ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

----- ಸರ್ಗ, ೨೦.] ಅಯೋಧ್ಯಾಕಾಂಡವು. ೪೨ ಕೊನೆಗಾಣದ ಮಹಾದುಃಖವೂ ಪ್ರಾಪ್ತವಾಯಿತು. ಪೂರಚಂದ್ರನಂತೆ ಕ್ಷಣ "ಈ ರಾಮನು ಹನ್ನೆರಡು ವಯಸ್ಸಿನವನು. ಅಸ್ತ್ರವಿದ್ಯೆಯನ್ನೂ ಅಭ್ಯಸಿಸಿದವನಲ್ಲ. ಯೌವನಚಿಹ್ನವಾದ ಮೀಸೆಯೂ ಆತನಿಗೆ ಇನ್ನೂ ಹುಟ್ಟಿಲ್ಲವೆಂದು ಹೇಳಿರುವನು. ಹೀಗೆ ಯೌವನಚಿಕ್ಕವೇ ಇಲ್ಲದ ಹನ್ನೆರಡು ವಯಸ್ಸಿನ ಬಾಲಕನನ್ನು,ಹದಿನಾರುವರ್ಷ ದವನೆಂದು ಹೇಗೆ ಹೇಳಬಹುದು?ಎಂದು ಕೇಳಿದರೆ, ಮಾರೀಚನು ಯುದ್ಧಭಯದಿಂದ ಭ್ರಮಿಸಿಯೋ, ಅಥವಾ ರಾವಣನಿಗೆ ಭಯವನ್ನುಂಟುಮಾಡುವುದಕ್ಕಾಗಿಯೋ, ಹೀಗೆ ಹೇಳಿರಬಹುದೇಹೊರತು, ಆತನು ನಿಜವಾದ ಅಭಿಪ್ರಾಯದಿಂದಲೇ ಹೀಗೆ ಹೇಳಿದು ದಾಗಿ ಗ್ರಹಿಸಕೂಡದು. ಹಾಗಿಲ್ಲದಿದ್ದರೆ, ತನ್ನನ್ನು ವಾಯವ್ಯಾಸ್ತದಿಂದ ಎಷ್ಟೋ ದೂರಕ್ಕೆ ಹಾರಿಸಿಬಿಟ್ಟ ರಾಮನನ್ನು ಕುರಿತು ಆಕೃತಾಸ್ತ್ರ” ಅನ್ನ ವಿದ್ಯೆಯಲ್ಲಿ ಬಳಿಕ ಯಿಲ್ಲದವನೆಂದು ಹೇಳುತ್ತಿರಲಿಲ್ಲ. ಆದುದರಿಂದ ಹದಿನಾರುವಯಸ್ಸುಳ್ಳವನನ್ನೇ ಹನ್ನೆ ರಡು ವಯಸ್ಸಿನವನೆಂದು, ಹೇಳಿರುವನು. ಬಿಲ್ಲುವಿದ್ಯೆಯಲ್ಲಿ ಬಳಕೆಯಿಲ್ಲದ ಅಂತಹ. ಬಾಲ್ಯದಲ್ಲಿಯೇ ತನ್ನನ್ನು ಹಾಗೆ ವಾಯವ್ಯಾಸದಿಂದ ತೂರಿಬಿಟ್ಟ ರಾಮನು, ಈಗ ಪ್ರವರ್ಧಮಾನನಾಗಿ, ಶಸ್ತ್ರವಿದ್ಯೆಯಲ್ಲಿ ಪಾರಂಗತನಾಗಿರುವಾಗ, ಅವನ ಪರಾಕ್ರಮವ ನ್ನು ಹೇಳಬೇಕಾದುದೇನೆಂದು.ರಾವಣನಿಗೆ ಭಯಹುಟ್ಟಿಸುವುದಕ್ಕಾಗಿಯೇ ಮಾರೀಚನು ಕಲ್ಪನೆಯಿಂದ ಪೇಳಿರಬಹುದೆಂದು ಗ್ರಹಿಸಬೇಕು.ಹಾಗೆಯೇ ಅಜಾತವ್ಯಂಜನ” ಎಂ ಬಲ್ಲಿಯೂ; ಆ ತರುಣಿಗೆ ನಡುವೇ ಇಲ್ಲವೆಂದು ಹೇಳುವಂತೆ, ಅತಿಶಯೋಕ್ತಿಯಿಂದ ಹೇಳಿದಹಾಗೆ ತಿಳಿಯಬೇಕು ಇದರಿಂದ ಯೌವನಚಿಹ್ನೆಗಳು ಆಗತಾನೇ ರಾಮನಲ್ಲಿ ಅಂ. ಕುರಿಸ:ತಿದ್ದುವೇಹೊರತು, ಪೂರ್ಣವಾಗಿ ಹುಟ್ಟಿರಲಿಲ್ಲವೆಂದು ಗ್ರಹಿಸಬೇಕು.ಮತ್ತು (ಏಕವಸ್ತ್ರಧರೋಧ ಶಿಖೀ ಕನಕಮಾಲಯಾ” ಒಂದೇ ಬಟ್ಟೆಯನ್ನುಟ್ಟು ಬಾಲಶಿಲೆ ಯನ್ನಿಟ್ಟು ಬಂದನೆಂದು ಹೇಳಿರುವುದರಿಂದ, ಬಾಲವೇಷದಲ್ಲಿರುವವನಿಗೆ ಹದಿನಾರುವಯ ಸ್ವನ್ನು ಹೇಳುವುದು ಹೇಗೆಂದು ಕೆಲವರು ಆಕ್ಷೇಪಿಸುವುದುಂಟು. ಆದರೆ ಏಕವಸ್ತ್ರ ಧರ ” ಎಂಬುದರಿಂದ ಒಂದೇ ಬಟ್ಟೆಯನ್ನು ಕಟ್ಟಿದವನೆಂದು ಅರವಲ್ಲ, ತಾನು ಧರಿಸಿ ದ ವಸ್ತ್ರಗಳನ್ನೆಲ್ಲಾ ಒಂದೇ ಗಂಟಾಗಿಮಾಡಿ ಕಟ್ಟಿಯುದ್ಧ ಸನ್ನದ್ಧನಾದನೆಂದು ಭಾವ ವುವಯಸಾ ಪಂಚವಿಂಶಕ:”ಎಂಬ ವಾಕ್ಯವು ಹೇಗೆ ಸಂಗತವಾಗುವುದೆಂದು ಕೇಳಿದರೆ ಈ ರಾಮನು ತನ್ನ ದೇಹಸೌಕುಮಾರದಿಂದ ಯಾವಾಗಲೂ ಇಪ್ಪತ್ತೈದುವಯಸ್ಸು ಕೃವನಂತೆಯೇ ಕಾಣುತ್ತಿದ್ದನೆಂದೂ ಗ್ರಾಹ್ಯವು, ನಿತ್ಯಯ್ವನವುಳ್ಳವನೆಂದು ಭಾವವು. ದೇವತೆಗಳು ಯಾವಾಗಲೂ ಇಪ್ಪತ್ತೈದು ವಯಸ್ಸುಳ್ಳವರಂತೆಯೇ ಕಾಣುವರೆಂದು ಪ್ರಸಿದ್ದಿಯಿರುತ್ತಿದ್ದರಿಂದ, ಕೌಸಿಯು 'ಗರ್ಿಕಾದಶೇಷು ರಾಜನ್ಯಂ' ಎಂಬಂತೆ