ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತೆ.djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೭ ಚರಿತ್ರೆ ಅಣ್ಣನೂ ಆಮೇಲೆ ತಮ್ಮನಾದ ರಾಮಕೃಷ್ಣ ಪರಮಹಂಸರೂ ಪೂಜಾರಿಯ ಕೆಲಸವನ್ನು ವಹಿಸಬೇಕಾಯ್ತು. ಇಲ್ಲಿ ಪೂಜೆಮಾ ಡುತ್ತ ಅನನ್ಯವಾದ ಭಕ್ತಿಯಿಂದ ಜಗನ್ಮಾತೆಯ ರೂಪವಾಗಿ ಅಲ್ಲಿ ನೆಲೆಸಿದ್ದ ಭಗವಂತನನ್ನು ಸಾಕ್ಷಾತ್ಕಾರ ಮಾಡಿಕೊಂಡರು. ಇದಾದ ಮೇಲೆ ಕ್ರಮವಾಗಿ ವೈಷ್ಣವ, ವೇದಾಂತ, ಯೋಗ, ತಾಂತ್ರಿಕ, ಮಹಮ್ಮದೀಯ, ಕೆ ಸ್ತ್ರ ಮುಂತಾದ ನಾನಾಮಾರ್ಗಗಳನ್ನು ಅನು ಸರಿಸಿ ಅದೇ ಅನುಭವವನ್ನು ಪಡೆದು “ ಏಕಂಸದ್ವಿಪ್ರಾ ಬಹುಧಾ ವದಂತಿ " ಎಂಬುದನ್ನು ತಿಳಿದುಕೊಂಡರು. ಈ ಹನ್ನೆರಡುವರ್ಷ ಸಾಧನಕಾಲದಲ್ಲಿ ಅವರೊಡನೆ ಹುಟ್ಟಿದ ಗುರುಭಾವವು ಕ್ರಮೇಣ ವಿಕಸಿತವಾಗಿ ಪ್ರಫುಲ್ಲವಾಯಿತು. ಇದರಲ್ಲಿ ವಿಶೇಷವಾದ ಸಂಗತಿ ಏನೆಂದರೆ ಅವರಿಗೆ ಯಾವ ಕಾಲದಲ್ಲಿ ಯಾವ ಮಾರ್ಗವನ್ನು ಅಭಸಮಾಡಬೇಕೆಂದು ಮನಸ್ಸಿಗೆ ಬರುತ್ತಿತ್ತೋ ಆ ಕಾಲಕ್ಕೆ ತಕ್ಕಹಾಗೆ ವೇದಾಂತ ಪಂಡಿತನಾಗಲಿ, ಯೋಗಿಯಾಗಲಿ, ವಿಷ್ಣು ಭಕ್ತನಾಗಲಿ, ಶಾಜಿಯಾಗಲಿ ಬಂದು ಬಿಡುತ್ತಿದ್ದರು. ಬಂದವ ರೆಲ್ಲರೂ ಇವರು ಮಹಾತ್ಮರೆಂದೂ ಅವತಾರಪುರುಷರೆಂದೂ ಹೊಗಳಿ ತಮಗೆ ತಿಳಿದಿದನ್ನು ಸ್ವಲ್ಪ ಸೂಚಿಸುತ್ತಲೇ ಪರಮಹಂಸರು ಎಲ್ಲ ನನ್ನೂ ಗ್ರಹಿಸಿ ಬಿಡುತ್ತಿದ್ದರು. ಕೊನೆಗೆ ಗುರುಗಳೇ ಶಿಷ್ಯ ನಿಂದ ಎಷ್ಟೋ ವಿಷಯಗಳನ್ನು ಕಲಿತುಕೊಂಡು ತಾವು ಧನ್ಯರಾಗಿ ಹೊರಟುಹೋದರು. ಗುರುವೆಂದರೇನು? ಸ೦ಸಾರಸಾಗರದಿಂದ ಪಾರುಮಾಡಿ. ಮಾಯಾಪಾಶವನ್ನು ಕಡಿದುಹಾಕಿ, ನನಗೆ ಮೋಕ್ಷಮಾರ್ಗವನ್ನು ತೋರಿಸತಕ್ಕವನೇ ಗುರು. ಇಂಥವನು ಈಶ್ವರನೊಬ್ಬನೇ ಹೊರತು ಮಾಯಾಪಾಶದಲ್ಲಿ ಸಿಕ್ಕಿ ನರಳುತ್ತಿರುವ ಮನುಷ್ಯ ನೆಂದಿಗೂ ಆಗ ಲಾರನು. ಮನುಷ್ಯನು ಮನುಷ್ಯನಿಗೆ ಈ ವಿಚಾರದಲ್ಲಿ ಸಹಾಯ ಮಾಡುವುದೆಂದರೆ “ ಅಂಧೇನೈವನೀಯಮಾನಾಯಥಾಂಧಾಃ ” (ಕುರುಡನು ಕುರುಡನಿಗೆ ದಾರಿತೋರಿಸಿದಹಾಗೆ) ಎಂಬಂತಾಗುವುದು.