ಪುಟ:ಶ್ರೀಮತಿ ಪರಿಣಯಂ.djvu/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಜ್ಞಾಪನೆ. ಅದ್ಭು ತರಾಮಾಯಣವೆಂಬ ಪುಸ್ತಕವನ್ನು ಕಾಲೇಜುವಿದ್ಯಾರ್ಥಿಗ ಳಿಂದ ಓದಿಸುತ್ತಿರುವಾಗ, ಅದರಲ್ಲಿರುವ ಒಂದು ಸಣ್ಣಕಥೆಯನ್ನು ನಾಟಕ ರೂಪವಾಗಿ ಬರೆಯಬೇಕೆಂದು ತೋರಿ, ಅದರಮೇಲೆ ಒಂದುಪಟದಲ್ಲಿ ಆಡ ಗಿದ್ದ ಆ ಕಥೆಯನ್ನು , ಹೀಗೆ ನೂರುಪಟಗಳಾಗಿ ವಿಸ್ತರಿಸಿ ಬರೆದಿರುವೆನು ಇದರಲ್ಲಿ ಒಂದೆರಡುಕಡೆಯಲ್ಲಿ ಮಾತ್ರ, ಸಂದರ್ಭಾನುಸಾರವಾಗಿ ಬೇರೆ ಕವಿಗಳ ವಾಕ್ಯಶೈಲಿಯು ಸೇರಿಸಲ್ಪಟ್ಟಿದೆ. ಇದು ಸಣ್ಣ ಪುಸ್ತಕವಾ ಗಿದ್ದರೂ ಆ ಮೂಲಾಗ್ರವಾಗಿ ಹುಡುಕಿನೋಡಿದಪಕ್ಷದಲ್ಲಿಗುಣಗ್ರಾಹಿ ಗಳಿಗೆ, ಒಂದೆರಡುಗುಣಾಂಶಗಳು ಸಿಕ್ಕದಿರಲಾರದೆಂದು ನಂಬುತ್ತೇನೆ. ಎಮ್. ಡಿ. ಅಳಸಿಂಗಾಚಾರ್.