ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ. ೧೩.] ಪ್ರಥಮಸ್ಕಂಧನ. ೧೮ ಸಲ್ಲಬೇಕಾದ ಹವಿರ್ಭಾಗಗಳೆಲ್ಲವೂ ರಾಕ್ಷಸರ ಪಾಲಾಗುವುವೆಂದು ವಿಲಪಿಸು ತಿರುವೆಯಾ? ಅಥವಾ ಇನ್ನು ಮುಂದೆ ಕಾಲಕಾಲಕ್ಕೆ ಮಳೆಯು ಸುರಿಯದೆ ಹೋಗುವುದರಿಂದ, ನಿನ್ನ ಸ್ನಾಶ್ರಯಿಸಿರುವ ಪ್ರಜೆಗಳೆಲ್ಲರೂ ಅನ್ನ ವಿಲ್ಲದೆ ದು ರ್ಭಿಕ್ಷದ ಬಾಧೆಯಿಂದ ಸಾಯಬೇಕಾಗಿ ಬರುವುದೆಂದು ನೀನು ದುಖಿಸುತ್ತಿ ರುವೆಯಾ?! ಎಲೆ ದೇವಿ! ಇನ್ನು ಮುಂದೆ ಪ್ರಜೆಗಳಿಗೆ ತಕ್ಕ ರಕ್ಷಣೆಯಿಲ್ಲದೆ, ಅಬಲೆಯರಾದ ಸ್ತ್ರೀಯರೂ, ಬಾಲಕರೂ, ಅನಾಥರಾಗಿ, ರಾಕ್ಷಸಪ್ರಾಯರಾ ದ ದುಷ್ಟಜನರಿಂದ ಬಾಧಿಸಲ್ಪಡುವರೆಂದು ವ್ಯಸನಪಡುತ್ತಿರುವೆಯೇನು ? ಅಥವಾ ಬ್ರಾಹ್ಮಣರೆಲ್ಲರೂ ಮುಂದೆಮುಂದೆ ಕುತಕಗಳಲ್ಲಿ ಪ್ರವರ್ತಿ ಸುತ್ತ ಬರುವುದರಿಂದ, ವೇದಗಳಿಗೆ ದಿಕ್ಕಿಲ್ಲದೆ ಹೋಗುವುದೆಂದು ಚಿಂತಿಸುವೆ ಯಾ? ಇಲ್ಲವೇ ಮುಂದೆಮುಂದೆ ರಾಜರು ದುರ್ಬುದ್ಧಿಯುಳ್ಳವರಾಗಿ ಬ್ರಾ ಹ್ಮಣಜಾತಿಯ ರಕ್ಷಣೆಯಲ್ಲಿ ಅಕ್ಕರೆಯಿಲ್ಲದೆ ಹೋಗುವುದರಿಂದ ಬ್ರಾಹ್ಮಣ ರು ಅನಾಥರಾಗುವರೆಂದು ದುಃಖಿಸುವೆಯಾ ? ಕಲಿದೋಷದಿಂದ ಕೆಟ್ಟು ಹೋಗಿರುವ ಆ ಕ್ಷತ್ರಿಯಕುಲವನ್ನೇ ಕುರಿತು ಶೋಕಿಸುವೆಯಾ?ಇಲ್ಲವೇ ದು ರಾತ್ಮರಾದ ರಾಜರು ರಾಷ್ಟ್ರಗಳಿಗೆ ಉಪದ್ರವವನ್ನು ಂಟುಮಾಡುವರೆಂಬು ದಕ್ಕಾಗಿ ಕೊರಗುತ್ತಿರುವೆಯಾ? ಈ ರಾಜರ ಬಾಧೆಯಿಂದ ಪ್ರಜೆಗಳಿಗೆ ಒಂ ದು ಕಡೆಯಲ್ಲಿಯೂ ನೆಮ್ಮದಿಯಿಲ್ಲದೆ, ಅವರವರು ದೇಶಭ್ರಷ್ಟರಾಗಿ ಹೋ ಗಿ, ನಿಷಿದ್ಯ ದೇಶಗಳಲ್ಲಿ ಸೇರಿ, ಅನ್ನ ಪಾನಗಳನ್ನೂ, ಬಟ್ಟೆಬರೆಗಳನ್ನೂ ಸಂಗ್ರಹಿ ಸುವುದರಲ್ಲಿಯೇ ಆತುರವುಳ್ಳವರಾಗಿ, ವರ್ಣಾಶ್ರಮಧರೆಗಳನ್ನು ಬಿಟ್ಟು, ನಿದ್ರಾಹಾರಮೈಥುನಗಳಲ್ಲಿಮಾತ್ರ ಕಾಲವನ್ನು ಕಳೆಯುವರೆಂಬುದಕ್ಕಾಗಿ ದುಃಖಿಸುವೆಯಾ ? ಅಥವಾ ನಿನಗೆ ಕಂಟಕಪ್ರಾಯರಾದ ದುರಾತ್ಮರನ್ನು ಸಂಹರಿಸಿ, ನಿನ್ನ .ಭಾರವನ್ನಿಳಿಸಿ, ನಿನಗೆ ಕ್ಷೇಮವನ್ನುಂಟುಮಾಡುವುದಕ್ಕಾಗಿ ಮನುಷ್ಯರೂಪಹಿಂದವತರಿಸಿದ ಶ್ರೀಕೃಷ್ಣರೂಪಿಯಾದ ಭಗವಂತನು, ಈಗ ನಿನ್ನನ್ನು ಬಿಟ್ಟುಹೋದುದರಿಂದ, ಇದುವರೆಗೆ ಆ ಮಹಾತ್ಮನು ನಡೆ ಸಿದ ಮೋಕ್ಷದಾಯಕಗಳಾದ ಚರಿತ್ರಗಳನ್ನು ನೆನೆಸಿಕೊಂಡು, ಅವನ ವಿ ಯೋಗವನ್ನು ಸಹಿಸಲಾರದೆ ದುಃಖಿಸುವೆಯಾ? ಅಮ್ಮ ಭೂದೇವಿ ! ನೀನು ಇಷ್ಟೊಂದು ದುಃಖದಿಂದ ಕೊರಗುವುದಕ್ಕೆ ಕಾರಣವೇನು ಹೇಳು! ಆಹಾ !