ಪುಟ:ಶಂಕರ ಕಥಾಸಾರ.djvu/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೫೬

ಕಾದಂಬರೀಸಂಗ್ರಹ

ವನ್ನು ಮಾಡುವನೋ ಅವನು ದೋಷಭಾಗಿಯಾಗುತ್ತಾನೆ; ಪರಬ್ರಹ್ಮದಿಂದ ಅಭಿನ್ನ
ನಾದ ತನ್ನನ್ನು ಭಿನ್ನನನ್ನಾಗಿ ಯಾವನು ತಿಳಿಯುವನೋ ಅವನು ಸಾಕ್ಷಾದ್ಬ್ರ
ಹ್ಮಘಾತುಕನು, ಅಜ್ಞಾನಸಾಗರಮಗ್ನರಾದ ಪಾಪಿಗಳು ಮಾತ್ರ ಭೇದವನ್ನು ಎಣಿ
ಸುವರು ; ಯುಗಾಂತ್ಯದಲ್ಲಿ ಹರಿಯೇ ರುದ್ರರೂಪದಿಂದ ಸಕಲ ಜಗತ್ತನ್ನೂ ನಾಶ
ಮಾಡುವನು ; ಆ ರುದ್ರನೇ ಬ್ರಹ್ಮರೂಪದಿಂದ ಪುನಃ ಸಕಲ ಜಗತ್ತನ್ನೂ ಸೃಷ್ಟಿಸಿ
ವಿಷ್ಟು ರೂಪದಿಂದ ರಕ್ಷಿಸುತ್ತಾನೆ. ಆದ್ದರಿಂದ ಬ್ರಹ್ಮ, ವಿಷ್ಣು, ಮಹೇಶ್ವರರೆಂಬ
ಭೇದವಿಲ್ಲ; ಪರಬ್ರಹ್ಮರೂಪಿಯಾದ ಆ ಶಿವನೇ
ಎಲ್ಲರಿಗೂ ಗುರುವು ; ಆ ಶಿವನೇ ಜೀವನು ; ಶಿವನೇ ಪ್ರಾಣಿಗಳಿಗೆ ಬಂಧವು ; ಶಿವನೇ
ಪ್ರಾಣಿಗಳ ಆತ್ಮನು ; ಶಿವನೇ ದೇವನು ; ಆ ಶಿವನಿಗಿಂತ ಬೇರೆಯಾದದ್ದು ಯಾವುದೂ ಇಲ್ಲ ; ಬ್ರಹ್ಮ, ವಿಷ್ಣು,
ಮಹೇಶ್ವರರು ಯಾವನು ಛೇದ ವನ್ನು ಎಣಿಸುವನೋ ಅವನು ಚಂದ್ರತಾರಕಗಳಿ
ರುವವರಿವಿಗೂ ನರಕಯಾತನೆಯನ್ನನುಭವಿಸುವನು ; ಯಾವನು ಸ್ವಕರ್ಮವನ್ನು ತ್ಯಜಿ
ಸಿ ಭಕ್ತಿ ಮಾತ್ರದಿಂದಲೇ ಜೀವಿಸುವನೋ ಅವನ ವಿಷಯದಲ್ಲಿ ವಿಷ್ಣುವು ತೃಪ್ತಿ
ಯಾಗುವುದಿಲ್ಲ; ಏಕೆಂದರೆ ವಿಷ್ಣುವು 'ಆಚಾರದಿಂದ ಪೂಜಿಸಲ್ಪಡತಕ್ಕವನು; ಸ್ವಧರ್ಮ
ಹೀನರಿಗೆ ಭಕ್ತಿಯೂ ಕೂಡ ದುಃಖಪ್ರದವು; ಹರಿಭಕ್ತನೇ ಆಗಲಿ ಹರಭಕ್ತನೇ ಆಗಲೀ
ಸ್ವಾಶ್ರಮಾಚಾರವನ್ನು ತ್ಯಜಿಸಿದರೆ ಅವನು ಭ್ರಷ್ಟನಾಗುವುದರಲ್ಲಿ ಸಂದೇಹವಿಲ್ಲ:
ಪರಬ್ರಹ್ಮನು ಸೃಷ್ಟಿ ಸಮಯದಲ್ಲಿ ತನ್ನ ವಾಮಭಾಗದಿಂದ ವಿಷ್ಣುವನ್ನು ಸೃಷ್ಟಿಸಿದನು;
ತನ್ನ ಬಲಭಾಗದಿಂದ ಬ್ರಹ್ಮನನ್ನೂ , ತನ್ನ ಹೃದ
ಯದಿಂದ ರುದ್ರನನ್ನೂ ಸೃಷ್ಟಿಸಿದನು;
ಆ ಬ್ರಹ್ಮನಿಗೆ ಪಾಣಿಪಾದಗಳಿಲ್ಲ; ಅವನಿಗೆ ಜನನಮರಣಗಳಿಲ್ಲ; ಅವನು ಎಲ್ಲರ ಹೃದ
ಯದಲ್ಲಿದ್ದಾನೆ ; ಅವನಿಗೆ ಆಕಾರವಿಲ್ಲ; ಕಣ್ಣು ಕಿವಿಗಳಿಲ್ಲ: ಇಷ್ಟಾದರೂ ಅವನು ನಾವಾಡುವುದನ್ನು ಕೇಳುತ್ತಲೂ ಮಾಡುವುದನ್ನು ನೋಡುತ್ತಲೂ ಇರುತ್ತಾನೆ;
ಸೂಕ್ಷದರ್ಶಿಗಳಾದ ಋಷಿಗಳು ಮಾತ್ರ ಆತ್ಮಾನುವರ್ತಿಯಾದ ಆ ಬ್ರಹ್ಮನನ್ನು
ನೋಡುತ್ತಾರೆ ; ಆದ್ದರಿಂದ ಬ್ರಹ್ಮ ಸದೃಶವಾದ ಈ ನಮ್ಮ ದೇಹಾದಿಗಳಿಗೆ ಚಿನ್ನ ಕಲ್ಪನ
ವು ಹೇಗೆ ? ಅದನ್ನು ಧರಿಸಿದರೆ ಜ್ಞಾನವುಳ್ಳವನೂ ಮುಕ್ತಿಯುಳ್ಳವನೂ ಹೇಗೆ ಆಗು
ತ್ತಾನೆ ? ಮನುಜನು ವೇದೋಕ್ತಕರ್ಮಗಳನ್ನು ಆಚರಿಸುತ್ತಾ ಕ್ರಮವಾಗಿ ಜ್ಞಾನ
ವನ್ನೂ ಆನಂತರ ಮೋಕ್ಷವನ್ನೂ ಹೊಂದುತ್ತಾನೆ ; ನಿತ್ಯಕರ್ಮಪರಿತ್ಯಾಗದಿಂದ
ನರನು ಪತಿತನಾಗುತ್ತಾನೆ ; ಶಂಖಚಕ್ರಾಂಕಿತವಾದ ದೇಹವನ್ನು ನೋಡಿದ ಕೂಡಲೇ
ಸ್ನಾನಮಾಡಬೇಕು ; ಅಂತಹವನನ್ನು ಮಾತಿನಿಂದಲೂ ಅರ್ಚಿಸಕೂಡದು ; ಜೀವಚ್ಛವ
ದಂತಿರುವ ಅವನು ಶೂದ್ರನಂತೆ ಬಿಡಲ್ಪಡತಕ್ಕವನು ; ಅವನಿಗೆ ಕೊಡಲ್ಪಟ್ಟ ಹವ್ಯ
ಕವ್ಯಗಳು ವ್ಯರ್ಥವಾಗುತ್ತವೆ ; ಅವನು ವೇದೋಕ್ತ ಕರ್ಮಾನುಯಾಯಿಯಾದರೂ