ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತೆ.djvu/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೦ ಶ್ರೀ ರಾಮಕೃಷ್ಣ ಪರಮಹಂಸರ ಇರುತ್ತಾನೆ. ಹೀಗೆ ತಾನೆ ಸಾಂಖ್ಯ ಎಂದರೆ? ಇನ್ನೇನು ? ? ಎಂದು ಹೇಳಿದರು. ಆಮೇಲೆ ವೇದಾಂತಪ್ರಸ್ತಾಪ ಬಂತು. « ವೇದಾಂತದಲ್ಲಿ ಬಹ್ಮ, ಬ್ರಹ್ಮಶಕ್ತಿ, ಪುರುಷ, ಪ್ರಕೃತಿ ಇವೆಲ್ಲ ಬೇರೆಯಲ್ಲ; ಒಂದೇ ಪದಾರ್ಥ ; ಕೆಲವು ವೇಳೆ ಪುರುಷಭಾವದಲ್ಲಿ, ಮತ್ತೆ ಕೆಲವು ವೇಳೆ ಪ್ರಕೃತಿಭಾವದಲ್ಲಿ ಇರುತ್ತದೆ. ” ಎಂದು ಹೇಳಿ ದರು. ಅದು ಎಲ್ಲರಿಗೂ ಗೊತ್ತಾಗಲಿಲ್ಲ. ಆಗ" " ಅದು ಹೇಗೆ ಅಂತ ಮಾಡಿಕೊಂಡಿದ್ದೀರಿ ? ಈಗ, ಹಾವು ಇದೆ. ಅದು ಹರಿದು ಹೋಗುತ್ತಿರುವುದೂ ಉಂಟು ; ಸುಮ್ಮನೆ ಬಿದಿರುವುದೂ ಉಂಟು. ಅದು ಸುಮ್ಮನೆ ಬಿದಿರುವಾಗ ಪುರುಷಸ್ಥಿತಿಯ ಹಾಗಾಯಿತು. ಆಗ ಪ್ರಕೃತಿಯು ಪುರುಷನೊಡನೆ ಸೇರಿ ಐಕವಾಗಿರುವುದು, ಅದು ಯಾವಾಗ ಹರಿದು ಹೋಗುತ್ತದೆಯೋ ಆಗ ಪ್ರಕೃತಿ ಇದ್ದಹಾಗೆ. ಅದು ಆಗ ಪುರುಷನಿಂದ ಬೇರೆಯಾಗಿ ಕಾರ್ಯಗಳನ್ನು ಮಾಡು ತಿರುವ ಹಾಗೆ” ಎಂದು ಹೇಳಿದರು. ಇದರಿಂದ ಪುರುಷ ಪ್ರಕೃತಿ ಗಳಿಗೆ ನಿರ್ದೋಷವಾದ ಲಕ್ಷಣವನ್ನು ಹೇಳಿದ ಹಾಗಾಗಲಿಲ್ಲ. ನಿಜ, ಆದರೆ ಇದಕ್ಕಿಂತಲೂ ಸುಲಭವಾದ ಮಾತಿನಲ್ಲಿ, ಸುಲಭ ವಾದ ರೀತಿಯಲ್ಲಿ, ಇಂಥ ವಿಚಾರಗಳನ್ನು ಸಾಮಾನ್ಯ ಜನರಿಗೆ ತಿಳಿಸುವುದು ಅಸಾಧ್ಯ.* ಆದರೆ ಅವರು ಆಡುವಮಾತು ಸುಲಭವಾಗಿ ಕಂಡರೂ ಎಷ್ಟು ಭಾವ, ಅರ್ಥಗಳಿ೦ದ ಗರ್ಭಿತವಾಗಿರುತ್ತದೆ ಎಂಬುದು ಮೊದಲುಸಾರಿ ಕೇಳಿದಾಗ ಅಥವಾ ಓದಿದಾಗ ಗೊತ್ತಾಗುವುದಿಲ್ಲ. ಎಲ್ಲರಿಗೂ ಹೆಚ್ಚು ಅರ್ಥವನ್ನು ಗ್ರಹಿಸುವುದೂ ಸಾಧ್ಯವಲ್ಲ. ಅದು ಅವರವರ ಸಾಮರ್ಥ್ಯದ ಮೇಲೆ ಹೋಗುತ್ತದೆ, ವಿವೇಕಾನಂದ ಸ್ವಾಮಿಗಳು ಒಂದುದಿನ ತಮ್ಮ ಸ್ನೇಹಿತ ರೊಬ್ಬರೊಡನೆ, ರಾಮ

  • ಈಗ ಕನ್ನಡದಲ್ಲಿ ಪ್ರಕಟವಾಗಿರುವ ಉಪದೇಶವಾ ಕ್ಯಾ ವಳಿ ಯನ್ನು ನೋಡಿದರೆ ಇಂಥ ಸಾ ನತಿಗಳು ಮತ್ತೂ ಕಥೆಗಳು ಎಷ್ಟೋ ಸಿಕ್ಕುವುವು.

===m