ವಿಷಯಕ್ಕೆ ಹೋಗು

ಪುಟ:ಶ್ರೀಮತೀ ಪರಿಣಯ ನಾಟಕಂ.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚತುರ್ಥಾಂಕಂ. ೬೭ (ಚಿಂತೆಯನ್ನು ನಟಿಸಿ) ಓಹೋ ತಿಳಿಯಿತು! ಈಗಲೇ ನಾನು ಕ್ಷೀ ರಾಬಿಗೆ ಹೋಗಿ, ನನ್ನ ವೀಣಾಗಾನದಿಂದ ಭಗವಂತನ ನ್ಯೂಲಿಸಿ, ಆ ಸ್ವಯಂವರ ಕಾಲದಲ್ಲಿ ಪಕ್ವತನ ಮುಖವು ಕೇವಲ ವಿಕೃತವಾಗಿ ಕಾಣುವಂತೆ ವರವನ್ನು ಪಡೆದು ಬರುವೆನು. ಪಕ್ವತನು ತನ್ನ ಚೇಷ್ಟೆಗೆ ತಕ್ಕ ಫಲವನ್ನನುಭವಿಸಲಿ : ಪಶ್ವತ ನೂ ಇತ್ತಲಾಗಿಯೇ ಬರುತ್ತಿರಬಹುದು, ಅವನ ಕಣ್ಣಿಗೆ ಬೀಳದೆ ಈಮಾರ್ಗವಾಗಿ ಹೊರಟುಹೋಗುವೆನು. (ಎಂದು ಹೋಗುವನು. (ಪಕ್ವತನು ಪ್ರವೇಶಿಸುವನು.) ಪಕ್ವತಂ-(ಆಶ್ಚರದಿಂದ ನಗುತ್ತ) ಆಹಾ ! ಮೋಹಪಾಶವೆಂಬುದು ಎಂ ತವರನ್ನೂ ಬಿಟ್ಟುದಲ್ಲ ! ನನಗೆ ಆಗಾಗ ವಿರಕ್ತಿಮಾರ್ಗದಲ್ಲಿ ಎಚ್ಚರಿಸುತಿದ್ದ ನಾರದನು,ನನಗೆ ಮೊದಲೇ ಈ ಕಾಮಮಾರ್ಗ ದಲ್ಲಿ ಪ್ರವರ್ತಿಸಿರುವಾಗ, ನನ್ನ ವಿಷಯಕ್ಕಾಗಿ ನಾನು ಪರಿತ ಪಿಸಬೇಕಾದುದೇನು ? ಈ ಪ್ರಯತ್ನದಲ್ಲಿ ನಾರದನಿಗೂ ನನಗೂ ಇದ್ದ ಪರಸ್ಪರಸ್ನೇಹಕ್ಕೆ ಭಂಗವುಂಟಾಗುವುದರಲ್ಲಿ ಸಂದೇಹವಿಲ್ಲ. ಆದರೇನು ? ಈಗ ದಾಕ್ಷಿಣ್ಯಕ್ಕೆ ಕಟ್ಟುಬಿದ್ದು ಕಾರವನ್ನು ಕೆಡಿಸಿ. ಕೊಳ್ಳಬಾರದು. ನಮ್ಮಿಬ್ಬರ ಪ್ರಯತ್ನ ವನ್ನು ನೋಡಿ ರಾಜನು ಏನೇನೋ ಉಪಾಯದಿಂದ ತಾನು ಮಾತಿಗೆ ಸಿಕ್ಕದೆ, ಸ್ವಯಂ ವರವೆಂಬ ವ್ಯಾಜವನ್ನಿಟ್ಟು ನಮ್ಮ ಮೇಲೆಯೇ ಭಾರವನ್ನು ಹೊ ರಿಸಿಬಿಟ್ಟನು. ಕಾರಭಾರವು ಈಗ ನಮ್ಮ ಮೇಲೆ ಬಿದ್ದಿತು. ಮುಖ್ಯ ವಾಗಿ ನಾಳೆ ಸ್ವಯಂವರದಲ್ಲಿ ಶ್ರೀಮತಿಯು ನಾರದನನ್ನು ವರಿ ಸದಹಾಗೆ ಮಾಡುವುದಕ್ಕೆ ಉಪಾಯವನ್ನು ಹುಡುಕಬೇಕು. ಇದಕ್ಕೇನು ಮಾಡಲಿ ! (ಎಂದು ಯೋಚಿಸುತ್ತ) ಓಹೋ ತಿಳಿ ಯಿತು: ಈಗಲೇ ನಾನು ಶ್ರೀವಿಷ್ಟು ಸಾನ್ನಿಧ್ಯಕ್ಕೆ ಹೋಗಿ, ಭ ಕವತ್ಸಲನಾದ ಭಗವಂತನನ್ನೊಲಿಸಿ, ನಾಳೆ ಸ್ವಯಂವರಕಾಲ ದಲ್ಲಿ ನಾರದನ ಮುಖವನ್ನು ನೋಡಿಮಾತ್ರಕ್ಕೆ ಶ್ರೀಮತಿಗೆ ಅಸ