ಪುಟ:ಶ್ರೀಮತಿ ಪರಿಣಯಂ.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಥಮಾಂಕ೦. ++(ಆಸ್ಥಾನ. ೧. ಇಂದ್ರಸಭೆ. ++ (ಅನೇಕದೇವತೆಗಳ ಮತ್ತು ದೇವರ್ಷಿಗಳ ಸಭಾಮಧ್ಯದಲ್ಲಿ, ದೇ ವೇಂದ್ರನು ಸಿಂಹಾಸನಾಸೀನನಾಗಿರುವನು. ಮನ್ಮಥನು ಪ ರೇವರ್ತಿಯಾಗಿ.ರಂಭಾದ್ಯಪ್ಪರಸಿಯರಿಂದಲೂ, ಗಂಧಊರಿಂ ದಲೂ ಗಾನನರ್ತನಾದಿಗಳನ್ನು ನಡೆಸುವನು.) ಮನ್ಮಥಂ-ದೇವರಾಜಾ! ಗಾನನರ್ತನಗಳು ನಡೆಯುವುವು. ಲಾಲಿಸಬೇಕು. ಇಂದ್ರ -- (ಗಾನ ನರ್ತನಗಳನ್ನು ನೋಡಿ ಸಂತೋಷಪರವಶನಾಗಿ,ಮುಂ ದೆ ಬಂದು ಮನ್ಮಥನ ಕೈಯನ್ನು ಹಿಡಿದು) ಕಾಮದೇವಾ! ನಿನ್ನ ಕಾರನಿರ್ವಾಹಕೌಶಲ್ಯಕ್ಕಾಗಿ ನಾನು ಬಹಳಸಂತೋಷಗೊಂಡ ನು. ಈ ವಿಧವಾದ ವೈಭವವನ್ನು ನಾನು ಇದುವರೆಗೂ ಅನುಭ ವಿಸಿದುದಿಲ್ಲ. (ಕೈಹಿಡಿದು ಕರೆತಂದು ತನ್ನ ಸಮೀಪದಲ್ಲಿ ಕುಳ್ಳಿ ರಿಸಿಕೊಂಡು.) ಕಾಮದೇವಾ ! ರಾಗ – ಮಧ್ಯಮಾವತಿ - ರೂಪಕ ತಾಳ. (ಅಲುಕಲೆಲ್ಲ ಆಡಗ ಗನಿ ಎಂಬಂತೆ) ಪರಮಹರ್ಷ 1 ವಾಂತೆನು ಸ್ಮರ | ವೀ | ರಾಗ್ರಣಿ ನಿನ್ನ ಕಾಠ್ಯಕೆ! ಸರಸಗುಣಾ | ಕರ ನಿನ್ನ ಮಹಿಮೆಗೆ ಸರಿಗಾಣೆ ಜಗದಿ! ತ್ರಿಭುವನಜಯಜಾತಕೀರ್ತಿ { ವಿಭವಕೆ ಕಳೆಯೇರಿಪಂದದಿ | ಸಭೆಯೊಳು ಭೂಮಿಪೆ ನಿನ್ನ : ಶುಭತರಮಂದಾರಸರದಿ || ಎಲೈ ಮಿತ್ರನೆ! ಈ ನನ್ನ ಸಂತೋಷಕ್ಕೆ ಸೂಚಕವಾಗಿ, ಇ ದೋ? ಈ ಮಂದಾರಮಾಲಿಕೆಯಿಂದ ನಿನ್ನನ್ನು ಭೂಷಿ ಸುವೆನು. ಈ ದೇವಸಭಾಮಧ್ಯದಲ್ಲಿ ಇದನ್ನೇ ನೀನು ಅಗ್ರಪೂಜೆಯಾಗಿ ಸ್ವೀಕರಿಸು, (ಎಂದು ಮನ್ಮಥನ ಕೊರ ಲಿಗೆ ಮಾಲೆಯನ್ನು ಹಾಕುವನು.) ನಾರದಂ-ಕೋಪದಿಂದ ಮೇಲೆದ್ದು ಇಂದ್ರನನ್ನು ದುರುದುರನೆ ನೋ ಡುತ್ತ) ದೇವೇಂದ್ರಾ ! ಏನಿದು ? ನಿನ್ನ ಪದವಿಯೇನು ? ನಿನ್ನ ಗೌರವವೇನು ? ನೀನು ಮಾಡತಕ್ಕ ಕಾವ್ಯವೇನು ? ಈ ಮಹಾ.