ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೨೫ ಅಧ್ಯಾ. ೩. ಏಕಾದಶಸ್ಕಂಧವು ನ್ಯೂ ಮರುಳುಗೊಳಿಸುವುದು, ಆ ಮಾಯೆಯ ಸ್ವರೂಪವೆಂತದೆಂಬುದನ್ನು ನನಗೆ ತಿಳಿಸಬೇಕು. ಮರಣಶೀಲನಾಗಿ ಸಂಸಾರತಾಪದಲ್ಲಿ ಸಿಕ್ಕಿ ಸಂಕಟ ಪಡುವ ನನಗೆ, ಆ ತಾಪನಿವಾರಣೆಗೆ ಮಹೌಷಧಪ್ರಾಯವಾಗಿ ತಮ್ಮ ಬಾಯಿಂದ ಹೊರಡುತ್ತಿರುವ ಹರಿಕಥಾಮೃತವನ್ನು ಎಷ್ಟೆಷ್ಟು ಪಾನಮಾ ಡಿದರೂ ತೃಪ್ತಿಯಿಲ್ಲದಿರುವುದು. ಆದುದರಿಂದ ನನ್ನಲ್ಲಿ ಕೃಪೆಯಿಟ್ಟು, ಆಭಗ ವನ್ಯಾ ಯೆಯ ಮಹಿಮೆಯನ್ನು ತಿಳಿಸಬೇಕು.”ಎಂದನು. ಅದಕ್ಕೆ ಆ ಮಹರ್ಷಿ ಗಳಲ್ಲಿ ಮೂರನೆಯವನಾದ ಅಂತರಿಕ್ಷನೆಂಬವನು ಹೀಗೆಂದು ಉತ್ತರವನ್ನು ಹೇಳುವನು. “ರಾಜಾ! ಕೇಳು! ಆತ್ಮನು ಸಹಜವಾಗಿ ಸತ್ತಾಗುಣಗಳಿಲ್ಲದ ವನು. ಸ್ವಯಂಪ್ರಕಾಶನು. ಶರೀರಸಂಬಂಧವೂ ಇಲ್ಲದೆ ಶುದ್ಧನಾಗಿರತಕ್ಕೆ ವನು. ಅಂತಹ ಜೀವಾತ್ಮನು ಸತ್ತಾಗುಣಗಳಿಗೆ ವಶನಾಗುವುದೂ, ಶರೀ ರಸಂಬಂಧವನ್ನು ಹೊಂದುವುದೂ, ಆ ದೇಹವು ಆತ್ಮವೆಂದು ಭ್ರಮಿ ಸುವುದೂ, ಇವೆಲ್ಲವೂ ಭಗವಂತನ ಮಾಯೆಯ ಕಾರವೆಂದೇ ತಿಳಿ ! ಸತ್ವ ಸ್ವತಂತ್ರನಾದ ಭಗವಂತನು ಆ ಮಾಯೆಯಿಂದಲೇ ಈ ವಿವಿಧಪ್ರಪಂಚವ ನ್ಯೂ ಸಿಕ್ಕಿ ಸುವನು.ಆ ಭಗವನ್ಮಾಯೆಯಿಂದಲೇ ಮನುಷ್ಯನು ಎಚ್ಚರ, ಕನ ಸು,ಸಿದ್ರೆಯೆಂಬ ಜಾಗರ, ಸ್ವಪ್ನ, ಸುಷುಪ್ತಿಗಳಿಂಬ) ಮೂರವಸೆಗಳನ್ನು ಹೊಂಬರುವನು. ಜಾಗರಾವಸ್ಥೆಯಲ್ಲಿ ಪಂಚೇಂದ್ರಿಯಗಳೂ, ಮನಸ್ಕೂ, ಆತ್ಯಕ್ಕಿಂತಲೂ ಬೇರೆಯಾದ ದೇಹಾದಿಗಳನ್ನು ಆತ್ಮವೆಂದೂ, ಅಸ್ಥಿರಗ ಳಾದ ಆ ದೇಹಾರಗಳನ್ನು ಸ್ಥಿರವೆಂದೂ ಭಾವಿಸುವುವು. ಸ್ವಪ್ಪಾ ವಸ್ಯೆ ಯಲ್ಲಿ ಬಾಹ್ಯಂಡ್ರಿಯವ್ಯಾಪಾರಗಳು ಶಾಂತವಾಗುವುದರಿಂದ, ಅಂತಃಕರ ಇವು ಮಾತ್ರ ಸ್ವಪ್ನ ಶರೀರಾದಿಗಳನ್ನು ಸ್ಥಿರವೆಂದು ಭ್ರಮಿಸುವುದು. ಸು ಷುಪ್ತಿಯಲ್ಲಿ ಬಾಹ್ಯಾಭ್ಯಂತರಜ್ಞಾನವೆಲ್ಲವೂ ಅಡಗಿ, ಕರ ವಾಸನಾರೂಕ ವಾದ ಬೀಜವೊಂದುಮಾತ್ರ ಉಳಿದಿರುವುದು. ಈ ಸುಷುಪ್ತಿದಶೆಯೂ ಪ್ರಕೃತಿಸಂಬಂಧದಿಂದಾದ ಕಾರವೇ!ಹೀಗೆ ಜಾಗ್ರತೃ ಪ್ನ ಸುಷುಪ್ತಿಗಳೆಂಬ ಮೂರವಸ್ಥೆಗಳೊಡಗೂಡಿದ ಪ್ರತ್ಯಗಾತ್ಮನು, ಪ್ರಕೃತಿಪರಿಣಾಮರೂಪ ವಾದ ಶರೀರವನ್ನು ಬಿಟ್ಟಾಗ, ದೇಹಸಂಬಂಧಮೂಲಕವಾದ ಆಮೂರವಸ್ಥೆ ಗಳನ್ನೂ ಅತಿಕ್ರಮಿಸಿದ ಮುಕ್ತಾವಸ್ಥೆಯೆನಿಸುವುದು. ಇದೇ ನಾಲ್ಕನೆಯ 158 3