ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತೆ.djvu/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೮ ಶ್ರೀ ರಾಮಕೃಷ್ಣ ಪರಮಹ೦ಸ ರ ಜ್ಞಾನದಾಯಕವಾದ ಗುರುಭಾವವು ಎಂದಿಗೂ ಮಾನುಷಿಕವಲ್ಲ. ಅದು ದೈವಿಕ, ಆದ್ದರಿಂದ ಗುರುವು ಒಬ್ಬನೇ. ಆದರೆ ಆ ಗುರು ಭಾವವು ಮಾತ್ರ ಬೇರೆ ಬೇರೆ ದೇಹಗಳ ಮೂಲಕವಾಗಿ ಪ್ರಕಾಶಿತ ವಾಗಬಹುದು, ಆ ಗುರುಭಾವವು ಯಾವ ದೇಹದ ಮೂಲಕ ವ್ಯಕ್ತ ವಾಗುವುದೋ ಅದನ್ನು ಗುರುವೆಂದು ಕರೆಯುವುದು ವಾಡಿಕೆ. ಆ ಶರೀರವನ್ನು ಅವಲಂಬಿಸಿಕೊಂಡೇ ಗುರುಪೂಜೆಯನ್ನು ಮಾಡ ಬೇಕು, ಅದೇ ನನಗೆ ಶ್ರೇಯಸ್ಕರ. - ರಾಮಕೃಷ್ಣ ಪರಮಹಂಸರು ಗುರುಗಳಿಗೆ ಬೋಧಿಸಿದುದರಲ್ಲ ಹೊಸವಿಷಯವೇನು ? ಯಾರೂ ಹೇಳಿಲ್ಲದ ವಿಷಯವನ್ನು ಅವರೇನು ಹೇಳಿ ದರು ? ಎಂದು ಕೇಳಬಹುದು. ಧರ್ಮವಿಚಾರದಲ್ಲಿ ಹೊಸದಾಗಿ ಹೇಳುವುದೇನಿದೆ ? ಎಲ್ಲವೂ ಹಿಂದೆ ರಾಷ್ಟ್ರದಲ್ಲಿ ಉಕ್ತವಾಗಿರುವುರ್ದೇ : ಎಲ್ಲವೂ ಹಿಂದೆ ಅವತಾರ ಪುರುಷರು ಬೋಧಿಸಿರುವುದೇ ; “ ನರಿಗಳು ಕೂಗುವುದೆಲ್ಲ ಒಂದೇ ವಿಧ” ಎಂದು ಪರಮಹಂಸರು ಹೇಳುತ್ತಿದ್ದರು. ಮಹಾ ಪುರುಷರಾದವರು ಎಂದಿಗೂ ರಾಷ್ಟ್ರಕ್ಕೆ ವಿರುದ್ದವಾದ ಅಥವಾ ಹೊರಗಾದ ವಿಷಯಗಳನ್ನು ಬೋಧಿಸುವುದಿಲ್ಲ. ರಾಸ್ತ್ರ ಸಂಪ್ರ ವಾಯವನ್ನು ರಕ್ಷಿಸುವುದು ಅವರ ಮುಖ್ಯ ಕರ್ತವ್ಯ. ಅದೇ ಅವರ ಲಕ್ಷಣ. * ಮಹಾತ್ಮರು, ಅವತಾರಮಾಡುವುದು ಶಾಸ್ತ್ರದಲ್ಲಿಲ್ಲದ ಹೊಸ ವಿಷಯವನ್ನು ಹೇಳುವುದಕ್ಕಲ್ಲ. ಜಾಲಗುಣದಿಂದ ಧರ್ಮದ ಮೇಲೆ ಬಿದ್ದಿರುವ ದೂಳನ್ನು ತೊಡೆದು, ದೇಶಕಾಲ ಮುಂತಾದುವು ಗಳಿಂದ ಬದಲಾಯಿಸಿರುವ ನಮ್ಮ ಮನೋಭಾವಗಳಿಗೆ ತಕ್ಕಂತೆ ಆ ಹಳೆಯ ವಿಷಯವನ್ನೇ ವಿಮುಸಿ ಅದೇ ಸತ್ಯವೆಂದು ಸ್ಥಾಪಿಸುವು ವಕ್ಕೆ; ಆ ಕಾಲದಲ್ಲಿ ಉಂಟಾದ ಧರ್ಮಗ್ಲಾನಿಯ ಮೂಲಕಾರಣ ವನ್ನು ಕಿತ್ತು ಹಾಕಿ ಎಲ್ಲರಿಗೂ ದಾರಿಯನ್ನು ತೋರಿಸಿ ಮೇಲ್ಪಂಕ್ತಿ ಯಾಗಿರುವಂತೆ ತಾವು ಜೀವಿಸಿಕೊಂಡಿದ್ದು ತತ್ಕಾಲಕ್ಕೆ ಅನುಕೂಲ ವಾದ ರೀತಿಯಲ್ಲಿ ಬೋಧಿಸಿ ಹೋಗುವುದಕ್ಕೆ, } Cf, I have come to fulfil and not to destroy-Christ.