ವಿಷಯಕ್ಕೆ ಹೋಗು

ಪುಟ:ಶ್ರೀಮತೀ ಪರಿಣಯ ನಾಟಕಂ.djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



ಪಂಚಮಾಂಕ೦

೮೧

ರಾಜಂ-(ಸಂಭ್ರಾಂತನಾಗಿ) ಕುಮಾರೀ ! ಏನಿದು ? ಅಕಸ್ಮಾತ್ತಾಗಿ ಹೀ ಗೇಕೆ ಹೆದರುವೆ ? ಶ್ರೀಮತಿ-ಜನಕಾ ! ಅದೋ : ನಮ್ಮ ಸ್ವಯಂವರಮಂಟಪದಲ್ಲಿ ಯಾವು
ದೋ ಭಯಂಕರವಾದ ಕಾಡುಮೃಗಗಳು ಬಂದು ಕುಳಿತಿರುವುವು.
ರಾಜಂ --ಎಲ್ಲಿ ! ಎಲ್ಲಿ !
ಶ್ರೀಮತಿ.- ರಾಜನನ್ನು ಕರೆತಂದು ತೋರಿಸುವಳು.)
ರಾಜಂ -ಮುಂದೆ ನೋಡಿ ಚಿಂತಾಕುಲನಾಗಿ ಆಹಾ! ಏನಿದು ! ಈ ಮೃ

ಗಗಳಲ್ಲಿಯವು ? (ಚೆನ್ನಾಗಿ ನೋಡಿ)ಇವು ನಿಜವಾಗಿ ಸಾಮಾನ್ಯ

ಮೃಗಗಳಂತೆ ತೋರಲಿಲ್ಲ ! ಮುಖವುಹೊರತು, ಕೈ, ಕಾಲು,

ಮುಂತಾದ ಅವಯವಗಳೆಲ್ಲವೂ ಮನುಷ್ಯಾಕೃತಿಯಿಂದಿರುವುವು.

ಈ ಸ್ವಯಂವರವನ್ನು ಕೆಡಿಸುವುದಕ್ಕಾಗಿ, ಮಾಯಾವಿಗಳಾದ

ರಾಕ್ಷಸರೇನಾದರೂ ಹೀಗೆ ವೇಷಧಾರಿಗಳಾಗಿ ಬಂದಿರಬಹುದೆ ?

ಅದಕ್ಕೂ ಸಂಭವವಿಲ್ಲ ! ಸಾಕ್ಷಾತ್ವಿಷ್ಣುಚಕ್ರವು ನನ್ನಲ್ಲಿರುವಾಗ,

ರಾಕ್ಷಸರು ಇಷ್ಟು ನಿರ್ಭಯವಾಗಿ ಇಲ್ಲಿಗೆ ಪ್ರವೇಶಿಸುವುದೆಂದ

ರೇನು ? ನಮ್ಮ ಪುರರ್ದಾಕ್ಕೆ ಕಾಲಿಡುವುದಕ್ಕೆ ಮೊದಲೇ ಆ

ಸುದರ್ಶನದ ತೇಜಸ್ಸಿನಿಂದ ಅವರು ದಗ್ಧರಾಗಬೇಕಲ್ಲವೆ? ಅಥವಾ

ಇದು ದೇವತೆಗಳ ತಂತ್ರವಾಗಿರಬಹುದೆ ? ಯಾವದೇವತೆಗಳಲ್ಲಿ

ಯೂ ನಾನು ಅಪರಾಧಿಯಲ್ಲ ! ಅವರೇಕೆ ನನ್ನನ್ನು ವಂಚಿಸುವ

ರು ! ಒಂದುವೇಳೆ ನಾರದಪರೈತರೇ ನನ್ನನ್ನು ಪರೀಕ್ಷಿಸುವುದ

ಕ್ಕಾಗಿ ಹೀಗೆ ವೇಷಾಂತರದಿಂದ ಬಂದಿರಬಹುದೆ ? ಇದ್ದರೂ

ಇರಬಹುದು. ಇರಲಿ ! ಇವರನ್ನು ಮಾತಾಡಿಸಿ ನೋಡುವೆನು

ಅವರ ಕಂಠಧ್ವನಿಯಿಂದ ಸ್ವಲ್ಪ ಮಾತ್ರವಾದರೂ ನಿಜಸ್ಥಿತಿಯ

ನ್ನು ಕಂಡುಕೊಳ್ಳಬಹುದು. (ಮುಂದೆ ಬಂದು) ಎಲೈ! ವಿಲಕ್ಷಣ

ರೂಪದಿಂದ ಭದ್ರಾಸನವನ್ನೇರಿ ಕುಳಿತಿರುವ ನೀವು ಯಾರು !

ನಾರದಂ--(ಸ್ವಗತಂ ಓಹೋ!ರಾಜನು ಈ ಕಪಿಮುಖವನ್ನು ನೋಡಿ ಭ್ರ

ಮಿಸುತ್ತಿರುವನು.ನಿಜಸ್ಥಿತಿಯನ್ನು ತಿಳಿಯದವರು ಹೀಗೆ ಕಳವಳ