೨೪೩೨
ಶ್ರೀಮದ್ಭಾಗವತವು [ಅಧ್ಯಾ. ೬. ಪ್ತಿಗೆ ವಿಷ್ಣುವನ್ನು ತರುವುವೆಂಬ ಭಾವದಿಂದ, ಆತ್ಮ ಜ್ಞಾನವುಳ್ಳರು, ಆ ಎರಡುಬಗೆಯ ಕರಗಳನ್ನೂ ಬಿಟ್ಟುಬಿಡುವರು. ಮೇಲೆ ಹೇಳಿದಂತೆ ಆವ ನಿಗೆ ಗುಣದೋಷಗ್ರಹಣಸಾಮವಿದ್ದರೂ, ಏನೂ ತಿಳಿಯದ ಸಣ್ಣ ಮಗುವಿನಂತೆ ತನ್ನ ಮಾಹಾತ್ಮವನ್ನು ಹೊರಕ್ಕೆ ಕಾಣಿಸದಹಾಗೆಯೇ ಕವಿಮುಖನಾಗಿ ಸುಮ್ಮನಿರುವನು. ಮೇಲೆ ಹೇಳಿದಂತೆ ಸತ್ವಭೂತ ಸುಹೃತ್ತಾಗಿ, ವೈರಾಗ್ಯವನ್ನು ವಹಿಸಿ, ಶಾಂತನಾಗಿ, ಪೃಥಿವ್ಯಾರಿಸಮಸ್ತ ತತ್ವಗಳ ಸಾಧ-ವೈಧರ್ಮಗಳನ್ನು ದೃಢನಿಶ್ಚಯದಿಂದ ತಿಳಿದು, ಸಮಸ್ತ ವನ್ನೂ ನನ್ನ ಸ್ವರೂಪದಿಂದ ನೋಡತಕ್ಕವನು ತಿರುಗಿ ಸಂಸಾರದಲ್ಲಿ ಸಿಕ್ಕಿ ಕಷ್ಟಪಡಲಾರನು” ಎಂದನು.
ಶ್ರೀಕೃಷ್ಣನು ಹೇಳಿದ ಈ ವಾಕ್ಯವನ್ನು ಕೇಳಿ ಉದ್ದವನು, ಅವ ನಿಂದ ಇನ್ನೂ ವಿಶೇಷವಾಗಿ ತತ್ವಜ್ಞಾನವನ್ನು ಪಡೆಯಬೇಕೆಂಬ ಕೋರಿಕೆ ಯಿಂದ, ತಿರುಗಿ ಬದ್ಧಾಂಜಲಿಯಾಗಿ ಹೀಗೆಂದು ಪ್ರಶ್ನೆ ಮಾಡುವನು. ಇದೇ ವಾ! ನೀನೇ ಅಧ್ಯಾತ್ಮ ಯೋಗಕ್ಕೆ ನಿರ್ವಾಹಕನು! ಅದನ್ನು ಪದೇತಿಸತಕ್ಕ ವನೂ, ಅದಕ್ಕೆ ಫಲಪನೂ ನೀನೇ ! ಆ ಯೋಗಶಾಸ್ತ್ರವನ್ನು ಕಲ್ಪಿಸಿ ದವನೂ ನೀನೇ ! ಪ್ರಭ : ಈಗ ನೀನು ನನಗೆ ಮೋಕ್ಷಪಾಯ ವನ್ನು ತಿಳಿಸುವುದಕ್ಕಾಗಿ, ಪ್ರತಿಫಲಾಪೇಕ್ಷೆಯಿಂದ ಮಾಡುವ ದಾನಾದಿ ಗಳಂತಲ್ಲದೆ, ಸನ್ಯಾಸರೂಪವಾದ ಸರಸಂಗಪರಿತ್ಯಾಗವನ್ನು ಉಪದೇಶಿ ಸಿದೆಯಲ್ಲವೆ ? ವಿಷಯಾಭಿಲಾಷೆಯಲ್ಲಿಯೇ ತೊಳಲುತ್ತಿರುವ ಮನಸ್ಸುಳ್ಳ ನಮ್ಮಂತವರಿಗೆ, ನೀನು ಹೇಳಿದಂತೆ ಸರಸಂಗಪರಿತ್ಯಾಗರೂಪವಾದ ಕಾ ರವು ಬಹಳಮುಷ್ಕರವೆಂದು ತೋರುವುದು. ಅದರಲ್ಲಿಯೂ ಸರಾತ್ಮಕ ನಾದ ನಿನ್ನಲ್ಲಿ ಭಕ್ತಿಯಿಲ್ಲದವರಿಗೆ, ಆ ಕಾರವು ಎಂದಿಗೂ ಸಾಧ್ಯವಲ್ಲ ವೆಂದೇ ನನ್ನ ಅಭಿಪ್ರಾಯವು. ಈಗ ನಾನಾದರೋ ನಿನ್ನ ಮಾಯೆಯಿಂದ ಕಲ್ಪಿತಗಳಾದ ದೇಹದಲ್ಲಿಯೂ, ದೇಹಾನುಬಂಧಿಗಳಲ್ಲಿಯೂ, ನಾನು ನನ್ನ ದೆಂಬ ಅಹಂಕಾರಮಮಕಾರಗಳಿಂದ, ವಿವೇಕಹೀನನಾಗಿ ಅಜ್ಞಾನ ದಲ್ಲಿ ಮುಳುಗಿರತಕ್ಕವನು. ಆದುದರಿಂದ ಈಗ ನೀನು ಹೇಳಿದ ಸತ್ಯಸಂಗ ಪರಿತ್ಯಾಗವನ್ನು ಸುಲಭವಾಗಿ ಸಾಧಿಸುವುದಕ್ಕೆ ಏನುಪಾಯವೆಂಬುದನ್ನೂ
ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೬೮
Jump to navigation
Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.
