ಪುಟ:ಶ್ರೀಮತಿ ಪರಿಣಯಂ.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಡೆ ! ದ್ವಿತೀಯಾಂಕ೦. ೧೩ ಅನೇಕಭಾಗದಲ್ಲಿ ಮೇಲೆನಿಸಿರುವನು. ಹಾಗಿದ್ದರೂ ಅವನು ತನ್ನ ಪದವಿಗಾಗಿ ತಾನು ಗತ್ವ ಪಡದೆ, ನಿನ್ನಂತೆ ಉನ್ಮಾರ್ಗದಲ್ಲಿ ಪ್ರವರ್ತಿಸದೆ, ಎಲ್ಲರಲ್ಲಿಯೂ ವಿನೀತನಾಗಿ, ಭಗವದ್ಭಕ್ತಿಯೇ ತನ್ನ ಸರೈಶ್ವರವೆಂದು ತಿಳಿದಿರುವನು. ಅವನು ಸಾಕ್ಷಾತ್ವಿಷ್ಟು ಸಮಾನನಾದುರಿಂದ ಆಂತವನ ದರ್ಶನವೇ ನಮ್ಮ ತಪಸ್ಸಿಗೆ ಫಲರೂಪವಾಗಿರುವುದು, ದೇವೇಂದ್ರಾ ! ಇನ್ನು ಮೇಲಾದರೂ ನೀನು ಆ ದಾರಿಯನ್ನನುಸರಿಸು ! ಇದರಮೇಲೆ ನಿನ್ನ ಇಷ್ಟದಂತೆ (ಹೋಗುವನು.) ಇಂದ್ರಂ- ಚಿಂತಾಕುಲನಾಗಿ ಮನ್ಮಥನನ್ನು ನೋಡಿ) ಮಿತ್ರನೆ ! ನಾವು ಸರಸವಾಗಿ ಆರಂಭಿಸಿದ ಉತ್ಸವವು ಹೇಗೆ ವಿರಸವಾಗಿ ಪರಿಣ - ಮಿಸಿತು!ನೋಡಿದೆಯಾ ? ನಿಷ್ಕಾರಣವಾಗಿ ನಾವಿಬ್ಬರೂ ಆ ಮಹರ್ಷಿಯ ಕೋಪಕ್ಕೆ ಪಾತ್ರರಾದೆವು. ಮನ್ಮಥಂ-(ನಗುತ್ತ) ದೇವೇಂದ್ರಾ ! ನನಗೇನೂ ಇದರಲ್ಲಿ ಪ್ರಮಾದವು ತೋರಲಿಲ್ಲ.ಯೋಗಿಗಳಿಗೂ,ನನಗೂ ಜನ್ಮ ದ್ವೇಷವೆಂಬುದು ಸಹ ಜವಾಗಿಯೇ ಇರುವುದು, ಇದಕ್ಕಾಗಿ ಚಿಂತೆಯೇಕೆ ? ಇಂದ್ರ-ಮಿತ್ರನೆ! ಹಾಗಲ್ಲ ! ಇಂತಹ ಮಹಾತ್ಮರ ಕೋಪವು ಅನರಹೇ। ತುವಾಗದಿರದು! ಆದುದರಿಂದ ಹೇಗಾದರೂ ಈಗ ಆ ನಾರದ ನನ್ನು ಪ್ರಸನ್ನನನ್ನಾಗಿ ಮಾಡಿದಹೊರತು, ನನ್ನ ಮನಸ್ಸಿಗೆ ಸಮಾಧಾನವಿಲ್ಲ. ಈ ಉತ್ಸವಸಂಭ್ರಮಗಳನ್ನು ಇಷ್ಟಕ್ಕೇ ನಿಲ್ಲಿಸುವೆವು. ಮನ್ಮಥಂ-ಹಾಗಿದ್ದರೆ ಪ್ರಭುವಿನ ಇಷ್ಟದಂತಾಗಲಿ ! (ತೆರೆಯು ಬೀಳುವುದು.) ಇದು ಪ್ರಥಮಾಂಕವು,