ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತೆ.djvu/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೮ ಶ್ರೀ ರಾಮಕೃಷ್ಣ ಪರಮಹ೦ಸ ರ ರಾರು ? ವಿಚಾರಮಾಡಿಯೇ ನಂಬಬಹುದು. ಸ್ವಲ್ಪ ವಿಚಾರ ಬುದ್ದಿಯೂ ಬೇಕು, ಅದಕ್ಕಾಗಿಯೇ (ವಿವೇಕಾನಂದಸ್ವಾಮಿಗಳು ಜ್ಞಾನಮಿಶ್ರವಾದ ಭಕ್ತಿಯೇ ಉತ್ತಮವೆಂದು ಬೋಧಿಸುತ್ತಿದ್ದರು. ರಾಮಕೃಷ್ಣ ಪರಮಹಂಸರೂ ಒಂದುದಿನ ತಮ್ಮ ಶಿಷ್ಯರಲ್ಲೊಬ್ಬರು ಅಜಾಗರೂಕತೆಯಿಂದ ಏನೋ ಒಂದು ತಪ್ಪು ಮಾಡಿದ್ದನ್ನು ಕಂಡು * ಭಕ್ತನಾಗಿರು ಎಂದರೆ ಗಗ್ಗ ನೇಕೆ ಆದೆಯೊ ?” ಎಂದು, ತಾವು ಹೇಗೆ ಮೂರುಹೊತ್ತೂ ದೇವರಮೇಲೆ ಮನಸ್ಸಿದ್ದರೂ ಸರ್ವಕಾರ್ಯ ಗಳಲ್ಲಿಯೂ ಜಾಗರೂಕರಾಗಿರುತ್ತಿದ್ದರೆಂದು ಬೋಧಿಸಿದರಂತೆ. ಈ ಸಂದರ್ಭದಲ್ಲಿಯೇ “ ಯಾವಾಗಲೂ ವಿಚಾರಮಾಡುತ್ತಿರಬೇಕು. ಯಾವುದು ಸತ್ಸ ದಾರ್ಥ, ಯಾವುದು ಅಸತ್ಪದಾರ್ಥ, ಯಾವುದು ನಿತ್ಯ, ಯಾವುದು ಅನಿತ್ಯ ಎಂದು ವಿಚಾರಮಾಡುತ್ತಾ, ಅನಿತ್ಯ, ವಾದುವುಗಳನ್ನು ತ್ಯಜಿಸುತ್ತ, ನಿತ್ಯವಾದುವುಗಳಮೇಲೆ ಮನಸ್ಸಿ ಡುತ್ತಾ ಬರಬೇಕು” ಎಂದು ಹೇಳುತ್ತಿದ್ದರು. ಆದ್ದರಿಂದ ವಿಚಾರ ಬುದ್ದಿಯೇನೋ ಆವಶ್ಯಕ. ಆದರೆ ಆಧ್ಯಾತ್ಮಿಕ ವಿಚಾರಗಳಲ್ಲಿ ಮಾತ್ರ ವಿಚಾರಮಾಡುತ್ತ ಹೋದರೆ ಕೊನೆಮೊದಲಿಲ್ಲದೇ ಹೋಗು ತದೆ. ಅನೇಕ ಸಂರಯಗಳು ಹುಟ್ಟಿ ಅವು ಪರಿಹಾರವಾಗುವುದೇ ಇಲ್ಲ. “ ಮದುವೆಯಾದ ಹೊರತು ಹುಚ್ಚು ಬಿಡದು ಹುಚ್ಚು ಬಿಟ್ಟ ಹೊರತು ಮದುವೆಯಾಗದು” ಎಂಬುದೊಂದು ಗಾದೆಯುಂಟು. ಹಾಗೆ ಈ ಸಂಶಯ ನಿವಾರಣೆಯಾದ ಹೊರತು ನಮಗೆ ಶ್ರದ್ದಾ ಭಕ್ತಿಗಳು ಹುಟ್ಟುವಹಾಗಿಲ್ಲ. ಶ್ರದ್ಧಾಭಕ್ತಿಗಳು ಹುಟ್ಟಿದಹೊರತು ಜ್ಞಾನ ಸಂಪಾದನೆಯಾಗುವಹಾಗಿಲ್ಲ, ಜ್ಞಾನವುಂಟಾಗಿ ಇ೦ದ್ರಿಯಾ ತೀತವಾದ ಪರಬ್ರಹ್ಮವಸ್ತುವಿನ ಅನುಭವವಾದ ಹೊರತು ಸಂಶಯ ಗಳು ದೂರವಾಗುವುದಿಲ್ಲ.* ಇದರ ಮೇಲೆ “ ಕುರುಡುನಂಬಿಕೆ " ಜ್ಞಾನಸಂ ಛಿನ್ನ ಸ೦ಶಯ೦ಗೀತಾ. ಭಿದ್ಯತೆ ಹೃದಯಗ್ರಂಥಿ ಶಿದ್ಯ೦ತೆ ಸರ್ವ ಸ೦ಶಯಾಃ | • • • • ತನದೃಷ್ಟ ಪರಾವರೆ-ಮುಂಡಕೋಪನಿಷತ್ತು.

  • - * - - ---