19 ಕಾಮ. ಬಾದಶಹನು ಸಿಟ್ಟಿನಿಂದ ಕಣ್ಣುಗಳನ್ನು ಕೆಂಡದಂತೆ ಮಾಡಿ ಹೋಗು, ಈಗಲೆ ಬಂಧಮುಕ್ತ ಮಾಡಿ ಅವನನ್ನು ಇಲ್ಲಿಗೆ ಕರ ಕೊಂಡು ಬಾ ಎಂದು ಆಜ್ಞಾಪಿಸಿದನು. ಕಡಲೆ ಕರೀಮನು ಹೊರಟು ಹೋದನು. ಆದರೆ ಕೆಲ ಹೊತ್ತಿನಲ್ಲಿ ಅವನು ತಿರುಗಿ ಬಂದು ಮ್ಯಾನ ಮುಖದಿಂದ ನುಡಿದನೇ ನಂದರೆ-ಜಹಾಂಪನಾ, ಆಜೀಮಖಾನನು ತುರಂಗದೊಳಗಿಂದ ಓಡಿ ಹೋಗಿರುವನು. ಬಾದಶಹಓಡಿಹೋಗಿರುವನೇ? : ಕರೀಮ-ಹೌದು, ನಿಶ್ಚಯವಾಗಿ ಹೋಗಿರುವನು. ಬಾದಶಹ-ಎಲ್ಲಿಗೆ ಹೋದನು? ಕರೀಮ-ನವಾಬ ಗಾಯಸುದ್ದೀನನ ಶಿಬಿರಕ್ಕೆ ಹೋದನಂ ದು ತಿಳಿಯುತ್ತದೆ. ಆಗ ದರ್ಬಾರದ ಜನರೆಲ್ಲರೂ ಬಹಳ ಹಳಹಳಿಸಹತ್ತಿದರು. ಬಾದಶಹನೂ ಈ ವಾರ್ತೆಯನ್ನು ಕೇಳಿ ಅಸಮಾಧಾನ ತಾಳಿದನು. ಬಳಿಕ ಅವನು ಕರೀಮನಿಗೆ-ಹಾಗಾದರೆ, ಗಣೇಶದೇವನನ್ನು ಕರೆದು ಕೊಂಡು ಬಾ, ಎಂದು ಹೇಳಿದನು. ಅವನೂ ಪಲಾಯನ ಮಾಡಿರುವನು?' ಎಂಬ ಉತ್ತರವನ್ನು ಕರೀಮನು ಕೊಟ್ಟದ್ದನ್ನು ಕೇಳಿ, ಬಾದಶಹನು ಭ್ರಾಂತಿಗೊಂಡು 'ಮಂತ್ರೀ ಮಂತ್ರಿ; ಈಗಾನ ಹಂಚಿಕೆಯನ್ನು ಹೇಳುತ್ತೀ ಹೇಳು ನೋಡುವಾ' ಎನ್ನಲು, ಸಭಿಕರು ಇನ್ನೆಲ್ಲಿಯ ಮಂತ್ರಿಯು? ಅವನೂ ಗಾಯಸು ದ್ವೀನನ ಪರಾಮರ್ಶದಾರ್ತೃವೇ ಆಗಿರುತ್ತಾನೆಂದು ಕೇಳುತ್ತೇವೆ, ಎಂದು ಉತ್ತರಕೊಟ್ಟರು! ಈ ವರೆಗೆ ಹಾಗೂ ಹೀಗೂ ಶೀತಲವಾಗಿದ್ದ ಸುಲ್ತಾನನ ದೇಹ