ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತೆ.djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚರಿತ್ರೆ ೯೬ ಮಂದಟ್ಟು ಮಾಡಿಕೊಳ್ಳ ತಕ್ಕದ್ದು. ಇವುಗಳಿಂದ ಅಹಂಕಾರ ವೃದ್ಧಿಯಾಗಿ, ದೇಹಬುದ್ದಿ ಬಲವಾಗಿ, ಮನಸ್ಸು ಹೆಚ್ಚು ಆಸೆಗೊಳ ಗಾಗಿ, ಸ್ವಾರ್ಥ ಹೆಚ್ಚಿ, ಕಾಮಿನೀಕಾಂಚನಗಳಲ್ಲಿ ಆಸಕ್ತಿ ಹುಟ್ಟುವುದು. ಪರಲೋಕಸಾಧನೆಗೆ ಅಡಚಣೆಯಾಗುವದಷ್ಟೇ ಅಲ್ಲ. ಅದರಿಂದ ಕೇವಲ ಅವನತಿ ಯೇ ಉಂಟಾಗುವುದು. ಕ್ರಮೇಣ ಅವನಲ್ಲಿದ್ದ ಶಕ್ತಿಯೂ ವೆಚ್ಚವಾಗಿ ಹೋಗಿ “ ಇತೋಭ್ರಷ್ಟ ಸ್ತ ತೋ ಭ್ರಷ್ಟ: ” ಎಂ ಬಂತಾಗುವುದು. * ಆದ್ದರಿಂದ ಈ ಸಿದ್ಧಿಗಳಿಗೆ ಗಮನಕೊಡ ದಂತೆಯ ಶ್ರದ್ದೆ ಭಕ್ತಿ ಪವಿತ್ರತೆ ವೈರಾಗ್ಯ ಚಿತ್ರಸಂಯಮ ಇವು ಗಳನ್ನು ಪಡೆದುಕೊಳ್ಳುವಂತೆಯೂ ಎಲ್ಲರಿಗೂ ಹೇಳುತ್ತಿದ್ದರು. ಅವರ ಹತ್ತಿರಕ್ಕೆ ಇಂಥ ಶಕ್ತಿಯುಳ್ಳವರಾರಾದರೂ ಬಂದರೆ ಅವರ ಕ್ಷೇಮ ಲಾಭಕ್ಕಾಗಿ ಆಶಕ್ತಿಯನ್ನು ಕಿತ್ತು ಕೊಂಡು ಬಿಡುತ್ತಿದ್ದರು. ಅಲ್ಲದೆ ನೀರಿನಮೇಲೆ ನಡೆಯುವುದು, ಬೆಂಕಿಯಮೇಲೆ ನಡೆಯುವುದು, ಒಂದು ಪ್ರಾಣಿಯನ್ನು ಸಾಯಿಸುವುದು, ಬದುಕಿಸುವುದು ಮುಂ ತಾದ ದೊಂಬರಾಟವನ್ನು ಆಡ ಬಹುದಾದ ಶಕ್ತಿಯಿಂದ ಬಂದಫಲ ವೇನು? ನೋಡತಕವರಿಗೆ ಆಶ್ಚರ್ಯವೂ ಹೊಸ ಹೊರತು ಮಾಡತಕ್ಕವನಿಗೆ ಏನೂ ಲಾಭವಿಲ್ಲ. ಯೋಗಶಕ್ತಿಯನ್ನು ಇದರ ಲ್ಲೆಲ್ಲಾ ವೆಚ್ಚ ಮಾಡತಕ್ಕವನು ಮೇರುಪರ್ವತವನ್ನೇ ಹೊತ್ತು ತರು ವುದಕ್ಕೆ ಹೋಗಿ ಒಂದು ಕಬ್ಬಿಣದ ಮೊಳೆಯನ್ನು ಹಿಡಿದು ತಂದಂ ತಾಗುವುದು. ವಿಚಾರಶೀಲವಾದ ಈಗಿನ ಕಾಲದಲ್ಲಿ ಶ್ರದ್ಧಾಭಕ್ತಿಗಳು ಬೇ ಕೆಂದು ಹೇಳಿದೊಡನೆಯೇ ಅನೇಕರು ಇದಕ್ಕೆ ಒಡಂಬಡುವುದಿಲ್ಲ. “ ಇದೆಲ್ಲಾ (Blind bclief) ಕುರುಡುನಂಬಿಕೆ, ಮೂಢಭಕ್ತಿ; ಯಾರುಯಾರು ಏನು ಏನು ಹೇಳಿದರೆ ಅದನ್ನು ಶುದ್ದಗಗ್ಗರಹಾಗೆ ನಂಬುವುದಕಾದೀತೆ ??” ಎನ್ನುವರು. ಅದನ್ನು ಸ್ವಲ್ಪ ವಿಚಾರ ಮಾಡಬೇಕು. ಮೊದಲು ಗಗ್ಗರಹಾಗೆ ನಂಬಬೇಕೆಂದು ಹೇಳಿದವ * ತೇಸಮಾಧಾನುಪಸರ್ಗಾುತ್ಥಾ ನೇ ಸಿದ್ಧಯಃ-ಯೋ, ಸೂ.