ಪುಟ:ಶ್ರೀಮತಿ ಪರಿಣಯಂ.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಮತೀಪರಿಣಯಂ ಸಿದ ಆನಾರದನಿಗೆ ತಕ್ಕ ಪ್ರತಿಕ್ರಿಯೆಯನ್ನು ಮಾಡದೆ ತೀರದು! ಹರಿಹರಬ್ರಹ್ಮಾದಿಗಳನ್ನೂ ಮೋಹಪಾಶದಲ್ಲಿ ಬಂಧಿಸಿ, ತೆ! ಲೋಕ್ವಿಜಯಿಯೆಂಬ ಖ್ಯಾತಿಯನ್ನು ಹೊಂದಿದ ನಾನು, ಆ ಬ ಡಯೋಗಿಯನ್ನು ನನ್ನ ಕಾಮಪಾಶದಲ್ಲಿ ಕಟ್ಟಲಾರದೆಹೋದ ರೆ, ಈ ಧನುರ್ಬಾಣಗಳನ್ನು ಹೊತ್ತು ಫಲವೇನು!? ಇರ © ! ಆ ನಾರದನನ್ನು ಕ್ಷಣಮಾತ್ರವಾದರೂ ನನ್ನ ಕಾಮಪಾಶ ದಲ್ಲಿ ಬಂಧಿಸದೆ ಬಿಡುವವನಲ್ಲ! (ಸ್ವಲ್ಪಹೊತ್ತು ಚಿಂತಿಸಿ) ಆದರೆ ಈಗ ಪರತಮುನಿಯೂ ನಾರದನ ಜತೆಯಲ್ಲಿರುವನು ... ಆ ವನೂ ನನ್ನ ವಿರೋಥಿಕೋಟೆಯಲ್ಲಿಯೇ ಸೇರಿ, ನನ್ನನ್ನು ದ್ವೇಷಿ ಸುತ್ತಿರುವನು. ನಾನು ಪ್ರಯತ್ನ ಪೂರೈಕವಾಗಿ ಆ ನಾರದನ ಮನಸ್ಸನ್ನು ಕದಲಿಸುತ್ತ ಬಂದರೂ, ಪಕ್ವತನು ಅವನ ಸಮೀಪದಲ್ಲಿಯೇ ಇರುವುದರಿಂದ, ಆಗಾಗ ಅವನಿಗೆ ಸಮ ಯೋಚಿತವಾದ ಬೋಧನೆಗಳಿಂದ ಅವನನ್ನೆ ಚರಿಸಿ, ಅವನ ಬುದ್ಧಿ ಯು ಕದಲದಂತೆ ಮಾಡಬಹುದು. ಆಗ ನನ್ನ ಸಾಹಸವೆಲ್ಲವೂ ವಿಫಲವಾಗುವುದು. ಆದುದರಿಂದ ಆ ನಾರದಪರೈತರಿಬ್ಬರನ್ನೂ ಈ ನನ್ನ ಪುಷ್ಪಬಾಣದಿಂದ ಏಕಕಾಲದಲ್ಲಿಯೇ ಮೋಹಗೊಳಿಸಿ ಕಾಮಪಾಶದಲ್ಲಿ ಕಟ್ಟಿ, ಅವರವರಲ್ಲಿಯೇ ಪರಸ್ಪರಮಾತ್ಸಲ್ಯವ ನ್ನು ಹುಟ್ಟಿಸುವೆನು. ಇನ್ನು ಕಾಲವಿಳಂಬವು ಸಾಕು ! ಹೊತ್ತು ಮೀರುವುದು! ಇದೋ ಹೊರಡುವೆನು. ರಾಗ - ನೋಟು - ತಾಳ. ಇದೊ!ಪೋಗುವೆ | ನಿದೆ! ಪೋಗುವೆ | ನಿದೋ ಪೋಗಿ ಸೇರುವೆ | ನಾ ಬೇಗ! ಸಾಗದ ಗದ್ಯದ | ಬೀಗಿದ ನಾರದ | ಯೋಗಿಯ ಮದವುಡುಗಿಸಲೀಗ | ಛಲವ ಮೀರಿ | ಬಲವ ತೋರಿ ಮೆರೆವ ವೈರಿ/ವ್ರಜವ ಸಾರಿ! ಭಂಗಿಪ ನನ್ನ ಶರಾಳಿಯ! ಬಲುಮೆಗೆ | ನಿಲುವನೆ ಫಡಫಡ ಬಡಜೋಗಿ!! ಸುರಾಸುರರ ) ನಿರಾಕರಿಸಿ / ಪರಾಭವಿಪ ಶರಾಸನದಿ ||೧|| ಆ ಬಡಮೌನಿಯ | ಭಕ್ತಿ ವಿರಕ್ತಿಗೆ ಮುಕ್ತಿಯನೀಗಲೆ | ಸಲಿಸುವೆನು||೨|| ಎಂದು ಹೋಗುವನು.