ಪುಟ:ಶ್ರೀಮತಿ ಪರಿಣಯಂ.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ್ವಿತೀಯಾಂಕ೦. ವೃ! 'ಸೇವಿಸಿ ಮೀನಮೇಷವೃಷಭಾದಿಗಳಂ ಕ್ರಮದಿಂದ ಭಾನು ದು ! ರ್ಭಾವದಿನೈದಿ ಕನ್ನೆಯೊಡಗೂಡಲೋಡಂ ಕಿಡೆ ತನ್ನ ತೇಜಮಿ ! ನ್ಯಾವುದುಪಾಯಮೆಂದು ತುಲೆಯಂ ಜನರಂಜನೆಗೇರಿ ತೇಜಮಂ || ಭವಲಯಕ್ಕೆ ಬೀರಿದನೆನಲ ವಿಧಿಯೊಗಮನಾರೊ ಮೀರುವರ11” » ಎಂತಹ ತೇಜಸ್ವಿಗಳಾದರೂ, ಕಾಲವಶದಿಂದ ಭಗವನ್ನಾಯೆ ಯಲ್ಲಿ ಕಟ್ಟುಬಿದ್ದು, ಬುದ್ಧಿಮೋಹಕ್ಕೊಳಗಾಗಿ ತೇಜೋಹಾನಿ ಯನ್ನು ಹೊಂದಬೇಕಾಗುವುದೆಂದೂ ಇದರಿಂದ ಸ್ಪಷ್ಟವಾಗು ವುದು ! ಹೋಗಲಿ ! ಈ ವಿಚಾರಗಳಿಂದೇನು ? ನನ್ನ ಪ್ರಿಯ ಸುಹೃತ್ತಾದ ನಾರದಮಹರ್ಷಿಯನ್ನು ಕಂಡು ಬಹಳ ಹೊತ್ತಾ ಯಿತು. ಅವನನ್ನು ನೋಡಿ ಬರುವೆನು. (ಮುಂದೆ ಹೋಗಿ) ಆಹಾ! ಇದೇನಿದು ! ಈ ಪುರವೀಥಿಗಳೆಲ್ಲವೂ ಜನಸಂಚಾರವಿಲ್ಲದೆ ನಿಶ್ಯಬ್ಬ ವಾಗಿರಲು ಕಾರಣವೇನು? (ಎಂದು ಯೋಚಿಸಿ) ಓಹೋ ! ತಿಳಿ ಯಿತು! ಸುರನಾಥನಾದ ಮಹೇಂದ್ರನು, ಈಗಿನ ಶಾರದೋ ತ್ಸವವನ್ನು ಅತಿವೈಭವದಿಂದ ನಡೆಸುವುದಾಗಿ ಕೇಳಿದ್ದೆನು. ಇಲ್ಲಿನ ಪುರವಾಸಿಗಳೆಲ್ಲರೂ ಆ ಮಹೋತ್ಸವವೈಭವವನ್ನು ನೋ ಡುವುದಕ್ಕಾಗಿ, ಇಂದ್ರಸಭೆಯಲ್ಲಿ ನೆರೆದಿರಬಹುದೆಂದು ತೋರುವು ದು, ನನ್ನ ಮಿತ್ರನಾದ ನಾರದನೂ ಈಗ ಅಲ್ಲಿಗೇ ಹೋಗಿರಬಹು ದು, ನಾನೂ ಅಲ್ಲಿಗೆ ಹೋಗಿ ನೋಡುವೆನು. (ಮುಂದೆ ಹೋಗಿ ತೆರೆಯಕಡೆಗೆ ನೋಡಿ) ಓಹೋ ! ಇದೇನು? ಯಾರೋ ಇಬ್ಬರು ಅಪ್ಪ ರಸೆಯರು ಇತ್ತಲಾಗಿಯೇ ಬರುತ್ತಿರುವರಲ್ಲಾ ! ಅಂತಹ ಮಹೋತ್ಸವಸಂಭ್ರಮಗಳನ್ನು ಬಿಟ್ಟು, ಇವರುಮಾತ್ರ ಇಲ್ಲಿ ಬರಲು ಕಾರಣವೇನಿರಬಹುದು? ಇರಲಿ ! ಅವರನ್ನೇ ವಿಚಾರಿ ಸಿ ತಿಳಿಯುವೆನು. - (ಅಪ್ಪರಸ್ತ್ರೀಯರಿಬ್ಬರು ಪ್ರವೇಶಿಸುವರು.; ೧೬ನೆಯವಳು-ಸಖಿ ! ಸರಸವಾಗಿ ನಡೆಯುತ್ತಿದ್ದ ಕಾರವು, ಎಷ್ಟು ವಿರಸ ವಾಗಿ ಪರಿಣಮಿಸಿತು ನೋಡು !