ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೩೨ ೨ ಶ್ರೀಮದ್ಭಾಗವತವು [ಅಧ್ಯಾ. ೩. ಷಗಳೇ ಮೊದಲಾದ ದೋಷಗಳನ್ನು ನೀಗಿದರೆ, ಆಗ ಶುದ್ಧವಾದ ಆ ಮನ ಸ್ಸಿನಲ್ಲಿ, ನೇತೇಂದ್ರಿಯ ಪಾಟವವುಳ್ಳವನಿಗೆ ಸೂರಪ್ರಕಾಶವು ಹೇಗೋ ಹಾಗೆ, ಅತ್ಮಸ್ವರೂಪವು ತಾನಾಗಿ ತಿಳಿಯುವುದು” ಎಂದನು. wwಕರಯೋಗಸ್ವರೂಪವು ++ ಆಮೇಲೆ ವಿದೇಹಸು & ಮಹಾತ್ಕರೆ ! ನನಗೆ ಭಗವದಾರಾಧ ನಾತ್ಮಕವಾದ ಕರಯೋಗವನ್ನು ವಿವರಿಸಿ ತಿಳಿಸಬೇಕು. ಈ ಕರ ಯೋ ಗದಿಂದ ಸಂಸ್ಕರಿಸಲ್ಪಟ್ಟವು, ಭಕ್ತಿವಿರೋಧಿಗಳಾದ ಪಾಪಪುಣ್ಯಕಮ್ಮಗ ಳೆಲ್ಲವನ್ನೂ ಕಳೆದುಕೊಂಡು, ಪರಭಕ್ತಿಯನ್ನು ಹೊಂದಬಹುದಲ್ಲವೆ ? ಹೀಗೆ ಕರದಿಂದಲೇ ಕರ ಕ್ಷಯವೆಂಬುದು ಹೇಗೆ ? ಈಗ ನಾನು ನಿಮ್ಮಲ್ಲಿ ಕೇಳುತ್ತಿರುವ ಈ ಕರಯೋಗದ ವಿಚಾರವನ್ನ, ಹಿಂದೆ ನಿಮ್ಮ ತಂದೆಯಾದ ಇಕ್ಷಾಕುವಿನ ಸಮುಖದಲ್ಲಿ, ಸನಕಾದಿಮಹ ರ್ಷಿಗಳನ್ನು ಕೇಳಿದನು. ಆ ಬ್ರಹ್ಮಪುತ್ರರು ನನಗೆ ಅದನ್ನು ತಿಳಿಸದೆ ಹೋ ದರು. ಹಾಗೆ ತಿಳಿಸದಿರುವುದಕ್ಕೆ ಕಾರಣವೇನೆಂಬುದನ್ನೂ ನನಗೆ ಹೇಳ ಬೇಕು.” ಎಂದನು. ಅದಕ್ಕೆ ಅವಿರ್ಹೊತ್ರನೆಂಬವನು “ರಾಜಾ ! ಕೇಳು ! ಕರಗಳಲ್ಲಿ ಕಾಮ್ಯಕರವೆಂದೂ, ಕೇವಲ ಜ್ಞಾನಪ್ರಧಾನವಾಗಿ ಫಲಾಪೇ ಕ್ಷೆಯಿಲ್ಲದೆ ನಡೆಸುವ ಆಕರವೆಂದೂ, ನಿಷಿದ್ಧ ಕರವೆಂದೂ ಮರುವಿ ಭಾಗಗಳುಂಟು. ಇದು ವೇದವಿಹಿತವಾದ ನಿರ್ಣಯವೇ ಹೊರತು ಲೌಕಿಕ ವಾದುದಲ್ಲ! ವೇದವೆಂಬುದು ಸತ್ಯೇಶ್ವರನ ಅಭಿಪ್ರಾಯರೂಪವೇ ಆದುದ ರಿಂದಲೂ, ಅದರಲ್ಲಿ ನಿರೂಪಿಸಲ್ಪಟ್ಟ ಈ ಕಾದಿಗಳಲ್ಲಿ ತಿಳಿಯಬೇಕಾದ ಸೂಕ್ಷಾಂಶಗಳು ಬಹಳ ದುರವಗಾಹವಾಗಿಯೂ, ವಿಶೇಷವಾಗಿಯೂ ಇರುವುದರಿಂದಲೂ, ವಿದ್ವಾಂಸರೂ ಅವುಗಳ ತತ್ವವನ್ನು ತಿಳಿಯಲಾರದೆ ಮೋಸಹೋಗುವರು, ಆದುದರಿಂದ ಆಗ ಬಾಲನಾಗಿದ್ದ ನಿನಗೆ ಸನಕಾದಿ ಮುನಿಗಳು ಅದನ್ನು ಹೇಳದೆ ಹೋದರು. ವೇದಗಳು ಮನುಷ್ಯರಿಗೆ ಹಿತಾ ಹಿತಗಳನ್ನು ತಿಳಿಸತಕ್ಕವುಗಳಾಗಿಯೇ ಇದ್ದರೂ, ಅದರಲ್ಲಿ 4 ಯಜೇತ ಸ್ವ ರ್ಗಕಾಮ” “ ಸ್ವರ್ಗಸುಖವನ್ನು ಬಯಸುವವರು ಯಾಗಮಾಡಬೇಕು” ಇತ್ಯಾದಿವಾಕ್ಯಗಳ ಅರ್ಥವು ಬಹಳ ಗೂಢವಾಗಿರುವುದು. ಈ ವಾಕ್ಯಗಳಲ್ಲಿ