ಪುಟ:ಶಂಕರ ಕಥಾಸಾರ.djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಶಂಕರಕಥಾಸಾರ

೬೭

ಆಗ ಶಾರದೆಯು ಏನೂ ಉತ್ತರವನ್ನು ಕೊಡದಿರಲು ಶಂಕರದೇಶಿಕರು ಸರ್ವ
ಜ್ಞ ಪೀಠವನ್ನು ಅಧಿರೋಹಿಸಿ ಗಾರ್ಗ್ಯ,ಕಪೋಲ ಮುಂತಾದವರಿಂದ ಯಾಜ್ಞವ
ಲ್ಕ್ಯರು ಸೇವಿಸಲ್ಪಟ್ಟಂತೆ, ಶಾರದಾ ಮತ್ತು ವಿದ್ವಾಂಸರುಗಳಿಂದ ಪೂಜಿಸಲ್ಪಟ್ಟರು.
ಆಗ ಇಂದ್ರಾದಿ ದೇವತೆಗಳು ಆಚಾರ್ಯರ ತಲೆಯಮೇಲೆ ಕಲ್ಪವೃಕ್ಷದ
ಪುಷ್ಪಗಳಿಂದ ವೃಷ್ಟಿಯನ್ನು ಸುರಿಸಿ ಸಂತೋಷದಿಂದ ಸ್ವಲೋಕಾಭಿಮುಖರಾದರು.
ಬಳಿಕ ಶಂಕರದೇಶಿಕರು ತಮ್ಮ ಭಾಷ್ಯಕ್ಕೆ ಜ್ಞಾನರಾಜ್ಯ ಪಟ್ಟಾಭಿಷೇಕವಂ
ಮಾಡಿ ಜಗದ್ಗುರುತ್ವವನ್ನು ವಹಿಸಿ ಸುರೇಶ್ವರರೇ ಮೊದಲಾದ ಕೆಲವರು ಶಿಷ್ಯರನ್ನು
ಶೃಂಗಗಿರಿಯಲ್ಲಿ ಇರುವಂತೆ ಹೇಳಿದರು.
ಇವರ ಮಹಿಮೆಯನ್ನು ಕೇಳಿದ ಜ್ಞಾನಿಗಳೂ, ರಾಜರೂ, ಸಂಘಪತಿಗಳೂ
ಮೊದಲಾದವರು ಬಂದು" ಸ್ವಾಮಿ ! ಲೋಕದಲ್ಲಿ ವರ್ಣಾಶ್ರಮ ಧರ್ಮ ಕೆಡ
ದಂತೆಯೂ, ಧರ್ಮಬ್ರಹ್ಮ ಮೀಮಾಂಸಶಾಸ್ತ್ರಗಳು ನೆಲೆಗೊಂಡಿರುವಂತೆಯೂ, ಆಸೇ
ತುಪಿಮಾಚಲಪರ್ಯಂತವಾದ ಈ ಭರತಖಂಡದಲ್ಲಿ ಸದಾಚಾರವಿಚಾರದಿಂದ ಧರ್ಮವಂ
ಪರಿಪಾಲಿಸುತ್ತಿರುವಂತೆ ತಮ್ಮ ಶಿಷ್ಯರನ್ನು ಮಠಾಧಿಪತಿಗಳಾಗಿ ಏರ್ಪಡಿಸಿ ಲೋಕ
ವೆಲ್ಲವೂ ತದಾಜ್ಞಾನುನುಸಾರ ಇರುವಂತೆ ಮಾಡಬೇಕು' ಎಂದು ಪ್ರಾರ್ಥಿಸಿದರು.
ಶಂಕರ ದೇಶಿಕರು ಪೂರ್ವದಿಕ್ಕಿನಲ್ಲಿರುವ ಜಗನ್ನಾಥದಲ್ಲಿ ಭೋಗ
ವರ್ಧನವೆಂಬ ಮಠವನ್ನು ನಿರ್ಮಿಸಿ, ಅಲ್ಲಿಗೆ ಪದ್ಮ ಪಾದರನ್ನು ಅಧೀಶರನ್ನಾಗಿ ಮಾಡಿ
ಪಶ್ಚಿಮದಿಕ್ಕಿನಲ್ಲಿರುವ ದ್ವಾರದಲ್ಲಿ ಒಂದು ಮರವನ್ನು ನಿರ್ಮಿಸಿ ಅಲ್ಲಿಗೆ ಹಸ್ತಾ
ಮಲಕರನ್ನು ಒಡೆಯರನ್ನಾಗಿಮಾಡಿ, ಉತ್ತರದಿಕ್ಕಿನಲ್ಲಿ ಬದರಿಕಾಶ್ರಮದಲ್ಲಿ ಒಂದು
ಮಠವನ್ನು ನಿರ್ಮಿಸಿ ತೋಟಕರನ್ನು ಅಲ್ಲಿಗೆ ಅಧೀಶರನ್ನಾಗಿಮಾಡಿ, ಅನಂತರ ನಿಜ
ಯೋಗಶಕ್ತಿಯಿಂದ ಕೈಲಾಸಕ್ಕೆ ಹೋಗಿ, ಚಂದ್ರಮೌಳೀಶ್ವರ ದಿವ್ಯಲಿಂಗವನ್ನೂ,
ರತ್ನ ಗರ್ಭಗಣಪತಿ ಯನ್ನೂ, ದೇವ ಸೌಂದರ್ಯಲವರ್ಯಾದಿಗಳನ್ನೂ,ಸುರೇಶ್ವರರಿಗೆ ಕೊಟ್ಟು
ನಿಜಶಿಷ್ಟರಿಗೆ ಸ್ವಾತ್ಮಾನುಸಂಧಸರದಸ್ಯವನ್ನು ಪ್ರವೇಶಿಸುತ್ತಾ ಇದ್ದರು.
ಅನಂತರ ಸುರೇಶ್ವರರು ಶಂಕರರ ಇಷ್ಟದಂತೆ ತೈತ್ತಿರೀಯ ಬೃಹದಾರಣ್ಯಕಾದಿ
ಭಾಷ್ಯಗಳಿಗೆ ವಾರ್ತಿಕವನ್ನೂ, ದಕ್ಷಿಣಾಮೂರ್ತಿಸ್ತೋತ್ರಕ್ಕೆ ಮಾನಸೋಲ್ಲಾಸವೆಂಬ
ವಾರ್ತಿಕವನ್ನೂ ,ರಚಿಸಿದರು.
ಬಳಿಕ ಶಂಕರದೇಶಿಕರು ಬದುಕಾಶ್ರಮಕ್ಕೆ ಹೋಗಿ ಅಲ್ಲಿ ಕೆಲವು ದಿನಗಳಿದ್ದು
ಅಲ್ಲಿದ್ದ ಪಾತಂಜಲಶಾಸ್ತ್ರನಿಷ್ಠರಾದ ಕೆಲವರಿಗೆ ತಮ್ಮ ಭಾಷಣವನ್ನು ಪದೇಶಿಸುತ್ತಿದ್ದರು.