ಪುಟ:ಶತಕ ಸಂಪುಟ.pdf/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೭೦

ಶತಕ ಸಂಪುಟ


ಕಾಪುರುಷರಿಗೆ ಸುಜನರಿಂಗಿತವು ತಿಳಿಯುಂಟೆ
ಕೋಪಿಗಳ ಮನದೊಳಗೆ ಕರುಣಗುಣವಿರಲುಂಟೆ
ಪಾಪಿಮನುಜರಿಗೆಲ್ಲ ಧರ್ಮವಾಸನೆಯುಂಟೆ ನಿಂದಕಗೆ ನೀತಿಯುಂಟೆ
ಕೂಪದೊಳು ಹರಿಯುತಿಹ ಜಲವ ನೋಡಿದರುಂಟೆ
ಆ ಪರಮ ಮೂಢರಿಗೆ ಶಿವ ನಿಮ್ಮ ಸ್ಮರಣೆಯಾ
ಲಾಪದೊಳಗಿರಲುಂಟೆ ನಿಜಲಿಂಗ ಭವಭಂಗ ಶರಣಜನವರದ ಜಯತು‖ ೩೧


ಧುರಧೀರನಾದವಗೆ ಮರಣದಂಜಿಕೆಯುಂಟೆ
ವರ ಜಿತೇಂದ್ರಿಗೆ ಚದುರೆಯರ ಹಂಬಲಿರಲುಂಟೆ
ಮೆರೆವ ತ್ಯಾಗಿಗೆ ಹಣದ ಪರವೆಯೆಂಬುವುದುಂಟೆ ಬಲ್ಲರ್ಗೆ ಭಯಗಳುಂಟೆ
ಪರಮ ಸುಜ್ಞಾನಿಗಳಿಗತಿಗರ್ವವಿರಲುಂಟೆ
ಧರಣಿಯೊಳು ಮೋಕ್ಷವನು ಬಯಸುವರು ಶಿವ ನಿಮ್ಮ
ಸ್ಮರಣೆಯನು ಬಿಡಲುಂಟೆ ನಿಜಲಿಂಗ ಭವಭಂಗ ಶರಣಜನವರದ ಜಯತು‖ ೩೨


ಧೃಡವಿಲ್ಲದನ ಭಜನೆ ಸಿದ್ಧಿಯಾಗುವುದುಂಟೆ
ಕಡುಮಂದಮತಿಗೆ ಪೇಳಲು ಜ್ಞಾನ ಬರಲುಂಟೆ
ನಡತೆಹೀನನ ಹೃದಯದೊಳು ಭಕ್ತಿಗುಣವುಂಟೆ ಖೂಳರಿಗೆ ಸತ್ಯವುಂಟೆ
ಬಡಮನದವಂಗೆ ಔದಾರ್ಯಬುದ್ದಿಗಳುಂಟೆ
ಪಡೆದುದಲ್ಲದೆ ಹೆಚ್ಚು ಬರಲುಂಟೆ ನಿನ್ನೆನೆಯ
ದೊಡೆ ಸ್ಥಿರದ ಪದವುಂಟೆ ನಿಜಲಿಂಗ ಭವಭಂಗ ಶರಣಜನವರದ ಜಯತು‖೩೩


ಜಗದಂಬಕನ ಕೂಡೆ ತಮವು ಸೆಣಸುವುದುಂಟೆ
ಖಗರಾಜನೊಡನೆ ದ್ವಯಜಿಹ್ವೆ ಗೆಲ್ಲುವುದುಂಟೆ
ಭುಗಿಲೆನಿಪ ವ್ಯಾಘ್ರನೊಳು ಮೇಷ ಜಯಿಸುವುದುಂಟೆ ಕುಲಿಶ ಗಿರಿಗಂಜಲುಂಟೆ
ಮೃಗರಾಜನೊಳು ಕಾದಿ ಕುಂಭಿ ಜೀವಿಸಲುಂಟೆ