ಪುಟ:ಶಾಸನ ಪದ್ಯಮ೦ಜರಿ.djvu/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಬಲ್ಲಾಳ II


ಅನುವವರಣನಿಸ್ತಾರಕ | ನನೂನಶಕ್ತ್ಯನ್ವಿತಂ ವಿಚಾರಕ್ಷ್ಯ ಮನೆಂ |
ಬ ನೆಗಡಿಯಿಂದ ಬಲ್ಲಾ | ಕನ್ಮಪಾಳಂ ಕಾರ್ತಿಕೇಯನಂತೊಪ್ಪಿರ್ಪ೦ ||795||

ಜಯಗೊಂಡಪುರ


ತಮಗಿದ ನಂದನಂ ಪರಿವ ಕಾಲ್ಪೆ ಕಡಲ್ಗಿವೆ ನೋಡೆನಿಪ್ಪ ಪೆ |
ರ್ಗ್ಗೆ ಬಳಸಿರ್ದ ಪೆರ್ವಳಸು ಸಂದಣಿವೆ ಜನಂ ವಿಳಾಸದಿಂ ||
ಮೆರೆವರ್ಮಲಯಂ ಬಹುಗೃಹಗಳ ಗುಣ್ಣಿವಳಿಂದ ಚೆಕ್ಕು ಕ |
ಣ್ದೆರೆದವೊಲೀಜಗಕ್ಕೆ ಜಯಗೊಂಡವರಂ ನಿಸದಂ ವಿರಾಜಿಕುo li796||

ನಾಗದೇವ


ಹೃದಯಕಳಂಕನಲ್ಲದ ಒಡಾತ್ಮ ಕನಲ್ಲದ ಶೀರೋಚಿಯೆಂ |
ಬುದು ಗುರುಗೋತ್ರಶತ್ರುವಣಮಲ್ಲದ ಕೌಶಿಕನಲ್ಲದಿಂದ್ರನಂ ||
ಬುದು ವಿಪರೀತನಲ್ಲದ ಕುಜನ್ಮ ಕನಲ್ಲದ ಕಲ್ಪವೃಕ್ಷ ಮೆಂ ||
ಬುದು ವಿಬುಧಾಶ್ರಯೆ ಕನಿಧಿಯಂ ಧರೆ ದುಮ್ಮನ ನಾಗದೇವನಂ ||797||



151 ಚಿಕ್ಕನಾಯಕನಹಳ್ಳಿ 43, 1171
ಇದರಲ್ಲಿ ಹೊಯ್ಸಳರಾಜನಾದ 1 ನೆಯ ನಾರಸಿಂಹನ ಆಳಿಕೆಯಲ್ಲಿ ಸಾಮಂತ ಬಿಟ್ಟಗೆ
ಅವನ ತಾಯಿ ಶಾಂತಲೆ ಮುಂತಾದವರು ಮದ್ದ ವದೇವನಿಗೆ ಭೂಮಿಯನ್ನು

ಕೊಟ್ಟಂತೆ ಹೇಳಿದೆ.
ಶಾಂತಲೆ


ಮರಕತವರ್ಣಮಂ ತರುಣವೇಣತನುಚ್ಛವಿಯಿಂದೆ ವಜ್ರಮಂ |
ಸುರುಚಿರಮಪ್ಪ ಮುತ್ತೆನಿಪ ದಂತಚಯಂಗಳದೊಂದು ಕಾಂತಿಯಿಂ |
ದುರಗಸದೃಕ್ಷಮಪ್ಪ ಕಚದಿಂ ಹರಿನೀಲಮನೊಪ್ಪೆ ಹೋಲ್ತಳಂ |
ತಿರೆ ಸತಿ ರತ್ನದೊಂದೆಣೆಗೆ ವಾರಳೆ ಶಾಂತಲೆನಾರಿ ರೂಪಿನೊಳ್ ||798||

ಸಾಮಂತಬಿಟ್ಟಿಗ


ನಲಿದುಲಿದಟ್ಟಿ ಕೊಂಡು ಕವಿಶರ್ಪ ವಿರೋಧಿಬಲಕ್ಕೆ ಭೀತಿಯಿಂ |
ನೆಲವಲವೆನ್ನದಲ್ಲದಿದು ಪರ್ವಲನೆನ್ನದೆ ದೋಃಪ್ರತಾಪದಿಂ ||