ಪುಟ:ಶ್ರೀಮತಿ ಪರಿಣಯಂ.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Ka ಶ್ರೀಮತೀಪರಿಣಯಂ ರಾಜಪತ್ನಿ -(ಸಂತೋಷದಿಂದ) ಏನು ! ಮಹಾತ್ಮರಾದ ನಾರದಪರೈತರು ಬಂದಿರುವರೆ ! ಅವರನ್ನು ಕರೆತರುವುದಕ್ಕೆ ಸಮಯನಿರೀಕ್ಷಣೆ ಯೇನು? ಹೋಗು ! ಈಗಲೇ ಕರೆದುಕೊಂಡು ಬಾ (ಶ್ರೀಮತಿ ಯನ್ನು ನೋಡಿ)ವತ್ಸೆ ಏಳೇಳು! ಮಹಾತ್ಮರಾದ ನಾರದಪರೈತ ರಿಬ್ಬರೂ ಅತಿಥಿಗಳಾಗಿ ಬಂದಿರುವರಂತೆ ! ಲೋಕಪೂಜ್ಯರಾದ ಆ ಮಹರ್ಷಿಗಳಿಬ್ಬರೂ,ನಿನ್ನ ವ್ರತಸಮಾಪ್ತಿ ಕಾಲಕ್ಕೆ ಇಲ್ಲಿಗೆ ಬಂ ದುದು ನಮ್ಮ ಭಾಗ್ಯದಯವು!ಇಷ್ಟರಲ್ಲಿ ನೀನು ಈ ಸುಮಂ ಗಲಿಯರಿಗೆ ಕುಂಕುಮತಾಂಬೂಲಗಳನ್ನು ಕೊಟ್ಟು ಸತ್ಕರಿಸಿ ಕಳುಹಿಸು! ಈ ವೃದ್ಧಿಸುಮಂಗಲಿಯರಿಗೆ ನಮಸ್ಕರಿಸಿ, ಅಮೋ ಫುವಾದ ಅವರ ಆಶೀರ್ವಾದಕ್ಕೆ ಪಾತ್ರಳಾಗು ! (ಶ್ರೀಮತಿಯು ಎಲ್ಲರಿಗೂ ಕುಂಕುಮತಾಂಬೂಲವನ್ನು ಕೊಟ್ಟು , ನಮಸ್ಕರಿಸುವಳು.) (ಅವರಲ್ಲಿ ವೃದ್ಧತಾಪಸಿಯೊಬ್ಬಳು ಮುಂದೆ ಬಂದು ಆಶೀರ್ವದಿಸುವಳು.) ವೃದ್ಧ ತಾಪಸಿ ಕಂ | ಕುಲವೃದ್ದರ ಕುಲಗುರುಗಳ ಕುಲದೇವತೆಯರ ನಿರಂತರಾನುಗ್ರಹದಿಂ | ಎಲೆಸುತೆ! ನೀಂ ದೀರ್ಘಸುಮಂ ಗಲಿಯಾಗಿ ಚಿರಾಯುವಾಗಿ ಸುಖದಿಂ ಬಾಳli (ಸುಮಂಗಲಿಯರೆಲ್ಲರೂ ಆಕ್ಷತೆಯನ್ನು ಹಾಕುವರು. ಕಂಚುಕಿಯು ನಾರದಪರೈತರೊಡನೆ ಪ್ರವೇಶಿಸುವನು.) ಕಂಚುಕಿ-ಪೂಜ್ಯರೆ ! ಇತ್ರದಯಮಾಡಿಸಬೇಕು! ಇದೇ ಮಹಾರಾಜನ ವಸಂತೋದ್ಯಾನವು. (ನಾರದ ಪರೂತರಿಬ್ಬರೂ ಪ್ರವೇಶಿಸಿ, ಉದ್ಯಾನದ ಸೌಂದಯ್ಯ ವನ್ನು ನೋಡುತ್ತಿರುವಾಗ, ಮನ್ಮಥನು ಧನುರ್ಬಾಣಗಳೊಡನೆ ಹಿಂದಿನಿಂದ ಬಂದು, ಅವರಮೇಲೆ ಪುಷ್ಪಬಾಣಗಳನ್ನು ಕರೆಯು ವನು.)