ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೬ ಶ್ರೀಮದ್ಭಾಗವತವು [ಅಧ್ಯಾ: ೨೩. ಪ್ರೋಕ್ಷಿಸಬೇಕು. ಆಮೇಲೆ ಆ ಪಾತ್ರಗಳ ಜಲದಿಂದಲೂ, ತುಲಸಿ, ದರ್ಭೆ, ಮೊದಲಾದ ದ್ರವ್ಯಗಳಿಂದಲೂ ಅರ್ಚಿಸಬೇಕು, ಆರಾಧಕನು ಅರ್ಭ್ಯ ಪಾದ್ಯಾಚಮನೀಯಗಳಿಗಾಗಿ ಇಟ್ಟಿರುವ ಮೂರುಪಾತ್ರಗಳನ್ನೂ, ವೇದೋ ಕಗಳಾದ ಹೃದಯಮಂತ್ರದಿಂದಲೂ, ಶಿರೋ ಮಂತ್ರದಿಂದಲೂ, ಶಿಖಾಮಂತ್ರದಿಂದಲೂ, ವಿಷ್ಣು ಗಾಯಿತ್ರಿಯಿಂದಲೂ ಅಭಿಮಂತ್ರಿಸ ಬೇಕು. ವಾಯು, ಅಗ್ನಿ, ಜಲ, ಇವುಗಳಮೂಲಕವಾಗಿ, ಶೋಷಣ, ದಾಹನ, ಪ್ಲಾವವಾಹಿಗಳಿಂದ ತನ್ನ ದೇಹವನ್ನು ಶುದ್ದೀಕರಿಸಿದಂತೆಯೂ, ಆ ದೇಹ ದೊಳಗೆ ಹೃದಯಕಮಲಮಧ್ಯದಲ್ಲಿ, ಜ್ಞಾನಸ್ವರೂಪನಾಗಿಯ, ಅಣು ವಾಗಿಯ, ದೇಹೇಂದ್ರಿಯಗಳಿಗಿಂತ ವಿಲಕ್ಷಣನಾಗಿಯೂ, ಇರುವ ಜೀ ವನು ಮದಾತ್ಮಕನೆಂದೂ, ಪ್ರಣವದ ಕೊನೆಯ ಅಕ್ಷರವಾದ ಮಕಾರದಲ್ಲಿ ಪ್ರತಿಪಾದ್ಯನೆಂದೂ, ಧ್ಯಾನಿಸಬೇಕು. ಮತ್ತು ದೀಪಪ್ರಭೆಯು ಗೃಹವನ್ನು ಹೇಗೋಹಾಗೆ, ಜೀವನು ತನಗೆ ಧರಭೂತವಾದ ಜ್ಞಾನದಿಂದ ತನ್ನ ಶರೀ ರವೆಲ್ಲವನ್ನೂ ವ್ಯಾಪಿಸಿರುವಂತೆ ಧ್ಯಾನಿಸಿ, ಹೀಗೆ ಸಂಸ್ಕರಿಸಲ್ಪಟ್ಟ ಆ ಶರೀರ ದೊಳಗಿನ ಹೃದಯಕಮಲದಲ್ಲಿ ಮೊದಲು ಮಾನಸೋಪಚಾರದಿಂದ ನನ್ನನ್ನು ಅರ್ಚಿಸಬೇಕು. ಆಮೇಲೆ ತಾವು ಪೂಜಿಸತಕ್ಕ ಆರ್ಚಾ ಪ್ರತಿಮೆಗೆ ಇಲ್ಲಿ ನನ್ನನ್ನು ಆವಾಹನಮಾಡಿ, ಅಲ್ಲಿ ನನಗೆ ಅಂಗನ್ಯಾಸಗಳನ್ನು ನಡೆಸಿ ಪೂ ಜಿಸಬೇಕು. ಆಮೇಲೆ ಧುವೇ ಮೊದಲಾದ * ಎಂಟುವಾದಗಳಮೇಲೆ, ವಿಮಲೆ ಮೊದಲಾದ + ಒಂಬತ್ತು ಮೂರ್ತಿಗಳಿಂದಲೂ, ಪೀಠದೇವತೆಗ ೪೦೦ದಲೂ), ಕರ್ಣಿಕೆಯಿಂದಲೂ, ಕೇಸರಗಳಿಂದಲೂ ಕೂಡಿದುದಾಗಿಯೂ, ಇರುವ ಆತ್ಮದಳಗಳುಳ್ಳ ಪದ್ಯವನ್ನು ನನಗೆ ಆಸನವಾಗಿ ಕಲ್ಪಿಸಬೇಕು. ಆಮೇಲೆ ನನಗೆ ವೇದದಲ್ಲಿಯೂ ಪಾಂಚರಾತ್ರದಲ್ಲಿಯೂ ಹೇಳಲ್ಪಟ್ಟ ಎರ

  • ಧರ್ಮ, ಜ್ಞಾನ, ವೈರಾಗ್ಯ, ಐಶ್ವರ, ಅಧರ, ಅಜ್ಞಾನ, ಅವೈರಾಗ್ಯ, ಅವೈಶ್ವತ್ಯಗಳಿಂಬಿನೆಂಟ. ಆ ಪೀಠದ ಎಂಟು ಪಾದಗಳೆಂದು ಗ್ರಹಿಸಬೇಕು.

+ “ಏಮಲೋತ್ಕರ್ಷಿಣೀ ಜ್ಞಾನಾ ಕ್ರಿಯಾ ಯೋಗ ತತಃಪರಂ 1 ಪ್ರಜ್ಞ ಸಾ ತಥೇಶಾನಾನುಗ್ರಹ ನವಮೂರ್ತಯ: * 11 ಎಂಬವೊಂಭತ್ತೂ ತೀರ ಇವುಗಳು. • • - - - - - - -