ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

'ಇಂ ಶ್ರೀಮದ್ರಾಮಾಯಣವು [ಸರ್ಗ, . ತ್ರನು ವಿನಯದಿಂದ ಕೈಮುಗಿದು, ರಾಮನನ್ನು ಕುರಿತು, ಮಾತಲಿಯು ಇಂ ದ್ರನಿಗೆ ವಿಜ್ಞಾಪಿಸುವಂತೆ ಬಹುನವ್ರಭಾವದಿಂದ ಒಂದಾನೊಂದು ಮಾ ತನ್ನು ಹೇಳುವನು. (ಎಲೈ ಯಶಸ್ವಿಯಾದ ರಾಮನೆಬಾಗಿಲಲ್ಲಿ ರಥವು ಸಿದ್ಧ ವಾಗಿರುವುದು, ಏರಬಹುದು. ನಿನಗೆ ಮಂಗಳವಾಗಲಿ!ಎಲ್ಲಿಗೆ ರಥವನ್ನು ಬಿಡ ಬೇಕೆಂದು ಅಪ್ಪಣೆಯಾದರೂ,ಅತ್ತಿಗೆ ಈಗಲೇ ಕರೆದುಕೊಂಡುಹೋಗಿ ಸೇರಿ ಸಿ ಬಿಡುವೆನು! ನೀನು ಕಾಡಿನಲ್ಲಿ ಕಳೆಯಬೇಕಾದುದು,ಹದಿನಾಲ್ಕು ವರ್ಷಗಳ ಕಾಲವೆಂದಲ್ಲವೇ ಕೈಕೇಯಿಯು ನಿಯಮಿಸಿರುವಳು? ಅದರಲ್ಲಿ ಒಂದು ದಿನದ ಮಟ್ಟಿಗೆ ಕಳೆದರೂ ಎಷ್ಟೋ ಲಾಭವಲ್ಲವೆ?ಅದನ್ನೂ ಎಷ್ಟು ಶೀಘ್ರದಲ್ಲಿ ಕಳೆ ದರೆ ಅಷ್ಟುತ್ತಮವು. ಆದುದರಿಂದ ಈಗಲೇ ಉಪಕ್ರಮಿಸಿಬಿಡು”ಎಂದನು. ಸೀತೆಯು ಇಷ್ಟರೊಳಗಾಗಿ ತನ್ನ ದೇಹವನ್ನು ಅಲಂಕರಿಸಿಕೊಂಡು ಸಿದ್ಧಳಾ ಗಿ, ಮನಸ್ಸಿನಲ್ಲಿ ಅತ್ಯುತ್ಸಾಹಗೊಂಡು,ಸೂಲ್ಯನಂತೆ ಜ್ವಲಿಸುತ್ತಿರುವ ಆರದ ದಮೇಲೆ ತಾನೇ ಮೊದಲು ಏರಿ ಕುಳಿತಳು.ಆಮೇಲೆ ಸ್ವರ್ಣಮಯವಾಗಿ ಅಗ್ನಿ ತಂದು ಭಾವವು (ಅಯೋಧ್ಯಾಮಟವೀಂ ನಿದ್ದಿ) ರಾಮನಿಗೆ ವಾಸಸ್ಥಾನವಾದ ಕಾಡಿನಲ್ಲಿ ಟಿರುವ ಅಭಿಮಾನವನ್ನೇ ಅಯೋಧ್ಯೆಯಲ್ಲಿಯೂ ಇಟ್ಟಿರು. ಎಂದರೆವನಂ ನಗರವೇ ವಾಸ್ತು ಯೇನ ಗಿತಿ ರಾಘವ:” ಎಂದು ನೀನು ಹೇಳಿರುವಂತೆ, ಈ ಅಯೋಧ್ಯಾ ನಗರವನ್ನು ಅವಮಾನಿಸಕೂಡದೆಂದು ಭಾವವು, ಮತ್ತು ಇದರಿಂದ ಮುಂದಿನ ಕೆಲವು ಕಥಾಸಂದರ್ಭಗಳೂ ಸೂಚಿತವಾಗುವುದು ಹೇಗೆಂದರೆ, “ರಾಮನನ್ನೂ ದಶರಥನಂತ `ಯೇ ತಿಳಿ.” ಎಂಬುದರಿಂದ, ದಶರಥನು ಹೆಂಡತಿಯ ಮಾತಿಗೆ ಮರುಳಾಗಿ ರಾಮನಿಗೆ ತನವಾಸವನನ್ನು ಹೇಗೆ ಆಜ್ಞಾಪಿಸಿದನೋ, ಹಾಗೆಯೇ ರಾಮನೂ ಸೀತಯ ಮಾತಿಗೆ ಮರುಳಾಗಿ ಮಾಯಾಮೃಗವನ್ನನುಸರಿಸಿ ಕಷ್ಟಕ್ಕೆ ಗುರಿಯಾಗುವನೆಂದುಭಾವವ. ಸೀತೆಯನ್ನು ನನ್ನಂತೆಯೇ ತಿಳಿ” ಎಂಬುದರಿಂದ, ನಾನು ಈಗ ನಿನ್ನನ್ನು ಕುರಿತು ರಾಮ ನು ಹಿಂಬಾಲಿಸಿಹೊಗಂಡು ನಿರ್ಬಂಧಿಸುವಹಾಗೆಯೇ, ಆ ಸೀತೆಯೂ ನಿನ್ನನ್ನು ಕುರಿತು ಮಾಯಾಮೃಗವನ್ನು ಹುಡುಕಿಕೊಂಡು ಹೋದ ರಾಮನನ್ನು ಹಿಂಬಾಲಿಸಿ ಹೋಗಂದು ನಿರ್ಬಂಧಿಸುವಳೆಂದು ಭಾವವು. 'ಈಡನ್ನೂ ಅಯೋಧ್ಯೆಯೆಂದೇ ತಿಳಿ” ಎಂಬುದರಿಂದ "ರಾಮನು ಈಗ ಅಯೋಧ್ಯೆಯನ್ನು ಬಿಟ್ಟು ಹೋದಂತೆಯೇ, ಮುಂದ ದಂಡಕಾರಕ್ಕವನ್ನು ಬಿಟ್ಟು ಬೇರೊಂದು ಕಾಡಿಗೆ ಹೊರಟುಹೋಗಬಹುದು, ಆದುದ ರಿಂದ (ರಾಮೇ ಪ್ರಮಾದಂಮಾಕಾರ್ಷಿ:) ಈ ಸಮಸ್ತ ವಿಷಯಗಳಲ್ಲಿಯೂ ನೀನು ಬಹು ಜಾಗರೂಕನಾಗಿರಬೇಕೆಂದು ಭಾವನ, (ತೆನಿಕ್ಯೂಕಿ),