿಂದ ಸಂಸಾರವು ವೃದ್ಧಿ;
ಹೊಂದುತ್ತದೆ. ಅಭಿನ್ನರೂಪವಾದ ಅದ್ವೈತಭಕ್ತಿಯಿಂದ ಮೋಕ್ಷ ಉಂಟಾಗುತ್ತದೆ
ದೈತರೂಪವಾದ ಭಕ್ತಿಯು ಕ್ಲೇಶದಾಯಕವು; ಅಚಲವಾದ ಅದ್ವೈತಭಕ್ತಿಯು
ಸುಖದಾಯಕವು; ಆದ್ದರಿಂದ ಸರ್ವಸಿದ್ಧಿದಾಯಕವಾದ ಅದ್ವೈತಭಕ್ತಿಯನ್ನು ಆಶ್ರ
ಯಿಸಬೇಕು; ಆ ಭಕ್ತಿಯಿಂದ ಚಿತ್ತವು ಶುದ್ಧವಾಗುತ್ತದೆ; ಚಿತ್ತಶುದ್ಧಿಯಿಂದ ಜ್ಞಾನ
ವುಂಟಾಗುತ್ತದೆ; ಆ ಜ್ಞಾನದಿಂದಲೇ ಮೋಕ್ಷಒರುವುದಲ್ಲದೇ ಕಲ್ಪಕೋಟಿಶತಗಳಿo
ದಲೂ ಬರಲಾರದು; ಹರಿಯ ರೂಪವನ್ನೇ ಶಂಭುವು ದು ಧರಿಸಿರುತ್ತಾನೆ ; ಶಂಭುರೂಪವನ್ನೇ
ಹರಿಯು ಧರಿಸಿರುತ್ತಾನೆ; ಅವರಿಬ್ಬರಿಗೂ ಸ್ಪಲ್ಪವೂ, ಭೇದವೇ ಇಲ್ಲ ; ಯಾವನು ಭೇದ